ಕನ್ನಡಪ್ರಭ ವಾರ್ತೆ ಜಮಖಂಡಿ
ಬಡವರು ಮತ್ತು ಮಧ್ಯಮ ವರ್ಗದ ಜನರ ಪಿತ್ರಾರ್ಜಿತ ಆಸ್ತಿಯ ಮೇಲೆ ಕಾಂಗ್ರೆಸ್ ಕಣ್ಣು ಬಿದ್ದಿದೆ. ಕಾಂಗ್ರೆಸ್ನ ಸಾಗರೋತ್ತರ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಹುಲ್ ಗಾಂಧಿ ಅವರ ಆಪ್ತ ಸಲಹೆಗಾರ ಶ್ಯಾಮ ಪಿತ್ರೋಡಾ ಪಿತ್ರಾರ್ಜಿತ ಆಸ್ತಿ ತೆರಗೆ ಪದ್ಧತಿ ಅಮೆರಿಕಾದ ಆರು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಅದು ತಮಗೆ ಇಷ್ಟ ಎಂದಿರುವುದು, ಇದು ಕಾಂಗ್ರೆಸ್ ನ ಚಿಂತನೆಯಾಗಿದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಕಿಡಿಕಾರಿದ್ದಾರೆ.ಕನ್ನಡಪ್ರಭ ಜೊತೆಗೆ ಮಾತನಾಡಿದ ಅವರು, ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಆಸ್ತಿ ಕಬಳಿಸಿ ಮತ್ತೊಬ್ಬರಿಗೆ ಹಂಚುವ ತಂತ್ರ ಇದಾಗಿದೆ, ತಂದೆಯ ಆಸ್ತಿ ನೇರ ವಾರಸುದಾರರಾದ ಮಕ್ಕಳಿಗೆ ದೊರೆಯುತ್ತದೆ ಈ ಬಗ್ಗೆ ಸಂವಿಧಾನದಲ್ಲಿ ಸೂಕ್ತವಾದ ನಿರ್ದೇಶನವಿದೆ ಆದರೆ ಈ ಆಸ್ತಿಗೆ ತೆರಿಗೆ ವಿಧಿಸುವ ಯೋಚನೆ ಮೂರ್ಖತನದಿಂದ ಕೂಡಿದೆ. ಪ್ರಜಾತಂತ್ರ ವಿರೋಧಿಯಾಗಿದೆ ಎಂದು ದೂರಿದರು.
ಅನೆರಿಕಾ ದೇಶದ ಜನಸಂಖ್ಯೆ, ಅಲ್ಲಿಯ ರೈತರ ಆಸ್ತಿ ಮತು ರೈತರ ಸ್ಥಿತಿ ಈ ಎಲ್ಲ ಲೆಕ್ಕಾಚಾರದ ಮೇಲೆ ಅಲ್ಲಿಯ ಸರ್ಕಾರ ಆರೀತಿಯ ತೆರಿಗೆಗಳನ್ನು ಜಾರಿಗೊಳಿಸಿರಬಹುದು, ಆದರೆ ಇದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಕ್ಕೆ ಸೂಕ್ತವಲ್ಲ ಎಂದರು.ಕಾಂಗ್ರೆಸ್ ಈ ಹಿಂದಿನಿಂಲೂ ಇಂತಹ ಜನ ವಿರೋಧಿ ನೀತಿ ಜಾರಿಗೊಳಿಸುವ ಹುನ್ನಾರ ನಡೆಸುತ್ತಲೇ ಬಂದಿದೆ. ನೆಹರು ಅವರ ಕಾಲದಲ್ಲಿಯೂ ಇಂತಹ ಕಾನೂನು ಇತ್ತು. ಇಂತಹ ಚಿಂತನೆಗಳಿಂದ ದೇಶದಲ್ಲಿ ಕ್ರಾಂತಿಯೇ ಆಗುತ್ತದೆ. ಕಾಂಗ್ರೆಸ್ನ ಅಸಲಿ ಮುಖ ಈ ಹೇಳಿಕೆಯಿಂದ ಬಯಲಾಗಿದೆ ಎಂದಿ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ಪಿತ್ರೋಡಾ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಸಮಜಾಯಿಸಿ ನೀಡುತ್ತಲೇ ತಮ್ಮ ಪಕ್ಷದ ನಿಲುವನ್ನು ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಯಾವಾಗಲೂ ಬಡ ಮತ್ತು ಮಧ್ಯಮವರ್ಗದ ಜನರ ಹಿತ ಕಾಯುವಲ್ಲಿ ವಿಫಲವಾಗಿದೆ ಶ್ರೀಕಾಂತ ಕುಲಕರ್ಣಿಮತ್ತು ಈಗ ಜನರ ಆಸ್ತಿಯನ್ನು ಕಬಳಿಸುವ ಯೋಚನೆಯಲ್ಲಿ ತೊಡಗಿದೆ ಎಂದು ಆಪಾದಿಸಿದರು.ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಜನರಿಗೆ ಮೋಸಮಾಡಲು ಮುಂದಾಗಿದೆ, ಮತದಾರ ಜಾಗೃತನಾಗಿದ್ದು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ದೇಶದ ಪ್ರಜ್ಞಾವಂತ ಮತದಾರ ಚುನವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಬೆಂಬಲಿಸುವ ಮೂಲಕ ಸೂಕ್ತ ಉತ್ತರ ನೀಡಲಿದ್ದಾನೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅಭಿಪ್ರಾಯ ಪಟ್ಟರು.