ಕುಟುಂಬದ ಹಿತಕ್ಕಾಗಿ ಕಾಂಗ್ರೆಸ್‌ ಚುನಾವಣೆ ಎದುರಿಸ್ತಿದೆ: ಸಂಸದ ತೇಜಸ್ವಿ ಸೂರ್ಯ

KannadaprabhaNewsNetwork |  
Published : May 05, 2024, 02:02 AM IST
(ಪೋಟೊ 4 ಬಿಕೆಟಿ 10, ಸಂಸದ ತೇಜಸ್ವಿ ಸೂರ್ಯ ಅವರು ನವನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರ ರೊ ಂದಿಗೆ  ಮಾತನಾಡಿದರು,  ) | Kannada Prabha

ಸಾರಾಂಶ

ಕಾಂಗ್ರೆಸ್ಸಿಗರು ತಮ್ಮ ಕುಟುಂಬದ ಸದಸ್ಯರಿಗಾಗಿ ಚುನಾವಣೆ ನಡೆಸುತ್ತಿದ್ದಾರೆ. ಮಂತ್ರಿಗಳ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆಗೆ ಮುಂದಾಗಿದೆ. ಆದರೆ, ನರೇಂದ್ರ ಮೋದಿ ಬಡವರ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾಂಗ್ರೆಸ್ಸಿಗರು ತಮ್ಮ ಕುಟುಂಬದ ಸದಸ್ಯರಿಗಾಗಿ ಚುನಾವಣೆ ನಡೆಸುತ್ತಿದ್ದಾರೆ. ಮಂತ್ರಿಗಳ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆಗೆ ಮುಂದಾಗಿದೆ. ಆದರೆ, ನರೇಂದ್ರ ಮೋದಿ ಬಡವರ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ನವನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನದಲ್ಲಿ ಪ್ರಚಾರ ಮುಗಿಯಲಿದೆ. ಚುನಾವಣೆಗೆ ಕಾಯುತ್ತಿದ್ದೇವೆ. ಕರಾವಳಿ, ಕಿತ್ತೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವುದು ಜನರ ಬಯಕೆಯಾಗಿದೆ. ಮೋದಿಜಿ ದೇಶದ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಜನರಿಗೂ ಮನವರಿಕೆಯಾಗಿದೆ ಎಂದರು.

ಸಚಿವ ಸಂತೋಷ ಲಾಡ್ ಪ್ರಧಾನಿ ಮೋದಿ ಬಗ್ಗೆ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. 20 ದಿನಗಳಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಲಾಡ್ ಅವರು ಪ್ರಧಾನಿಯನ್ನು ಚರ್ಚೆಗೆ ಕರೆದಿದ್ದಾರೆ. ಡಿಬೇಟ್ ಮಾಡಲು ಪಕ್ಷದ ಮುಖಂಡರಾದ ರಾಹುಲ್ ಕರೆಯುತ್ತಿಲ್ಲ. ಲಾಡ್ ಕರೆಯುತ್ತಿದ್ದಾರೆ. ರಾಹುಲ್ ಡಿಬೆಟ್‌ ಮಾಡುವ ಸ್ಥಿತಿಯಲ್ಲಿದ್ದಾರಾ ಎನ್ನುವುದನ್ನು ಅವರು ಮನವರಿಕೆ ಮಾಡಿಕೊಳ್ಳಬೇಕು. ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರಿಸಲಾಗದ ರಾಹುಲ್ , ರಾಯಬರೇಲಿಗೆ ಓಡಿ ಹೋಗಿದ್ದಾರೆ. ಮೋದಿ ಜತೆ ಡಿಬೆಟ್‌ಗೆ ಬರುತ್ತಾರಾ? ಈ ಬಗ್ಗೆ ಲಾಡ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

14 ಮಂದಿ ಪ್ರಧಾನಿಗಳು ಮಾಡದ ಕೆಲಸ ನರೇಂದ್ರ ಮೋದಿ ಮಾಡಿದ್ದಾರೆ. ದೇಶದ ಖಜಾನೆ ಲೂಟಿ ಮಾಡಿ, ದೇಶದ ಆರ್ಥಿಕ ಮಟ್ಟ ಕುಸಿಯುವಂತೆ ಮಾಡಿದ ಕಾಂಗ್ರೆಸ್ಸಿಗರ ಮಾತಿಗೆ ಬೆಲೆ ಕೊಡಬೇಡಿ. ಫಲಿತಾಂಶ ಬಳಿಕ ಇಲ್ಲಿನ ಸಚಿವರು ಪಶ್ಚಾತಾಪ ಪಡಬೇಡಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ