- ಹಳ್ಳದಲ್ಲಿ ಕೊಚ್ಚಿ ಹೋಗಿ ಓರ್ವ ಸಾವು । ರೈಲ್ವೆ ಹಳಿಗೆ ಹಾನಿ । ತೋಟ ಹೊಲ ಗದ್ದೆಗಳು ಜಲಾವ್ರತ
ಕಾಫಿಯ ನಾಡು ಮಹಾ ಮಳೆಗೆ ತತ್ತರಿಸುತ್ತಿದೆ. ದಿನೇ ದಿನೇ ಅನಾಹುತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಲೆನಾಡು ಮಾತ್ರ ವಲ್ಲ, ಬಯಲುಸೀಮೆಯ ಹಲವು ತೋಟ, ಹೊಲಗಳು ಜಲಾವೃತವಾಗಿವೆ. ಎಮ್ಮೆಯನ್ನು ಮೇಯಿಸಲು ಹೋಗಿದ್ದ ವ್ಯಕ್ತಿಯೋರ್ವ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.
ಜನವರಿ 1 ರಿಂದ ಅಕ್ಟೋಬರ್ 23 ರವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 1734 ಮಿ.ಮೀ. ಈವರೆಗೆ ಬಿದ್ದ ಮಳೆ 1946 ಮಿ.ಮೀ. ಅಂದರೆ ಶೇ. 12 ರಷ್ಟು ಹೆಚ್ಚುವರಿ ಮಳೆಯಾಗಿದೆ. ಅಕ್ಟೋಬರ್ ನಲ್ಲಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಬಯಲುಸೀಮೆ ಸಣ್ಣ ಹಾಗೂ ಮಧ್ಯಮ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಇದರಿಂದಾಗಿ ತೋಟಗಳು, ಹೊಲಗಳು ಜಲಾವೃತವಾಗಿವೆ.ಚಿಕ್ಕಮಗಳೂರು ತಾಲೂಕಿನ ದೇವಗೊಂಡನಹಳ್ಳಿಯ ಲಕ್ಷ್ಮಣ್ಗೌಡ (45) ಎಮ್ಮೆ ಮೇಯಿಸಲು ಬುಧವಾರ ಬೆಳಿಗ್ಗೆ ಹೋಗಿದ್ದರು. ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಸಂಜೆ ನಂತರ ಮನೆಯವರು ಹುಡುಕಿದರೂ ಪತ್ತೆ ಯಾಗಲಿಲ್ಲ. ಹಳ್ಳದಲ್ಲಿ ನೀರು ಕಡಿಮೆಯಾದ ಬಳಿಕ ಮೃತ ದೇಹ ಪತ್ತೆಯಾಗಿದೆ. ಎಮ್ಮೆ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಹಳ್ಳಕ್ಕೆ ಬಿದ್ದಿರಬಹುದೆಂದು ಹೇಳಲಾಗುತ್ತಿದೆ.
ಮಳೆ ಮಲೆನಾಡಿಗೆ ಮಾತ್ರ ಸೀಮಿತವಾಗಿಲ್ಲ, ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಧ್ಯಾಹ್ನ ಆರಂಭವಾದ ಮಳೆ ರಾತ್ರಿ ಯಿಡೀ ಸುರಿಯುತ್ತಿದೆ. ದಟ್ಟವಾದ ಮೋಡ ಕವಿದ ವಾತಾವರಣ ಮುಂದುವರಿದಿದೆ.
ಚಿಕ್ಕಮಗಳೂರು - ಚಿತ್ರದುರ್ಗದ ಗಡಿ ಭಾಗದಲ್ಲಿರುವ ಹಡಗಲ್ಲು ಗ್ರಾಮದಲ್ಲಿ ಭಾರೀ ಮಳೆಗೆ ಗ್ರಾಮದ ಸುತ್ತಮುತ್ತಲಿರುವ ಅಡಿಕೆ, ತೆಂಗಿನ ತೋಟಗಳು ಹೊಲಗಳು ಜಲಾವೃತವಾಗಿವೆ. ಇದರಿಂದ ರೈತರಿಗೆ ಅಪಾರ ಹಾನಿ ಉಂಟಾಗಿದೆ.
--- ಬಾಕ್ಸ್ ---ಮಳೆಗೆ ಕೋಡಿ ಬಿದ್ದ 25 ಕೆರೆಗಳು: 56 ಮನೆಗಳ ಕುಸಿತ ಕಡೂರು: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮುಂದುವರಿದಿರುವ ಮಳೆ ಅಬ್ಬರ ದೀಪಾವಳಿ ಸಡಗರವನ್ನೂ ಮಂಕಾಗಿಸಿದೆ. ನಿರಂತರವಾಗಿ ರಾತ್ರಿಯಿಡೀ ಸುರಿಯುವ ಮಳೆಯಿಂದ ಹಳೆ ಮತ್ತು ಮಣ್ಣಿನ ಮನೆಗಳ ಕುಸಿತ ಭೀತಿ ಎದುರಾಗಿ ತೋಟಗಳು, ಗದ್ದೆಗಳು ಜಲಾವೃತಗೊಂಡರೆ, 30ಕ್ಕೂ ಹೆಚ್ಚು ಕೆರೆಗಳು ತುಂಬಿ ಕೋಡಿ ಬಿದ್ದಿವೆ.ಕಳೆದ ಒಂದು ವಾರದಲ್ಲಿ ತಾಲೂಕಿನಲ್ಲಿ 56 ಮನೆಗಳು ಕುಸಿದಿವೆ. ಯಗಟಿ ಹೋಬಳಿ ಒಂದರಲ್ಲಿಯೇ 25 ಮನೆಗಳು ಕುಸಿದಿದ್ದು ಮಳೆ ನಡುವೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿ ಹೋಬಳಿಯಲ್ಲಿಯೂ 3-4 ಮನೆಗಳು ಕುಸಿದಿವೆ. ದೇವ ನೂರು ಸಮೀಪದ ಗಣಪತಿಹಳ್ಳಿ ಗ್ರಾಮದಲ್ಲಿ ನೂರಾರು ವರ್ಷ ಹಳೆ ಬಾವಿ ಕುಸಿದಿದ್ದು, ಸ್ಥಳಕ್ಕೆ ತಹಸೀಲ್ದಾರ್ ರ್ಪೂರ್ಣಿಮಾ ಮತ್ತು ಕಂದಾಯ ನಿರೀಕ್ಷಕ ರವಿಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಕಡೂರು ಪಟ್ಟಣಕ್ಕೆ ಹೊಂದಿಕೊಂಡು ತುರುವನಹಳ್ಳಿ ಹೋಗುವ ದಾರಿಯಲ್ಲಿರುವ ಹಳ್ಳ ತುಂಬಿ ಹರಿಯುತ್ತಿದ್ದು ಸಮೀಪದ ಅಡಕೆ ತೋಟಗಳು ಜಲಾವೃತವಾಗಿವೆ. ಮಂಗಳವಾರ ಹಳ್ಳದಲ್ಲಿ ಕೊಚ್ಚಿಹೋದ ಎತ್ತುಗಳ ಮರಣೋತ್ತರ ವರದಿ ಪಡೆದು ತಹಸೀಲ್ದಾರರು ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
-- 23 ಕೆಡಿಆರ್ 2ಭಾರೀ ಮಳೆಗೆ ಕಡೂರು ತಾಲೂಕಿನ ಹಡಗಲ್ಲು ಗ್ರಾಮದ ತೋಟಗಳು ಹಾಗೂ ಇತರೆ ಪ್ರದೇಶ ಜಲಾವೃತವಾಗಿರುವುದು.