ಕನ್ನಡಪ್ರಭ ವಾರ್ತೆ ಬೀದರ್
ಈ ಕುರಿತು ಪ್ರತಿಭಟನೆ ನಡೆಸಿದ ಮುಖಂಡರು, ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ವಿದ್ಯಾರ್ಥಿ ನಿಲಯದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಹುನ್ನಾರ ಕೂಡ ಪ್ರತಿಭಟನಾಕಾರರು ಮಾಡಿದ್ದರು. ಅಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಅನಾಹುತ ತಡೆದಿದ್ದಾರೆಂದು ತಿಳಿದು ಬಂದಿದೆ.
ಇಂತಹ ಕೃತ್ಯದಲ್ಲಿ ತೊಡಗಿರುವವರಿಗೆ ಹಾಗೂ ಪ್ರಚೋದನೆ ನೀಡಿದವರಿಗೆ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಸೂಕ್ತ ರೀತಿಯಲ್ಲಿ ಕ್ರಮ ಕೈಕೊಳ್ಳಬೇಕೆಂದು ಬೀದರ್ ಗೊಂಡ ಪರ ಸಂಘಟನೆಗಳ ಒಕ್ಕೂಟ ಮನವಿ ಮಾಡಿದೆ.ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣ ಸಮಿತಿಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ, ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಕರಾಟೆ, ಗೋವರ್ಧನ ರಾಠೋಡ, ಕುಶಾಲ ಹಾಸಗೊಂಡ, ಸಂತೋಷ ಜೋಳದಾಬಪಕೆ, ಶಿವಕುಮಾರ ನೀಲಿಕಟ್ಟಿ, ಲೋಕೇಶ ಮರ್ಜಾಪೂರ, ರಾಜಕುಮಾರ ಚಿಟ್ಟಾವಾಡಿ, ಅಮರ್ ಕೊಳಾರ, ಈಶ್ವರ ಕನೇರಿ, ಪ್ರದೀಪ ನಾಟೇಕರ್, ಸಂದೀಪ ಕಾಂಟೆ, ನರಸಪ್ಪಾ ಯಾಕತಪೂರ, ಪಿ.ಎಸ್. ಇಟಕಂಪಳ್ಳಿ,ಅಶೋಕ ಮದಾಳೆ, ರಘುನಾಥ ಬುರೆ, ಶರಣು ಟೊಳ್ಳೆ, ಅಮೃತ ಮುತ್ತಂಗಿಕರ್, ಎ.ಪಿ. ವೈಜಿನಾಥ, ರಾಕೇಶ ಕುರಬಖೇಳ್ಗಿ, ರಿಯಾಜೋದ್ದಿನ ಚಿದ್ರಿ, ಓಂಕಾರ ಗಾದಗಿ, ಸಿದ್ದು ಗಾದಗಿ, ಆನಂದ, ಕಲ್ಲಪ್ಪಾ ಇದ್ದರು.