ನರೇಗಲ್ಲ: ಕೋಡಿಕೊಪ್ಪದ ಹುಚ್ಚೀರಪ್ಪಜ್ಜನವರ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಜ್ಯೋತಿ ಯಾತ್ರೆಗೆ ಹುಚ್ಚೀರಪ್ಪಜ್ಜನವರ ಟ್ರಸ್ಟ್ ಕಮಿಟಿ ಚೇರ್ಮನ್ ಮಲ್ಲಯ್ಯ ಚಪ್ಪನಮಠ ಭಾನುವಾರ ಚಾಲನೆ ನೀಡಿದರು.ಜ. 30ರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ವೀರಪ್ಪಜ್ಜನವರ ಮಠದಿಂದ ಜ್ಯೋತಿಯಾತ್ರೆ ಆರಂಭಿಸಲಾಯಿತು.
ಡಾ. ಎಲ್.ಎಸ್. ಗೌರಿ ಕಾರ್ಯಕ್ರಮದ ವಿವರಣೆ ನೀಡಿದರು. ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ ಮಾತನಾಡಿದರು. ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಮಾಜಿ ಅಧ್ಯಕ್ಷ ಸುನೀಲ ಬಸವರಡ್ಡೇರ, ಶಿವನಗೌಡ ಪಾಟೀಲ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಮಲ್ಲಿಕಾರ್ಜುನಗೌಡ ಮಲ್ಲನಗೌಡ್ರ, ಪ್ರಭುಗೌಡ ನಾಡಗೌಡ್ರ, ಅಲ್ಲಾಭಕ್ಷಿ ನದಾಫ, ಮೈಲಾರಪ್ಪ ಚಳ್ಳಮರದ, ಶೇಖಪ್ಪ ಜುಟ್ಲದ, ಶೇಖಪ್ಪ ಕೆಂಗಾರ, ಡಾ. ಮಲ್ಲಿಕಾರ್ಜುನಗೌಡ ಪಾಟೀಲ, ಬಸವರಾಜ ಧರ್ಮಾಯತ, ವೀರೇಶ ಜೋಗಿ, ಕೃಷ್ಣಪ್ಪ ಜುಟ್ಲದ, ಮಂಜುನಾಥ ಕಳಕೊಣ್ಣವರ, ಮೃತ್ಯುಂಜಯ ಅಣ್ಣಿಗೇರಿಮಠ, ಚಂದ್ರಶೇಖರ ಅಣ್ಣಿಗೇರಿಮಠ ಇದ್ದರು.
ಜ. 26ರಂದು ಪ್ರಾರಂಭಗೊಂಡ ಜ್ಯೋತಿಯಾತ್ರೆಯು ದ್ಯಾಂಪುರ, ತೊಂಡಿಹಾಳ, ಬಂಡಿಹಾಳ, ಬಿನ್ನಾಳ, ಚಿಕ್ಕೇನಕೊಪ್ಪ ಸಿದ್ನೇಕೊಪ್ಪ, ಸೋಂಪುರ, ಜಾಲಿಕೊಪ್ಪ, ನಿಂಗಾಪುರ ಕ್ರಾಸ್, ಇಟಗಿ, ಬೆಣಕಲ್, ಮಸಬಹಂಚಿನಾಳ, ಮಾಡಲಗೇರಿ, ಗರ್ಲೆಕೊಪ್ಪ, ಕುಕನೂರ, ರಾಜೂರ, ಸಂಗನಾಳ, ಕಲ್ಲೂರ ಯಲಬುರ್ಗಾ, ಕರಮುಡಿ, ಹಾಲಕೆರೆ, ನಿಡಗುಂದಿಕೊಪ್ಪ, ನಿಡಗುಂದಿ ಹೀಗೆ ನಾಲ್ಕು ದಿನಗಳ ಕಾಲ ಜ್ಯೋತಿಯಾತ್ರೆ ಸಂಚರಿಸಿ ನಾಲ್ಕನೇ ದಿನ ಕಳಕಾಪುರ, ಮಾರನಬಸರಿ, ಜಕ್ಕಲಿ, ಬೂದಿಹಾಳ, ಮಲ್ಲಾಪುರ ಮಾರ್ಗವಾಗಿ ಮರಳಿ ಶ್ರೀಮಠಕ್ಕೆ ತಲುಪಲಿದೆ.