ಹಾನಗಲ್ಲ ತಾಲೂಕಿನ 42 ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ

KannadaprabhaNewsNetwork |  
Published : May 18, 2025, 01:47 AM IST
ಫೋಟೋ : 17ಎಚ್‌ಎನ್‌ಎಲ್2 | Kannada Prabha

ಸಾರಾಂಶ

ಪ್ರತಿ ಮೂರನೇ ಶನಿವಾರ ಹಾನಗಲ್ಲ ತಾಲೂಕಿನ 42 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಆರಂಭವಾಗಿದ್ದು, ಇದು ನಿರಂತರವಾಗಿ ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ತಿಳಿಸಿದರು.

ಹಾನಗಲ್ಲ: ಪ್ರತಿ ಮೂರನೇ ಶನಿವಾರ ತಾಲೂಕಿನ 42 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ತಾಪಂ ಹಾಗೂ ಗ್ರಾಪಂ ನೌಕರರ ಪಾಲ್ಗೊಳ್ಳುವಿಕೆ ಮೂಲಕ ಆರಂಭವಾಗಿದ್ದು, ಇದು ನಿರಂತರವಾಗಿ ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ತಿಳಿಸಿದರು.

ಹಾನಗಲ್ಲ ಪಟ್ಟಣದಲ್ಲಿ ಪ್ರತಿ ಬುಧವಾರ ನಗರದ ಸ್ವಚ್ಛತೆಗೆ ವಿವಿಧ ಇಲಾಖೆಗಳ ನೌಕರರು ಹಾಗೂ ಸದಸ್ಯರು ಜತೆಗೂಡಿ ಸ್ವಚ್ಛತೆ ಆಭಿಯಾನ ನಡೆಸಿದ್ದರು. ಹಾನಗಲ್ಲ ಪುರಸಭೆ 25 ವಾರಗಳನ್ನು ಪೂರೈಸಿ ಈ ಕಾರ್ಯಕ್ರಮವನ್ನು ಒಂದು ವರ್ಷದ ಅವಧಿ ವರೆಗೆ ಮುಂದುವರಿಸಿದೆ. ಶಾಸಕ ಶ್ರೀನಿವಾಸ ಮಾನೆ ಅವರ ಗ್ರಾಮಗಳ ಸ್ವಚ್ಛತಾ ಕಳಕಳಿ ಹಾಗೂ ಸೂಚನೆ ಮೇರೆಗೆ ಇಡೀ ತಾಲೂಕಿನ ಎಲ್ಲ 42 ಗ್ರಾಮ ಪಂಚಾಯಿತಿಗಳಲ್ಲಿ ಈ ಸ್ವಚ್ಛತಾ ಆಭಿಯಾನ ಆರಂಭಿಸಲು ಮಾಡಿದ ಮನವಿಯಂತೆ ಇದೇ ಮೂರನೇ ಶನಿವಾರ ಇಡೀ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಗ್ರಾಪಂ ನೌಕರರು ಹಾಗೂ ಸದಸ್ಯರು ಪಾಲ್ಗೊಂಡರು.

ತಾಲೂಕಿನಲ್ಲಿ 630 ಗ್ರಾಪಂ ನೌಕರರು, 600 ಗ್ರಾಪಂ ಸದಸ್ಯರಿದ್ದಾರೆ. ವರ್ಷವಿಡೀ ಪ್ರತಿ 3ನೇ ಶನಿವಾರ ಸಾರ್ವಜನಿಕರ ಸಹಭಾಗಿತ್ವದಲ್ಲಿ ಗ್ರಾಮಗಳ ಸ್ವಚ್ಛತಾ ಕಾರ್ಯಕ್ಕೆ ಮುಂದಾದರೆ ಇಡೀ ತಾಲೂಕಿನಲ್ಲಿ ಸ್ವಚ್ಛತಾ ಅರಿವು ಮೂಡುವುದು ಖಚಿತ ಎಂಬ ಅಭಿಪ್ರಾಯವಿದೆ.ಶಾಸಕರ ನಿರ್ದೇಶನವೂ ಒಳಗೊಂಡು ಇಡೀ ತಾಲೂಕಿನಲ್ಲಿ ಸ್ವಚ್ಛತಾ ಅರಿವು ಮೂಡಿಸುವುದು ಹಾಗೂ ನೌಕರರ ಪಾಲ್ಗೊಳ್ಳುವಿಕೆಯಿಂದ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದಂತಾಗುತ್ತದೆ. ನಮ್ಮ ಪರಿಸರ ನಾವು ಸ್ವಚ್ಛವಾಗಿಟ್ಟುಕೊಳ್ಳಲು ಪ್ರೋತ್ಸಾಹಿಸುವುದು ಇದರ ಉದ್ದೇಶ. ನಾವು ಪಾಲ್ಗೊಂಡು ಜಾಗೃತಿ ಮೂಡಿಸಿದರೆ ಅದು ಫಲಪ್ರದವಾಗಬಲ್ಲದು ಎಂಬ ಆಶಯವಿದೆ. ಇಂದು ಇಡೀ ತಾಲೂಕಿನ ಎಲ್ಲ ಗ್ರಾಪಂ ನೌಕರರು ಪಾಲ್ಗೊಂಡಿರುವುದು ಅತ್ಯಂತ ಹರ್ಷದ ಸಂಗತಿ ಎಂದು ಹಾನಗಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಹೇಳಿದರು. ಹಾನಗಲ್ಲ ಪಟ್ಟಣದಲ್ಲಿ ವಿವಿಧ ಇಲಾಖೆ ನೌಕರರು ಜನಪ್ರತಿನಿಧಿಗಳು ಸ್ವಚ್ಛತಾ ಆಭಿಯಾನದಲ್ಲಿ ಪಾಲ್ಗೊಂಡುದುದನ್ನು ಗ್ರಾಪಂಗಳಿಗೆ ವಿಸ್ತರಿಸಲು ವಿನಂತಿಸಿದ ಮೇರೆಗೆ ಗ್ರಾಪಂ ನೌಕರರು ಸ್ವಇಚ್ಛೆಯಿಂದ 42 ಗ್ರಾಪಂಗಳಲ್ಲಿ ಪಾಲ್ಗೊಂಡಿದ್ದಾರೆ. ಇದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿದು ಇಡೀ ತಾಲೂಕಿನಲ್ಲಿ ಸ್ವಚ್ಛತಾ ಆಂದೋಲನವೇ ಆಗಬೇಕಾಗಿದೆ. ಇದು ಅರ್ಥಪೂರ್ಣವಾಗಿ ನಡೆಯುತ್ತದೆ ಎಂಬ ಭರವಸೆ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!
ರೈತರ ಯೂರಿಯಾ ಕದ್ದು ತಮಿಳ್ನಾಡಿಗೆ ಸಾಗಣೆ ದಂಧೆ ಪತ್ತೆ