ಕಾಂಗ್ರೆಸ್‌ ಪ್ರಣಾಳಿಕೆ- ಜಿನ್ನಾ ಸಹವರ್ತಿಗಳು ಸಿದ್ಧಪಡಿಸಿರುವ ಪತ್ರ: ಸಿ.ಟಿ ರವಿ ಟೀಕೆ

KannadaprabhaNewsNetwork |  
Published : Apr 25, 2024, 01:08 AM IST
ಸಿ.ಟಿ. ರವಿ | Kannada Prabha

ಸಾರಾಂಶ

ಕಾಂಗ್ರೆಸ್‌ ಘೋಷಣಾ ಪತ್ರ (ಪ್ರಣಾಳಿಕೆ) ಸಿದ್ಧಪಡಿಸಿದ್ದು ಮಹಮದ್‌ ಆಲಿ ಜಿನ್ನಾ ಸಹವರ್ತಿಗಳು ಎಂದು ಮಾಜಿ ಸಚಿವ ಸಿ.ಟಿ. ರವಿ ಟೀಕಿಸಿದ್ದಾರೆ.

ಚೆಂಬಿನ ಜಾಹೀರಾತಿಗೆ ತಕ್ಕಂತೆ ಕಾಂಗ್ರೆಸ್‌ ನಡೆದುಕೊಂಡಿದೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಂಗ್ರೆಸ್‌ ಘೋಷಣಾ ಪತ್ರ (ಪ್ರಣಾಳಿಕೆ) ಸಿದ್ಧಪಡಿಸಿದ್ದು ಮಹಮದ್‌ ಆಲಿ ಜಿನ್ನಾ ಸಹವರ್ತಿಗಳು ಎಂದು ಮಾಜಿ ಸಚಿವ ಸಿ.ಟಿ. ರವಿ ಟೀಕಿಸಿದ್ದಾರೆ.

ತಾಲಿಬಾನಿಗಳಿಗೆ ಸಂತೋಷಪಡಿಸುವ ಯೋಚನೆ ಮತ್ತು ಚಿಂತನೆಗಳು ಈ ಘೋಷಣಾಪತ್ರದಲ್ಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೋಲು ಖಚಿತ, ಹಾಗಾಗಿ ಹತಾಶರಾಗಿ ಚೊಂಬಿನ ಜಾಹೀರಾತು ನೀಡಿದ್ದಾರೆ. ಕಾಂಗ್ರೆಸ್‌ ಸರ್ಕಾರದ ನಡೆ ನೋಡಿದರೆ ಜಾಹೀರಾತಿನ ತಕ್ಕಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ರು ರಾಜ್ಯದ ಜನರಿಗೆ ಚೆಂಬು ಕೊಟ್ರು, ಹಾಲು ಉತ್ಪಾದಕರ ಸಬ್ಸಿಡಿ ಹಣ ನೀಡಿಲ್ಲ. ಅಬಕಾರಿ ಸುಂಕ ಹೆಚ್ಚಳ ಮಾಡಿದ್ರು, ಆಸ್ತಿ ತೆರಿಗೆ ಹೆಚ್ಚಿಸಿದ್ರು, ಸಂವಿಧಾನ ದುರ್ಬಳಕೆ ಮಾಡಿಕೊಂಡ್ರು, ಮೀಸಲಾತಿ ವಿರೋಧಿಗಳೆಂದು ಆರೋಪಗಳ ಸುರಿಮಳೆ ಸುರಿಸಿದರು.

ಕಾರ್ಪೊರೇಟ್‌ ಕಂಪನಿಗಳ ಸಾಲ ಮನ್ನಾ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪಕ್ಷ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಇದು ಸುಳ್ಳು. ಸಾಲವನ್ನು ವಸೂಲಿ ಮಾಡಲಾಗಿದೆ. 2027 ಜಾಗತಿಕ ಆರ್ಥಿಕ ಶಕ್ತಿ ಆಗಬೇಕೆಂಬುದು ಪ್ರಧಾನಿಯವರ ಆಶಯವಾಗಿದೆ ಎಂದರು.

ಈ ದೇಶದಲ್ಲಿ ಸ್ವಾತಂತ್ರ್ಯ ನಂತರ ಅತಿ ಹೆಚ್ಚು ವರ್ಷ ಆಡಳಿತ ನಡೆಸಿರೋದು ಕಾಂಗ್ರೆಸ್‌ ಪಕ್ಷ. ಜನರ ಬದುಕು ಬದಲಾಗಲಿಲ್ಲ, ಚಿಂತನೆಯೂ ಇಲ್ಲ ಆಸೆ ತೋರಿಸಿ ಮತ ಪಡೆದ ವಂಚನೆಯ ತಂತ್ರ ಅವರ ಘೋಷಣಾ ಪತ್ರದಲ್ಲಿ ಅಡಗಿದೆ. ಗರಿಬೀ ಹಠಾವೋ ಅಂದ್ರು, ಗರಿಬೀ ಹಠಾವೋ ಆಗಿದ್ದು ಕಾಂಗ್ರೆಸ್‌ ಪಕ್ಷದ ನಾಯಕರದ್ದು, ಆ ಪಕ್ಷದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಅಡಗಿದೆ. ಜಾತಿಯತೆ ವ್ಯವಸ್ಥೆಯನ್ನು ಬಲವಾಗಿ ತೂರಿದ್ದರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ, ಮುಖಂಡರಾದ ಪ್ರೇಮ್‌ಕುಮಾರ್‌, ಮಧುಕುಮಾರ್‌ ರಾಜ್‌ ಅರಸ್‌, ಪುಷ್ಪರಾಜ್‌, ಸೋಮಶೇಖರ್‌, ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 24 ಕೆಸಿಕೆಎಂ 1

----

2ಕ್ಕೆ..ಲೀಡ್‌-2/ ಮೋದಿ ಸರ್ಕಾರ ವಿಫಲ- ಡಾ. ಅಂಶುಮಂತ್‌ಶೋಭಾರವರ ವೈಫಲ್ಯತೆ ಕೇಂದ್ರ ಸರ್ಕಾರಕ್ಕೂ ಅನ್ವಯಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿಯವರೇ ಗೋ ಬ್ಯಾಕ್‌ ಶೋಭಾ ಎಂದು ಕರೆ ನೀಡಿದ್ದರು. ಇದು, ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಅಂಶುಮಂತ್‌ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ರೈತರ ಹಾಗೂ ಕಾಫಿ ಬೆಳೆಗಾರರ ಗಂಭೀರ ಸಮಸ್ಯೆಗಳು ಇವೆ. ಅವುಗಳನ್ನು ಕೇಂದ್ರ ಸರ್ಕಾರದ ಗಮನ ಸೆಳೆದು ಪರಿಹಾರ ಮಾಡಲು ಕೇಂದ್ರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಆಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಬಹಳಷ್ಟು ಅವಕಾಶ ಇತ್ತು. ಆ ನಿಟ್ಟಿನಲ್ಲಿ ಅವರು ಪ್ರಯತ್ನ ಮಾಡಲೇ ಇಲ್ಲ. ಸರ್ಫೇಸಿ ಆಕ್ಟ್‌ಗೆ ತಿದ್ದುಪಡಿ ತಂದು ಕಾಫಿ ಬೆಳೆಗಾರರನ್ನು ಉಳಿಸುವ ಕೆಲಸ ಮಾಡಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಫಿ ಬೆಳೆಗಾರರಿಗೆ ಕಂದಾಯ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಕೆಲಸ ಕಾಂಗ್ರೆಸ್‌ ಮಾಡಿತು. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಸರ್ಫೇಸಿ ಕಾಯ್ದೆ ಮೂಲಕ ಭೂಮಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡ್ತಾ ಇದೆ ಎಂದ ಅವರು, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಬಿಜೆಪಿ ಪ್ರಾತಿನಿಧ್ಯ ಇತ್ತು. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿಲ್ಲ ಎಂದರು.

ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಸಂಸದರಾಗಿದ್ದಾಗ ಚಿಕ್ಕಮಗಳೂರಿಗೆ ನೂತನ ರೈಲು ಬಂದಿತು. ನಂತರ 10 ವರ್ಷ ಶೋಭಾ ಕರಂದ್ಲಾಜೆ ಇದ್ದರು ಹೊಸದಾಗಿ ರೈಲು ತರುವ ಕೆಲಸ ಆಗಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇದೆ ಎಂದರು, ಅದರಿಂದ ಯಾವುದೇ ರೀತಿಯ ಅನುಕೂಲ ಆಗಲಿಲ್ಲ. ಈ ರೀತಿಯ ಹಲವು ವೈಫಲ್ಯತೆ ಇರುವುದರಿಂದ ಬಿಜೆಪಿಯವರಿಗೆ ಪ್ರಚಾರ ಮಾಡಲು ಯಾವುದೇ ವಿಚಾರ ಇಲ್ಲ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ರೂಬಿನ್ ಮೋಸಸ್‌, ಬಿ.ಎಚ್‌. ಹರೀಶ್‌, ತನೋಜ್‌ ನಾಯ್ಡು, ಹಿರೇಮಗಳೂರು ರಾಮಚಂದ್ರ ಇದ್ದರು.ಪೋಟೋ ಫೈಲ್‌ ನೇಮ್‌ 24 ಕೆಸಿಕೆಎಂ 2

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಹೊರ ದೇಶಗಳೊಂದಿಗೆ ಪೈಪೋಟಿ ನಡೆಸಿ
ಕ್ರೀಡಾ ಸಾಧಕಿ ಶಗುನ್‌ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ