ಹನೂರು ತಾಲೂಕಿನ ಉಡುತೊರೆ ಜಲಾಶಯದ ಎಡ ಮತ್ತು ಬಲ ಭಾಗದ ಕಾಲುವೆಗಳಲ್ಲಿ ತುಂಬಿರುವ ರಾಡಿ ಮತ್ತು ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ ನೀರಾವರಿ ಭಾಗದ ರೈತರಿಗೆ ನಾಲೆಯಲ್ಲಿ ನೀರು ಬಿಡುವ ಮೂಲಕ ಅನುಕೂಲ ಕಲ್ಪಿಸಬೇಕು.
ಕನ್ನಡಪ್ರಭ ವಾರ್ತೆ ಹನೂರು
ಉಡುತೊರೆ ಜಲಾಶಯದ ನಾಲೆಗಳಲ್ಲಿ ರಾಡಿ ಗಿಡಗಂಟೆಗಳು ತೆರವುಗೊಳಿಸಿ, ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ವತಿಯಿದ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಹನೂರು ತಾಲೂಕಿನ ಉಡುತೊರೆ ಜಲಾಶಯದ ಎಡ ಮತ್ತು ಬಲ ಭಾಗದ ಕಾಲುವೆಗಳಲ್ಲಿ ತುಂಬಿರುವ ರಾಡಿ ಮತ್ತು ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ ನೀರಾವರಿ ಭಾಗದ ರೈತರಿಗೆ ನಾಲೆಯಲ್ಲಿ ನೀರು ಬಿಡುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಹನೂರು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಬಹು ನಿರೀಕ್ಷಿತ ಕೋಟ್ಯಂತರ ರು. ವೆಚ್ಚದ ಉಡುತೊರೆ ಜಲಾಶಯದ ನೀರಿನ ಸಂಗ್ರಹಣಾ ವ್ಯವಸ್ಥೆ ಮಾಡುವುದು ಜೊತೆಗೆ ಈ ಭಾಗದ ರೈತರ ಜಮೀನುಗಳಿಗೆ ನಾಲೆಗಳ ಮುಖಾಂತರ ನೀರು ಹರಿಸುವ ಮೂಲಕ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಗಳಲ್ಲಿ ಹಲವಾರು ವರ್ಷಗಳಿಂದ ತುಂಬಿರುವ ರಾಡಿ ಮತ್ತು ಗಿಡಗಂಟೆಗಳನ್ನು ತೆರವುಗೊಳಿಸಿ, ಜನ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ಯೋಜನೆ ಸದ್ಬಳಕೆಗೆ ಕ್ರಮ ಕೈಗೊಳ್ಳಬೇಕು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಗೌಡೆ ಗೌಡ ಮಾತನಾಡಿ, ನೂರಾರು ಕೋಟಿ ವೆಚ್ಚ ಮಾಡಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಾಣ ಮಾಡಲಾಗಿರುವ ಉಡುತೊರೆ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಜನಪ್ರತಿನಿಧಿ ಅಧಿಕಾರಿಗಳು ಕೂಡಲೇ ನಾಲೆಗಳಲ್ಲಿರುವ ರಾಡಿ ಮತ್ತು ಕಸಕಡ್ಡಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ನಾಲೆಗಳಲ್ಲಿ ರೈತರ ಜಮೀನುಗಳಿಗೆ ಕೆರೆಕಟ್ಟೆಗಳಿಗೆ ತಲುಪಲು ಇದರಿಂದಾಗಿ ಈ ಭಾಗದ ರೈತರ ಪಂಪ್ಸೆಟ್ ಕೊಳವೆಬಾವಿಗಳಲ್ಲೂ ಅಂತರ್ಜಲ ವೃದ್ಧಿಯಾಗುವುದರ ಜೊತೆಗೆ ಅನುಕೂಲವಾಗಲಿದೆ ಕೂಡಲೇ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ರಾಡಿ ಮತ್ತು ಗಿಡಗಂಟೆ ತೆರವುಗೊಳಿಸಿ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗೌರವ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಪಳನಿಸ್ವಾಮಿ, ಗ್ರಾಮ ಘಟಕದ ಅಧ್ಯಕ್ಷ ಬಸವರಾಜ್ ರೈತ ಮುಖಂಡರಾದ ವೆಂಕಟೇಶ್, ವಿಜಯಕಾಂತ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.