ಚನ್ನಗಿರಿ: ಬೆಳಗಾವಿಯ ಸುವರ್ಣಸೌಧದ ಬಳಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಹತ್ತಿಕ್ಕಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಾಠಿ ಪ್ರಹಾರ ನಡೆಸಿದೆ. ಸಮುದಾಯದ ಅಮಾಯಕ 25 ಜನರ ಮೇಲೆ ಮೊಕದ್ದಮೆ ದಾಖಲಿಸಿರುವುದು ಖಂಡನೀಯ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅ ಸಾರ್ವಜನಿಕವಾಗಿ ಸಮುದಾಯದ ಕ್ಷಮೆ ಕೇಳಬೇಕು ಎಂದು ತಾಲೂಕು ಪಂಚಮಸಾಲಿ ಸಮುದಾಯದ ಅಧ್ಯಕ್ಷ ಹಿರೇಉಡ ಎಂ.ಆರ್. ಬಸವರಾಜಪ್ಪ ಹೇಳಿದರು.
ಇದೇ ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಸಮುದಾಯದ ಸುಮಾರು 12 ಶಾಸಕರಿದ್ದಾರೆ. ಈ ಬಗ್ಗೆ ಏನೂ ಮಾತನಾಡದೇ ಇರುವುದು ದುರದೃಷ್ಟಕರ ಸಂಗತಿ. ಚುನಾವಣೆ ಸಂದರ್ಭದಲ್ಲಿ ಮಾತ್ರ ಸಮುದಾಯ ನೆನಪಿಸಿಕೊಳ್ಳುವ ನಾಯಕರು ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಜೊತೆ ನಿಲ್ಲಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ಸಮಾಜದ ಜನರು ನೀಡಲಿದ್ದಾರೆ ಎಂದರು.
ಸಮಾಜದ ಪ್ರಮುಖರಾದ ಗಂಗಾಧರ, ಟಿ.ಜನಗದೀಶ್, ರಾಜಪ್ಪ, ಬಸವರಾಜಪ್ಪ, ಬಸೇಟಪ್ಪ, ಜ್ಯೋತಿಪ್ರಸಾದ್. ಮಂಜುನಾಥ್ ಹಾಜರಿದ್ದರು.