ಪಕ್ಷವು ತೆಗೆದುಕೊಂಡಿರುವ ತೀರ್ಮಾನ ಸಲ್ಲ । ಹೈಕಮಾಂಡ್ ತಾರತಮ್ಯ ಧೋರಣೆಯ ಪರಮಾವಧಿ, ಇಬ್ಬಗೆ ನೀತಿ
ಇದರಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು, ಸಿ.ಎಂ.ರಾಜಕೀಯ ಕಾರ್ಯದರ್ಶಿಗಳು, ಇಬ್ಬರು ಶಾಸಕರು. ಓರ್ವ ವಿಧಾನ ಪರಿಷತ್ ಶಾಸಕರು ತಮ್ಮ ರಾಜಿನಾಮೆ ಪತ್ರಗಳನ್ನು ರಾಜ್ಯ ರಾಜಧಾನಿ ಬೀದಿಯಲ್ಲಿ ನಿಂತು ಇಡೀ ಪಕ್ಷವನ್ನು ಬ್ಲಾಕ್ಮೇಲ್ ಮಾಡಿ ೧೪೦ ವರ್ಷ ಇತಿಹಾಸವಿದ್ದ ಪಕ್ಷದ ಮಾನ ಮಾರ್ಯದೆ ಬೀದಿ ಬೀದಿಗಳಲ್ಲಿ ಹರಾಜು ಹಾಕಿದ್ದನ್ನು ಇಡೀ ರಾಷ್ಟ್ರವೇ ವೀಕ್ಷಿಸುವಂತೆ ಮಾಡಿದ್ದು ನಾಚಿಕೆಗೇಡು ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣರ ಮೇಲೆ ಹಲ್ಲೆ ಮಾಡಿ ಕತ್ತು ಹಿಡಿದು ವೇದಿಕೆಯಿಂದ ಹೊರಗೆ ದಬ್ಬಿದರೂ ಜಿಲ್ಲೆಯ ನಾಯಕರುಗಳು ಮೂಕ ಪ್ರೇಕ್ಷರಂತೆ ವರ್ತಿಸಿದರು ಆಗಲು ಇವರ ವಿರುದ್ಧ ಯಾವುದೇ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಏಕೆ ಆತ ಓರ್ವ ಹಿಂದುಳಿದ ವರ್ಗದವರನೆಂದು ಅವರ ಪರವಾಗಿ ಯಾವ ನಾಯಕರು ಮುಂದಾಗಲಿಲ್ಲ ಏಕೆಂದು ಪ್ರಶ್ನಿಸಿದರು.
ಕರ್ನಾಟಕ ದಲಿತ ರೈತ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ಮಾತನಾಡಿ, ಶಾಸಕರಾದ ಡಾ.ಕೊತ್ತೂರು.ಜಿ.ಮಂಜುನಾಥ್ ಕಳೆದ ಸಾಲಿನಲ್ಲಿ ಮುಳಬಾಗಿಲಿನ ಮೀಸಲು ಕ್ಷೇತ್ರದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಶಾಸಕರಾಗಿ ಆಡಳಿತ ನಡೆಸಿದರು. ಈ ಸಂಬಂಧವಾಗಿ ನ್ಯಾಯಾಲಯಗಳ ವಿಚಾರಣೆಯಲ್ಲಿ ಸಾಕ್ಷಾಧಾರಗಳ ಸಾಮೇತ ರುಜುವಾತು ಅಗಿದ್ದರೂ ಸರ್ಕಾರವು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಮೊದಲು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ನ್ಯಾಯಾಲಯದಲ್ಲಿ ಸುಳ್ಳು ಜಾತಿಯ ಪ್ರಮಾಣ ಪತ್ರವೆಂದು ಸಾಭೀತು ಆಗಿ ತೀರ್ಪು ಹೊರ ಬಂದಿದೆ. ಈಗ ಇದರ ವಿರುದ್ದ ಸರ್ಕಾರ ಹಾಗೂ ಜಿಲ್ಲಾಧಿಕಾರಿ ಕ್ರಮಕೈಗೊಳ್ಳುವ ಅಧಿಕಾರ ಇದ್ದರೂ ಸಹ ಕ್ರಮ ಕೈಗೊಳ್ಳದೆ ತಾರತಮ್ಯ ಮಾಡುತ್ತಿರುವುದು ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗರ ಸಂಘ ಅಧ್ಯಕ್ಷ ಕೆ.ರೋಹನ್ಗೌಡ, ಮುಖಂಡರಾದ ಮುನಿರಾಜು. ಚಲಪತಿ, ರವಿ, ಗೋವಿಂದ ರಾಹು ಇದ್ದರು.