ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹಾಲಹಳ್ಳಿ ಬಳಿಯ ಆಣೆಕಟ್ಟು ಹಾಗೂ ಶಿವಪುರ ಬಳಿ ಕಲ್ಕಟ್ಟೆ ಕೆರೆ ಅಭಿವೃದ್ಧಿಗೆ ತಲಾ ಒಂದು ಕೋಟಿ ರು. ವೆಚ್ಚದ ಅನುದಾನದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, 110 ಕೆರೆ ಯೋಜನೆಗಳಿಗೆ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ನಾನು ಶಾಸಕನಾದ ಬಳಿಕ ಕ್ಷೇತ್ರಕ್ಕೆ ಸರಿ ಸುಮಾರು ₹೧೫೦ ಕೋಟಿ ಅನುದಾನ ಬಂದಿದೆ. ಕೆಲವು ಟೆಂಡರ್ ಹಂತದಲ್ಲಿವೆ. ಆದರೂ ವಿಪಕ್ಷದವರು ವಿನಾಕಾರಣ ಟೀಕೆ ಮಾಡ್ತಾವ್ರೆ, ಕ್ಷೇತ್ರದಲ್ಲಿನ ಕೆಲಸ ಕಂಡು ಸಹಿಸದೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳು ಹಾಳಾಗಿವೆ. ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ ₹೨೫ ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸಚಿವರು ಕೂಡ ಸ್ಪಂದಿಸಿ ಅನುದಾನ ಬಿಡುಗಡೆಗೆ ಮಾತನಾಡಿದ್ದಾರೆ ಎಂದರು.₹೧೨ ಕೋಟಿ ಬರ್ತಿದೆ:
ಸಾಮಾನ್ಯ ಜ್ಞಾನ ಇಲ್ಲ: ಮಾಜಿ ಶಾಸಕರು ಹಿರೀಕಾಟಿ ರಸ್ತೆ ವಿಚಾರದಲ್ಲಿ ಬಂದು ನಮ್ಮೂರಿನ ವಿಚಾರ ಮಾತನಾಡಿದ್ದಾರೆ. ನಮ್ಮೂರಲ್ಲಿ ಬಂದು ಮಾತನಾಡಿ ಗ್ರಾಮಸ್ಥರ ವಿಚಾರಿಸಲಿ. ನೀವೇ ಐದು ವರ್ಷ ಶಾಸಕರಾಗಿದ್ರೀ ಆಗೇನು ಮಾಡ್ತಿದ್ರೀ? ಸಾಮಾನ್ಯ ಜ್ಞಾನ ಇಲ್ಲದವರಂತೆ ಮಾತನಾಡುತ್ತೀರಲ್ಲ ಎಂದು ನಿರಂಜನ್ರನ್ನು ಕಾಲೆಳೆದರು.
ಶಿವಪುರ ಸಭೆಯಲ್ಲಿ ಪುತ್ತನಪುರ ಗ್ರಾಪಂ ಅಧ್ಯಕ್ಷೆ ಹೇಮ, ಉಪಾಧ್ಯಕ್ಷ ಪುತ್ತನಪುರ ಸುರೇಶ್, ಶಿವಪುರ ಗ್ರಾಪಂ ಅಧ್ಯಕ್ಷ ಸಿದ್ದರಾಜು, ತಾಪಂ ಮಾಜಿ ಅಧ್ಯಕ್ಷ ಕೆ.ಎಸ್.ಜಗದೀಶಮೂರ್ತಿ, ಗ್ರಾಪಂ ಸದಸ್ಯರಾದ ಸೋಮ, ದೊಡ್ಡರಾಜು, ಸಿದ್ದಪ್ಪ, ಮುಖಂಡರಾದ ಚಿಕ್ಕರಾಜು, ಮರಿಸಿದ್ದಶೆಟ್ಟಿ ಸೇರಿದಂತೆ ಹಲವರಿದ್ದರು.