ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಜೂ.9, 2026 ರಂದು ಹರಿಹರದ ಬಿ.ಕೃಷ್ಣಪ್ಪ ಮೈತ್ರಿವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರೊ.ಕೆ.ಎಸ್.ಭಗವಾನ್, ಶ್ರೀರಾಮನ ಜನನ ಹಾಗೂ ಹಿಂದೂ ದೇವರುಗಳ ಕುರಿತು ಅಶ್ಲೀಲ ಮತ್ತು ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹೇಳಿಕೆಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ಉಂಟು ಮಾಡಿವೆ. ಈ ಹಿಂದೆಯೂ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ಭಗವಾನ್ ಅವರ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರು ಮಹಾಲಿಂಗಪುರ ಪೊಲೀಸ್ ಠಾಣಾಧಿಕಾರಿಗೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಾದ ರಾಘವೇಂದ್ರ ಪವಾರ, ರಾಘು ಗರಗಟಗಿ, ಭರತ ಕದ್ದಿಮನಿ, ರಾಘು ಕಪರಟ್ಟಿ, ದಾನೇಶ ಡೊಂಬರ, ಸುದೀಪ ಮೇಟಿ, ವಿನೋದ ಮೇತ್ರಿ , ರಾಘು ಡಂಬಳ, ವಿಕ್ರಂ ಮೇಟಿ ಸೇರಿದಂತೆ ಇತರರಿದ್ದರು.