ಬೇಡಿಕೆ ಈಡೇರಿಸಲು ಪೌರಕಾರ್ಮಿಕರ ಆಗ್ರಹ

KannadaprabhaNewsNetwork |  
Published : Apr 28, 2025, 11:50 PM IST
ತೇರದಾಳ ಪುರಸಭೆ ಪೌರಕಾರ್ಮಿಕರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ತೇರದಾಳ: ತಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಪೌರ ಕಾರ್ಮಿಕರು ಸೋಮವಾರ ಪುರಸಭೆಯ ಮುಖ್ಯಾಧಿಕಾರಿ, ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ತಮ್ಮ ನ್ಯಾಯಯುತ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಪೌರ ಕಾರ್ಮಿಕರು ಸೋಮವಾರ ಪುರಸಭೆಯ ಮುಖ್ಯಾಧಿಕಾರಿ, ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪೌರಕಾರ್ಮಿಕ ಮಂಜುನಾಥ ರಾಯಣ್ಣವರ, ರವಿ ಬನಸೋಡೆ ಮತ್ತು ದಯಾನಂದ ಮಾಂಗ ಮಾತನಾಡಿ, ರಾಜ್ಯ ಸರ್ಕಾರ ಪೌರಕಾರ್ಮಿಕರನ್ನು, ನೀರು ಸರಬರಾಜು ಕಾರ್ಮಿಕರನ್ನು ಹಾಗೂ ಕಸ ಸಂಗ್ರಹ ವಾಹನ ಚಾಲಕರನ್ನು ಕಾಯಂಗೊಳಿಸುವ ಮೂಲಕ ಸರ್ಕಾರವೇ ನೇರ ವೇತನ ಪಾವತಿಸಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಧರಣಿ ಆರಂಭವಾಗಲಿದೆ ಎಂದು ಹೇಳಿದರು. ಪ್ರತಾಪ ಕೊಡುಗೆ, ರವಿ ರೋಡಕರ, ಘಟಿಗೆಪ್ಪ ಕುಂಬಾರ, ರಘು ಗೋಠಡಕಿ, ಶಂಭು ಮಾಸ್ತಿ, ಅಶೋಕ ನಡುವಿನಕೇರಿ, ಮಶ್ಚೇಂದ್ರ ಗೋಠಡಕಿ, ಭರತೇಶ ಗುಡಕ್ಕನವರ, ಸುನೀಲ ಬಾಂವಿ, ಸಿದ್ದು ಮಾಂಗ, ಅಶೋಕ ಆಲಕನೂರ, ಭಾರತಿ ಮಾಸ್ತಿ, ಶೋಭಾ ಮಾಂಗ, ಗೌರವ್ವ ಮಾಸ್ತಿ, ಶೋಭಾ ಮಾಸ್ತಿ, ರೇಣುಕಾ ಸಿಂಗೆ, ಸಪ್ನಾ ಮಾಸ್ತಿ, ಕಾಂತವ್ವ ಬಿದರಿ ಸೇರಿದಂತೆ ಪೌರಕಾರ್ಮಿಕರು, ನೀರು ಸರಬರಾಜು ಕಾರ್ಮಿಕರು, ವಾಹನ ಚಾಲಕರು ಹಾಗೂ ವಿದ್ಯುತ್ ಸರಬರಾಜು ಕಾರ್ಮಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!