ಕನ್ನಡಪ್ರಭ ವಾರ್ತೆ ಮಂಗಳೂರು
ಹಿಂದು ಸಂಘಟನೆಗಳು ಬೆಂಬಲಿಸಲಿ:
ದೇವರನ್ನು ಇಷ್ಟು ದೊಡ್ಡ ರೀತಿಯಲ್ಲಿ ಅವಮಾನ ಮಾಡುವಾಗ ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡುವವರು ಯಾಕೆ ಮಾತನಾಡುತ್ತಿಲ್ಲ? ಹಿಂದೂ ಸಂಘಟನೆಗಳು ಇದುವರೆಗೆ ಯಾಕೆ ಧ್ವನಿ ಎತ್ತಿಲ್ಲ? ಈ ನನ್ನ ಹೋರಾಟಕ್ಕೆ ಅವರೂ ಕೈಜೋಡಿಸಲಿ, ಇಂಥ ಸಂದರ್ಭದಲ್ಲೂ ಧ್ವನಿ ಎತ್ತದಿದ್ದರೆ ದೇವರಿಗೆ ಅವಮಾನಿಸಿದಂತಾಗುತ್ತದೆ ಎಂದು ಮಿಥುನ್ ರೈ ಆಹ್ವಾನ ನೀಡಿದರು.ಗೋಮಾಳ ಜಾಗದಲ್ಲಿ ಅಕ್ರಮ ಪಾರ್ಕ್:
ಸರ್ಕಾರದ ಕಂದಾಯ ಕಾರ್ಯದರ್ಶಿ ೧೫.೦೩.೨೩ರಲ್ಲಿ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದು, ಸರ್ವೇ ನಂಬ್ರ ೩೨೯/೧ರಲ್ಲಿ ೧.೫೮ ಎಕರೆ ಜಮೀನು ಗೋಮಾಳ ಆಗಿದ್ದರಿಂದ ಪರಶುರಾಮ ಥೀಮ್ ಪಾರ್ಕ್ ಕಟ್ಟಿಸುವ ಕುರಿತಾದ ಅರ್ಜಿಯನ್ನು ತಿರಸ್ಕರಿಸಿದ್ದಾಗಿ ಆದೇಶ ಮಾಡಿದ್ದರು. ಸ್ಥಳೀಯ ಪಿಡಿಒಗೂ ಆ ಆದೇಶ ಪ್ರತಿ ಬಂದಿದೆ. ಗೋಮಾಳ ಜಾಗ ಅಂತ ಗೊತ್ತಾದ ನಂತರವೂ ತರಾತುರಿಯಲ್ಲಿ ಆ ಜಾಗದಲ್ಲಿ ಥೀಮ್ ಪಾರ್ಕ್ ಕಟ್ಟಲು ಮುಂದಾದದ್ದು ಯಾಕೆ ಎಂದು ದಾಖಲೆಗಳನ್ನು ತೋರಿಸಿದ ಮಿಥುನ್ ರೈ, ಪಾರ್ಕ್ ಸ್ಥಾಪನೆ ಮೊದಲೇ ಅಧಿಕಾರಿಗಳು ಕಾರ್ಕಳ ಶಾಸಕ ಸುನಿಲ್ ಕುಮಾರ್ ಗಮನಕ್ಕೆ ಗೋಮಾಳ ಜಾಗದ ವಿಚಾರವನ್ನು ತಿಳಿಸಿದ್ದಾರೆ. ತಿಳಿಸಿಲ್ಲ ಎಂದರೆ ಆ ಕುರಿತು ಆಣೆ ಪ್ರಮಾಣಕ್ಕೆ ಸಿದ್ಧ ಎಂದು ಸವಾಲು ಹಾಕಿದರು.ಈ ಪ್ರಕರಣವನ್ನು ಉನ್ನತ ತನಿಖೆ ನಡೆಸುವುದಾಗಿ ಸಿಎಂ ಹೇಳಿದ್ದು, ತನಿಖೆ ನಡೆತಿದೆ. ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಈ ಪ್ರತಿಮೆಯನ್ನು ಪೂರ್ಣ ಮಾಡಿ ತೋರಿಸ್ತೇವೆ ಎಂದರು.
ಕಾರ್ಕಳ ಪುರಸಭೆ ಸದಸ್ಯ ಶುಭೋದ್ ರಾವ್, ಮುಖಂಡರಾದ ಎ.ಸಿ. ವಿನಯರಾಜ್, ವಿಶ್ವಾಸ್ದಾಸ್, ಅನಿಲ್ ಪೂಜಾರಿ, ಪ್ರವೀಣ್ಚಂದ್ರ ಆಳ್ವ, ದುರ್ಗಾ ಪ್ರಸಾದ್, ಪ್ರಕಾಶ್ ಸಾಲ್ಯಾನ್, ರಾಕೇಶ್ ದೇವಾಡಿಗ ಇದ್ದರು.