- ಹೈಡ್ರಾಮ ನಡುವೆ ಅಂಗಡಿ,ಹೋಟೇಲುಗಳ ತೆರವು । ಪೋಲೀಸ್ ಬಂದೋ ಬಸ್ತ್,ಧರಣಿ । 12 ಮಂದಿ ಪೊಲೀಸ್ ವಶಕ್ಕೆ
ಪಟ್ಟಣದ ಗಾಂಧಿ ಮೈದಾನದಲ್ಲಿ ಇದ್ದ ಸುಮಾರು 27 ಅಂಗಡಿ, ಹೋಟೇಲುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಪಡೆಗಳ ಸಹಾಯದಿಂದ ಗುರುವಾರ ತೆರವುಗೊಳಿಸಿ ತಮ್ಮ ಸುಪರ್ದಿಗೆ ಪಡೆದರು.
ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಬೆಳಿಗ್ಗೆಯೇ ಅಂಗಡಿಗಳ ತೆರವಿಗೆ ಕಾರ್ಯಪ್ರವೃತ್ತರಾಗಿ ಹೆಚ್ಚುವರಿ ಪೊಲೀಸ್ ಪಡೆ ನೆರವಿನೊಂದಿಗೆ ಮುಂದಾಗಿ 1 ಗಂಟೆಯೊಳಗೆ ತಮ್ಮ ಅಂಗಡಿಗಳನ್ನು ತೆರವುಗೊಳಿಸಿ ಕೊಡುವಂತೆ ಅಧಿಕಾರಿಗಳು ವ್ಯಾಪಾರಿಗಳಿಗೆ ಗಡುವು ನೀಡಿದ್ದರು. ಕೆಲವರು ತಮ್ಮ ಅಂಗಡಿ ಗಳಲ್ಲಿದ್ದ ವಸ್ತು, ಛಾವಣಿ, ಸರಕುಗಳನ್ನು ತೆರವುಗೊಳಿಸ ತೊಡಗಿದರು. ಆದರೆ ಇನ್ನು ಕೆಲವರು ವಿರೋಧಿಸಿ ಪ್ರತಿಭಟಿಸತೊಡಗಿದರು. ಅಂಗಡಿ, ಹೋಟೆಲು ನಡೆಸುತ್ತಿದ್ದ ಕೆಲ ಮಹಿಳೆಯರು ಮಕ್ಕಳೊಂದಿಗೆ ಧರಣಿ ಕುಳಿತರು. ಸುಮಾರು 50ಕ್ಕೂ ಹೆಚ್ಚು ಮಹಿಳೆಯರು, ಕೆಲಸಗಾರರು ತಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.ಇದರಿಂದ ಮಧ್ಯಾಹ್ನದ ವರೆಗೂ ಅಧಿಕಾರಿಗಳು, ಅಂಗಡಿ ಮಾಲೀಕರು, ಕೆಲ ಸಂಘಟನೆಗಳ ಮುಖಂಡರೊಂದಿಗೆ ವಾಗ್ವಾದ ಮುಂದುವರಿಯಿತು. ನ್ಯಾಯಾಲಯದ ಆದೇಶ ತೋರಿಸುವಂತೆ ಪಟ್ಟು ಹಿಡಿದ ವ್ಯಾಪಾರಿಗಳು ಪ್ರಕರಣ ನ್ಯಾಯಾಲಯ ದಲ್ಲಿದ್ದು, ಸ್ವಲ್ಪ ಕಾಲಾವಕಾಶ ನೀಡಲು ಮನವಿಯನ್ನು ಮಾಡಿದರು.
ಜೆಸಿಬಿ ಹೊರಡುತ್ತಿದ್ದಂತೆ ಧರಣಿ ನಿರತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಭಾರೀ ಪ್ರತಿರೋಧ ವ್ಯಕ್ತವಾಗುತ್ತಿ ದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರು ಸುಮಾರು 12ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ನಂತರ ಸುಮಾರು 27 ಅಂಗಡಿ, ಹೋಟೇಲುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.
ಪ್ರಕರಣ ಹಿನ್ನೆಲೆ:
ಪಟ್ಟಣ ಪಂಚಾಯಿತಿಯಿಂದಲೇ ಅಂಗಡಿ ತೆರವಿಗೆ ಮುಂದಾದ ಸಂದರ್ಭದಲ್ಲಿ ಕೆಲ ವರ್ತಕರು ಉಚ್ಚನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ಇದರಿಂದ ಅಂಗಡಿ ಹೋಟೇಲುಗಳು ವ್ಯಾಪಾರ ವಹಿವಾಟು ಮುಂದುವರಿದಿತ್ತು.
ಆದರೆ ಪಟ್ಟಣಪಂಚಾಯ್ತಿಗೆ ಸೇರಿದ್ದಾಗ ತಂದಿದ್ದ ತಡೆಯಾಜ್ಞೆ ಈಗ ಅನ್ವಯವಾಗದಿದ್ದರಿಂದ ಮತ್ತೆ ಗುರುವಾರ ಇಲಾಖೆ ಅಂಗಡಿ ತೆರವು ಕಾರ್ಯಾಚರಣೆ ಆರಂಭಿಸಿತು. ಆದರೆ ಅದೇ ತಡೆಯಾಜ್ಞೆ ಇದೇ ಎಂದೆ ವ್ಯಾಪಾರಸ್ಥರು ಹೇಳಿ ಕಾರ್ಯಾ ಚರಣೆಗೆ ಅಡ್ಡಿಪಡಿಸಿದರು.
-- ಕೋಟ್--
-ರಾಜೇಶ್, ವರ್ತಕ
----ಬಾಕ್ಸ್-
ಬದುಕಿನ ಆಸರೆ ಕಸಿದುಕೊಂಡಿದ್ದಾರೆನಾವು ಹಲವು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬದುಕು ಸಾಗಿಸಿಕೊಂಡು ಬರುತ್ತಿದ್ದೆವು. ಇದು ಜೀವನೋಪಾಯಕ್ಕೆ ದಾರಿಯಾಗಿತ್ತು. ಪ್ರವಾಸಿ ತಾಣವಾದ ಶೃಂಗೇರಿಗೆ ಬರುವ ಪ್ರವಾಸಿಗರಿಂದ ಆಗುವ ವ್ಯಾಪಾರದಿಂದ ನಮ್ಮ ಬದುಕು ಸಾಗುತ್ತಿತ್ತು. ನಮ್ಮ ಬದುಕು, ಮಕ್ಕಳ ಶಿಕ್ಷಣಕ್ಕೆ ಆಧಾರವಾಗಿತ್ತು. ಈಗ ಏಕಾ ಏಕಿ ನಮಗೆ ಇಲ್ಲಿಂದ ತೆರವುಗೊಳಿಸಿ ಬೀದಿಗೆ ತಳ್ಳಿದ್ದಾರೆ. ಜೀವನೋಪಾಯಕ್ಕೆ ಮುಂದೇನು ಮಾಡುವುದು ಎಂಬ ಚಿಂತೆ ನಮಗೆ ಕಾಡುತ್ತಿದೆ. ನಮ್ಮ ಸಮಸ್ಯೆ ಪರಿಹರಿಸಬೇಕು ಎಂದು ಧರಣಿ ನಿರತ ಮಹಿಳೆಯರು ಆಗ್ರಹಿಸಿದರು.
16 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದಲ್ಲಿನ ಗಾಂಧಿ ಮೈದಾನದಲ್ಲಿ ಅಂಗಡಿ ಹೋಟೆಲುಗಳನ್ನು ತೆರವುಗೊಳಿಸಿರುವುದು,
16 ಶ್ರೀ ಚಿತ್ರ 2-ಕಂದಾಯ,ಪೋಲೀಸ್ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಉಂಟಾದ ವಾಗ್ವಾದ.ತಳ್ಳಾಟ