ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬಡ ಕುಟುಂಬಗಳಿಗೆ ಸಮುದಾಯಭವನಗಳು ಅನುಕೂಲ

KannadaprabhaNewsNetwork | Published : Jun 9, 2025 12:09 AM

ಸಮುದಾಯ ಭವನ ನಿರ್ಮಾಣದಿಂದ ಮುಂಬರುವ ದಿನಗಳಲ್ಲಿ ಗ್ರಾಮದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡ ಕುಟುಂಬದ ಕಾರ್ಯಕ್ರಮಗಳಿಗೆ ಅನುಕೂಲ

ಕನ್ನಡಪ್ರಭ ವಾರ್ತೆ ಮೂಡಲಗಿ

ಆಧುನಿಕ ಜಗತ್ತಿನಲ್ಲಿ ಮದುವೆಗಳು ಆಯಾ ಕುಟುಂಬದ ಪ್ರತಿಷ್ಠೆಯ ಮಾನದಂಡಗಳಾಗಿದ್ದು, ಪ್ರತಿಷ್ಠೆಗಾಗಿ ಜೀವನದಲ್ಲಿ ಅತಿ ಹೆಚ್ಚು ಖರ್ಚು ಮದುವೆಗಾಗಿ ಮಾಡುತ್ತಿದ್ದಾರೆ. ಇಂತಹ ಪ್ರತಿಷ್ಠೆ ಖರ್ಚುಗಳಿಗೆ ಕಡಿವಾಣ ಹಾಕಲು ಆಯಾ ಗ್ರಾಮಗಳಲ್ಲಿ ನಿರ್ಮಾಣವಾಗುವ ಸಮುದಾಯ ಭವನಗಳು ನೆರವಾಗಲಿದ್ದು, ಶಿವಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುವ ಸಮುದಾಯಭವನವನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸಂಸದರ ಆದರ್ಶಗ್ರಾಮ ತಾಲೂಕಿನ ಶಿವಾಪೂರ (ಹ) ಗ್ರಾಮದ ಅಡವಿಸಿದ್ದೇಶ್ವರ ಮಠದ ಆವರಣದಲ್ಲಿ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹50 ಲಕ್ಷ ವೆಚ್ಚದಲ್ಲಿ ಸಮುದಾಯಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಶಿವಾಪೂರ (ಹ) ಗ್ರಾಮದಲ್ಲಿ ಈಗಾಗಲೇ ಕಾಂಕ್ರಿಟ್ ರಸ್ತೆಗಳು, ದುರ್ಗಾದೇವಿ ಸಮುದಾಯ ಭವನ, ಬಸ್ ಪ್ರಯಾಣಿಕರ ತಂಗುದಾಣ, ಶಾಲೆಗಳಿಗೆ ಪೀಠೋಪಕರಣ ಸೇರಿದಂತೆ ಮೂಲಸೌಲಭ್ಯ ನೀಡಲಾಗಿದೆ. ಈಗ, ಅಡವಿಸಿದ್ದೇಶ್ವರ ಮಠದ ಸಮುದಾಯಭವನ ಹೀಗೆ ಅನೇಕ ಕಾಮಗಾರಿ ಕೈಗೊಂಡು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಸಂಸದರ ಆದರ್ಶ ಗ್ರಾಮ ಯೋಜನೆ ಯಶಸ್ವಿಯಾಗಬೇಕಾದರೆ ಗ್ರಾಮದ ಜನರೆಲ್ಲಾ ಒಗ್ಗಟ್ಟಿನಿಂದ ಈ ಕಾರ್ಯಕ್ಕೆ ಕೈ ಜೋಡಿಸಿಬೇಕೆಂದು ಗ್ರಾಮಸ್ಥರಲ್ಲಿ ವಿನಂತಿಸಿದರು. ಈ ಸಮುದಾಯ ಭವನ ನಿರ್ಮಾಣದಿಂದ ಮುಂಬರುವ ದಿನಗಳಲ್ಲಿ ಗ್ರಾಮದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡ ಕುಟುಂಬದ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಡವಿಸಿದ್ದರಾಮ ಶ್ರೀಗಳು ಮಾತನಾಡಿ, ಶಿವಾಪೂರ ಗ್ರಾಮಕ್ಕೆ ಸಂಸದರು ಹೆಚ್ಚಿನ ಮೂತುವರ್ಜಿ ವಹಿಸುತ್ತಿರುವುದು ಶ್ಲಾಘಿಸಿದರು. ಈ ಹಿಂದೆ ಇರುವ ಅನೇಕ ರಾಜ್ಯಸಭಾ ಸದಸ್ಯರಿಂದ ಅರಭಾವಿ ಕ್ಷೇತ್ರದಲ್ಲಿ ಅನುದಾನ ಬಂದಿಲ್ಲ. ಈಗಿನ ಸಂಸದ ಕಡಾಡಿ ಅವರು ತಮ್ಮ ಅನುದಾನದಲ್ಲಿ ಅರಭಾವಿ ಕ್ಷೇತ್ರದಲ್ಲಿ ಅನೇಕ ಜನಪರ ಕಾರ್ಯ ಮಾಡಿದ್ದಾರೆ ಎಂದರು.

ಈ ವೇಳೆ ಶಿವನಗೌಡ ಪಾಟೀಲ, ಈಶ್ವರ ಬೆಳಗಲಿ, ಶಂಕರಗೌಡ ಪಾಟೀಲ, ಶಿವಬಸು ಜುಂಜರವಾಡ. ಕೆಂಪಣ್ಣ ಮೂಧೋಳ, ಪ್ರಕಾಶ ಮಾದರ ಉಮೇಶ ಮುಧೋಳ, ಸತೀಶ ಜುಂಜರವಾಡ, ಬಸವರಾಜ ಸಾಯನ್ನವರ, ಮಲ್ಲಪ್ಪ ಜುಂಜರವಾಡ, ಚನ್ನಬಸು ಬೆಳಗಲಿ, ರೇವಪ್ಪ ಪಾಟೀಲ, ಅಡಿವೇಪ್ಪ ಗಿರೆಣ್ಣವರ, ಬಸಪ್ಪ ಶಿಳನ್ನವರ, ಪರಪ್ಪ ಗಿರೆಣ್ಣವರ, ದುರ್ಗಪ್ಪ ಮೇತ್ರಿ, ಚನ್ನಮಲ್ಲಪ್ಪ ಕುಡಚಿ, ಈರಯ್ಯ ಹಿರೇಮಠ, ಶಿವನಪ್ಪ ರಡರಟ್ಟಿ, ಬಾಳಗೌಡ ಪಾಟೀಲ ಸೇರಿ ಸುತ್ತಮುತ್ತಲಿನ ಗ್ರಾಮಗಳ ಕಾರ್ಯಕರ್ತರು ಉಪಸ್ಥಿತರಿದ್ದರು.