ಕನ್ನಡಪ್ರಭ ವಾರ್ತೆ ಬಾದಾಮಿ
ಈ ವೇಳೆ ಮಾತನಾಡಿದ ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಕಿರಣ ಕುಳಗೇರಿ ಮಾತನಾಡಿ, ವೈದ್ಯ ಘಟನೆಯಿಂದ ಇಡೀ ವೈದ್ಯ ಸಮುದಾಯವೇ ಆತಂಕಗೊಂಡಿದೆ. ಇಂತಹ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ವೈದ್ಯರಿಗೆ ಸೂಕ್ಷ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಐಎಂಎ ತಾಲೂಕಾಧ್ಯಕ್ಷ ಡಾ.ಆರ್.ಸಿ.ಭಂಡಾರಿ, ಡಾ.ಸುರೇಶ ಉಗಲವಾಟ, ಡಾ.ಮಾರುತಿ ತಳವಾರ, ಎಸ್.ಜಿ.ಕಾರುಡಗಿಮಠ, ನಿಲೂಗಲ್ಲ, ಡಾ.ನೀರಲಗಿ, ಡಾ.ಮನೋಜ ವರಕೇರಿ, ಡಾ.ಅಜಯ ನಾಯಕ, ಡಾ.ಜತಂತ, ಡಾ.ರೇವಣಸಿದ್ದಪ್ಪ, ಡಾ.ಬಸವರಾಜ ಮುಲ್ಕಿಪಾಟೀಲ, ರಾಜೇಂದ್ರ ಮರಕುಂಬಿ, ಎಸ್.ವ್ಹಿ.ತೆಗ್ಗಿ, ಡಾ.ವ್ಹಿ.ವಾಯ್.ಭಾಗವತ, ಡಾ.ಸತೀಶ ಕಟಗೇರಿ, ಡಾ.ಬಸವರಾಜ ಗಂಗಲ್, ಶ್ರೀಧರ ಪತ್ತೇಪೂರ, ಎಸ್.ಎಸ್.ಬೊಮ್ಮನಗೌಡರ ಇತರರು ನೇತ್ರತ್ವ ವಹಿಸಿದ್ದರು.ಪುಲಿಕೇಶಿ ಹಾಗೂ ಕಾಳಿದಾಸ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ನೂರಾರು ಜನ ಸಿಬ್ಬಂದಿ ಘೋಷಣೆಗಳನ್ನು ಕೂಗುತ್ತ ಪ್ರತಿಭಟಿಸುವುದರ ಜೊತೆಗೆ ನ್ಯಾಯ ಕೊಡಬೇಕೆಂದು ಆಗ್ರಹಿಸಿದರು.