ಕನ್ನಡಪ್ರಭ ವಾರ್ತೆ ಕಾರವಾರ
ಹಿಂದಿನ ಅವಧಿಯಲ್ಲಿ ಸಹಕಾರ ಭಾರತಿಯಡಿ ಜಯಭೇರಿ ಬಾರಿಸಿದವರು ಈ ಬಾರಿ ಮಂಕಾಳ ವೈದ್ಯ ಅವರೊಂದಿಗೆ ಕೈಜೋಡಿಸಿದ್ದಾರೆ. ಅಂದರೆ ಪರೋಕ್ಷವಾಗಿ ಬಿಜೆಪಿಯೊಂದಿಗೆ ಇದ್ದವರೂ ಮಂಕಾಳ ವೈದ್ಯರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಶತಾಯಗತಾಯ ಕೆಡಿಸಿಸಿ ಬ್ಯಾಂಕ್ ಆಡಳಿತ ತಮ್ಮ ಬಣದಲ್ಲಿರಬೇಕೆಂದು ಮಂಕಾಳ ವೈದ್ಯ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಬಣದೊಂದಿಗೆ ತೀವ್ರ ಸ್ಪರ್ಧೆಗೆ ಇಳಿದಿದ್ದಾರೆ.
ಒಟ್ಟೂ 16 ನಿರ್ದೇಶಕರ ಸ್ಥಾನಕ್ಕೆ 44ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವರಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದು, ಚುನಾವಣಾ ಕಣದಲ್ಲಿ 33 ಅಭ್ಯರ್ಥಿಗಳು ಇದ್ದಾರೆ.ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಕಾರವಾರ ಶಾಸಕ ಸತೀಶ ಸೈಲ್ ಹೀಗೆ ಮೂವರು ಶಾಸಕರು ಚುನಾವಣಾ ಕಣದಲ್ಲಿರುವುದು ಚುನಾವಣಾ ಕಣ ಇನ್ನಷ್ಟು ರಂಗೇರುವಂತೆ ಮಾಡಿದೆ.
ಭಟ್ಕಳದ ಫ್ಯಾಕ್ಸ್ನಿಂದ ಸ್ಪರ್ಧಿಸಿರುವ ಸಚಿವ ಮಂಕಾಳ ವೈದ್ಯ, ಹೊನ್ನಾವರ ಮತಕ್ಷೇತ್ರದ ವಿ.ಕೆ. ವಿಶಾಲ್ ಹಾಗೂ ಅಂಕೋಲಾದಿಂದ ಸ್ಪರ್ಧಿಸಿರುವ ಬೀರಣ್ಣ ಬೊಮ್ಮಯ್ಯ ನಾಯಕ (ಬಾಬು ಸುಂಕೇರಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ 30 ಅಭ್ಯರ್ಥಿಗಳ ನಡುವೆ ಚುನಾವಣೆ ನಡೆಯಲಿದೆ.ರಾಧಾಕೃಷ್ಣ ದೇವಾಲಯದಲ್ಲಿ ಕಳ್ಳತನ:
ಕೆಲ ತಿಂಗಳ ಹಿಂದೆ ನಗರದ ಸಾಯಿಕಟ್ಟಾದ ಸಾಯಿ ಮಂದಿರದಲ್ಲಿಯೂ ಲಕ್ಷಾಂತರ ರು. ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿತ್ತು. ಹಲವು ದಿನಗಳ ಬಳಿಕ ಪೊಲೀಸರು ಹರಿಯಾಣದಲ್ಲಿ ಆರೋಪಿಗಳನ್ನು ಬಂಧಿಸಿದ್ದರು.