ದಾಬಸ್ಪೇಟೆ: ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಮತ್ತು ಮರಸರಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ನಕಾಶೆ ರಸ್ತೆ ತೆರವು ಕಾರ್ಯಾಚರಣೆ ನಡೆದಿದೆ.
ಕಾಂಗ್ರೆಸ್ ಮುಖಂಡ ಜಯರಾಮ್ ಮಾತನಾಡಿ, ಕಳೆದ 10 ವರ್ಷಗಳಿಂದ ಯಾರೂ ಸಹ ತೆರವು ಮಾಡಲು ಮುಂದಾಗಿರಲಿಲ್ಲ. ಶಾಸಕ ಶ್ರೀನಿವಾಸ್ ಅವರ ಬೆಂಬಲ ಹಾಗೂ ತಾಲೂಕು ಆಡಳಿತದ ಆದೇಶದಂತೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ನಿಂತು ದಶಕಗಳ ಬೇಡಿಕೆಯನ್ನು ಈಡೇರಿಸಿಕೊಂಡಿದ್ದೇವೆ. ಯಂಟಗಾನಹಳ್ಳಿಯಿಂದ ಮರಸರಹಳ್ಳಿ ರಸ್ತೆ ಸಂಪರ್ಕ ಕಲ್ಪಿಸುವ ಸಂಬಂಧ ಆ ಭಾಗದ ರೈತರನ್ನು ಮನವೊಲಿಸಿ, ಪೂರ್ಣ ಪ್ರಮಾಣದ ಸುಸಜ್ಜಿತ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ತೆರವು ಕಾರ್ಯಾಚರಣೆಯಲ್ಲಿ ಜಿಪಂ ಮಾಜಿ ಸದಸ್ಯ ಸಂಪತ್ ಬಾಬು, ಚಿಕ್ಕಣ್ಣಸ್ವಾಮಿ, ಹನುಮಂತಯ್ಯ, ಭಟ್ಟರಹಳ್ಳಿ ಚೆನ್ನಕೇಶವ, ಕೇಶವಮೂರ್ತಿ, ಚಿಕ್ಕರಂಗಯ್ಯ, ಅನಿಲ್ ಕುಮಾರ್, ರಂಗಧಾಮಯ್ಯ, ಶಿವಕುಮಾರ್, ಹನುಮಂತರಾಜು, ರಮೇಶ್ ಹಾಗೂ ಯಂಟಗಾನಹಳ್ಳಿ ಮತ್ತು ದೊಡ್ಡಕರೇನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.ಕೋಟ್................
-ಚಿಕ್ಕಹನುಮೇಗೌಡ, ಕಾಂಗ್ರೆಸ್ ಮುಖಂಡರು
ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಮತ್ತು ಮರಸರಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ನಕಾಶೆ ರಸ್ತೆಯ ತೆರವು ಕಾರ್ಯಾಚರಣೆ.