ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಎಂಜಿವಿಸಿ ಕಾಲೇಜಿನ ಆವರಣದಲ್ಲಿನ ಹೆಲಿಪ್ಯಾಡ್, ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಜರುಗುವ ಬೃಹತ್ ಕಾರ್ಯಕ್ರಮದ ವೇದಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮುಖ್ಯಮಂತ್ರಿಗಳ ಆಗಮನದ ಮಹಾದ್ವಾರ ಬಳಿ ಸಾರ್ವಜನಿಕರು ಹಾಗೂ ಯಾವುದೇ ಖಾಸಗಿ ವಾಹನಗಳು ನಿಲ್ಲದಂತೆ ಸಂಪೂರ್ಣ ಬಿಗಿ ಬಂದೋಬಸ್ತ್ ಒದಗಿಸಬೇಕು. ಮತಕ್ಷೇತ್ರದಿಂದ ಕಾರ್ಯಕ್ರಮ ಬರುವ ಸಾರ್ವಜನಿಕರ ಪ್ರತ್ಯೇಕ ಮಹಾದ್ವಾರ ನಿರ್ಮಿಸುವುದರ ಜೊತೆಗೆ ಸುತ್ತಲು ಬ್ಯಾರಿಕೇಡ್ ಅಳವಡಿಸಬೇಕು ಎಂಬುವುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಿದರು.
ಈ ವೇಳೆ ಸಿಪಿಐ ಮಲ್ಲಿಕಾರ್ಜುನ ತಳಸಿಗೇರಿ, ತಹಶೀಲ್ದಾರ ಬಲರಾಮ ಕಟ್ಟಿಮನಿ, ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿ, ಕ್ರೈಂ ಪಿಎಸೈ ಮನ್ನಾಬಾಯಿ ಇತರರು ಇದ್ದರು.