ಯಲ್ಲಾಪುರ: ಕೇಂದ್ರ ಸರ್ಕಾರ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತು ಬೆಲೆ ಏರಿಕೆ ಮಾಡಿರುವುದನ್ನು ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ್ ಹೇಳಿದರು.
ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಕೇಂದ್ರ ಕಾರಣ. ಬಿಜೆಪಿಗರು ಮಾಡಿದರೆ ಉದ್ಧಾರ, ಆದರೆ ಕಾಂಗ್ರೆಸ್ ಮಾಡಿದರೆ ತುಷ್ಟೀಕರಣ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಸಾಧನೆ ಕೇಳಿಕೊಂಡು ಪಕ್ಷ ಬೆಳೆಸಿ, ಅದು ಬಿಟ್ಟು ಧರ್ಮ, ಧರ್ಮದವರ ನಡುವೆ ಕಿಚ್ಚು ಹಚ್ಚುವ ಪ್ರಯತ್ನ ಸರಿಯಲ್ಲ ಎಂದರು.
ಜಿಲ್ಲಾ ಕಾರ್ಯದರ್ಶಿ ರವಿ ಭಟ್ಟ ಬರಗದ್ದೆ ಮಾತನಾಡಿ, ರಾಷ್ಟ್ರಾದ್ಯಂತ ಬೆಲೆ ಏರಿಕೆಗೆ ಕಾರಣವೇ ಬಿಜೆಪಿಗರು. ಬಿಜೆಪಿಗರು ಮಾಡಿದರೆ ರಾಷ್ಟ್ರೀಯತೆಗಾಗಿ ತ್ಯಾಗ ಎನ್ನಲಾಗುತ್ತದೆ. ಧರ್ಮ ರಾಷ್ಟ್ರೀಯತೆ ಪ್ರಜ್ಞೆ ಎಲ್ಲರಲ್ಲೂ ಇದ್ದು, ಅದು ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ ಎಂದರು.ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ ಪ್ರಶಾಂತ ಸಭಾಹಿತ ಮಾತನಾಡಿ, ಹಾಲುದರ ಏರಿಸಿದ್ದು, ರೈತರಿಗೆ ಇದರಿಂದ ಲಾಭವಾಗಿದೆ ಎಂದು ಸಮರ್ಥಿಸಿಕೊಂಡರು.
ಪಕ್ಷದ ಪ್ರಮುಖರಾದ ಟಿ.ಸಿ. ಗಾಂವ್ಕಾರ, ವಿ.ಎಸ್. ಭಟ್ಟ, ಮುಶರತ್ ಖಾನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.