ರಾಮನಗರ: ಜೆಡಿಎಸ್ - ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಮಾಗಡಿ ಪುರಸಭೆಯನ್ನು ಕಾಂಗ್ರೆಸ್ ಪಕ್ಷ ಕೈ ವಶ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೆ.19ರಂದು ಗುರುವಾರ ನಡೆಯಲಿರುವ ಬಿಡದಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
ಮಾಗಡಿ ಪುರಸಭೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವಷ್ಟು ಸ್ಪಷ್ಟ ಬಹುಮತ ಹೊಂದಿತ್ತು. ಇಲ್ಲಿ 23 ಸದಸ್ಯರ ಪೈಕಿ ಜೆಡಿಎಸ್ 12, ಕಾಂಗ್ರೆಸ್ 10, ಬಿಜೆಪಿ -1 ಸದಸ್ಯರನ್ನು ಹೊಂದಿತ್ತು. ಸಂಸದ ಡಾ.ಸಿ.ಎನ್.ಮಂಜುನಾಥ್ ಮತ ಸೇರಿ ಜೆಡಿಎಸ್ - ಬಿಜೆಪಿ ಮೈತ್ರಿಕೂಟ 13 ಹಾಗೂ ಶಾಸಕ ಬಾಲಕೃಷ್ಣ ಸೇರಿ ಕಾಂಗ್ರೆಸ್ 11 ಸದಸ್ಯ ಬಲ ಹೊಂದಿತ್ತು. ಚುನಾವಣೆಯಲ್ಲಿ ಜೆಡಿಎಸ್ನ ನಾಲ್ವರು ಸದಸ್ಯರು ಮತ ಚಲಾಯಿಸದೆ ತಟಸ್ಥರಾದರೆ, ಬಿಜೆಪಿ ಸದಸ್ಯೆ ಗೈರಾಗಿದ್ದರು. ಇದರ ಪರಿಣಾಮ ಕಾಂಗ್ರೆಸ್ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಇಂತಹ ತಂತ್ರವನ್ನು ಬಿಡದಿ ಪುರಸಭೆಯಲ್ಲೂ ಪ್ರಯೋಗಿಸಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿಕೊಂಡಿದೆ.
ಬಂಡಾಯಗಾರರಿಗೆ ಬೆಂಬಲಿಸಲು ಕೈ ನಿರ್ಧಾರ:ಬಿಡದಿ ಪುರಸಭೆಯಲ್ಲಿ ಜೆಡಿಎಸ್ - 14 ಹಾಗೂ ಕಾಂಗ್ರೆಸ್ 9 ಸದಸ್ಯರು ಇದ್ದಾರೆ. ಸಂಸದ ಮಂಜುನಾಥ್ ಸೇರಿ ಜೆಡಿಎಸ್ 15, ಶಾಸಕ ಬಾಲಕೃಷ್ಣ ಸೇರಿ ಕಾಂಗ್ರೆಸ್ 10 ಮತ ಬಲವನ್ನು ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಲ್ಲಿ ಪುರಸಭೆ ಸದಸ್ಯರಾಗಿರುವ 11ನೇ ವಾರ್ಡಿನ ಎಂ.ಎನ್ . ಹರಿಪ್ರಸಾದ್, 20ನೇ ವಾರ್ಡ್ ನ ಯಲ್ಲಮ್ಮ, 22ನೇ ವಾರ್ಡಿನ ಭಾನುಪ್ರಿಯ ಪ್ರಬಲ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್ ನಿಂದ 17ನೇ ವಾರ್ಡಿನ ಸದಸ್ಯ ಶ್ರೀನಿವಾಸ್, 21ನೇ ವಾರ್ಡಿನ ಸದಸ್ಯ ಬಿ.ರಾಮಚಂದ್ರಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ.
ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಜೆಡಿಎಸ್ ನಿಂದ ಯಾರಾದರು ಬಂಡಾಯ ಸಾರಿದರೆ ಅವರಿಗೆ ಬೆಂಬಲಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ ನ 10 ಮತಗಳ ಜೊತೆಗೆ ಬಂಡಾಯಗಾರರು ಒಂದಿಬ್ಬರು ಸದಸ್ಯರನ್ನು ಎಳೆದು ತಂದರೆ ಅಧಿಕಾರವನ್ನು ಸುಲಭವಾಗಿ ದಕ್ಕಿಸಿಕೊಳ್ಳಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.
ಕೋಟ್ ............
- ಸಿ.ಉಮೇಶ್, ಸದಸ್ಯರು, ಬಿಡದಿ ಪುರಸಭೆ
11.ಬಿಡದಿ ಪುರಸಭೆ