ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದಲ್ಲಿ ಆರಂಭಗೊಂಡ ಜಿಲ್ಲಾ ಗೌಡ ಯುವ ವೇದಿಕೆಯ ವತಿಯಿಂದ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯ ಆರಂಭೋತ್ಸವದಲ್ಲಿ ಬಾಲ ಪ್ರತಿಭೆ ಚಿನ್ಮಿತ್ ಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಬಾಲ ಪ್ರತಿಭೆಯ ಸಾಧನೆಯ ಬಗ್ಗೆ ಸ್ವಾಮೀಜಿ ಶ್ಲಾಘಿಸಿದರು.
ಈ ಸಂದರ್ಭ ಶ್ರೀ ಶಂಭುನಾಥ ಸ್ವಾಮೀಜಿ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಶಾಸಕ ಡಾ ಮಂತರ್ ಗೌಡ, ಜಿಲ್ಲಾ ಗೌಡ ಯುವ ವೇದಿಕೆಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಸೇರಿದಂತೆ ಬಾಲಕ ಪೋಷಕರಾದ ವಕೀಲ ಕೆ.ಪಿ.ಶರತ್ ಮತ್ತು ಚಂದ್ರಕಲಾ ಹಾಗೂ ಅಜ್ಜಿ ಪದ್ಮ ಪುರುಷೋತ್ತಮ್ ಇದ್ದರು.ಈ ವಿದ್ಯಾರ್ಥಿಯು ಕೂಡ್ಲೂರು ಗ್ರಾಮದ ಯೂನಿಕ್ ಅಕಾಡೆಮಿ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.