ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಚಾರಕ್ಕಾಗಿ ಸುತ್ತಾಡಿರುವಾಗ ಇದು ನನಗೆ ಅನುಭವಕ್ಕೆ ಬಂದಿದ್ದು, ಉತ್ತರ ಕರ್ನಾಟಕದಲ್ಲಿಯಂತೂ ಬಿಜೆಪಿಗೆ ಒಂದೇ ಒಂದು ಸ್ಥಾನವೂ ಲಭಿಸುವುದಿಲ್ಲ ಎಂದರು.
ಯಡಿಯೂರಪ್ಪ ಕಾಂಗ್ರೆಸ್ ಗೆಲ್ಲುವ ಎರಡು ಕ್ಷೇತ್ರಗಳ ಹೆಸರು ಹೇಳಿ ಎನ್ನುತ್ತಿದ್ದಾರೆ, ಆದರೆ, ನಾನು ಉತ್ತರ ಕರ್ನಾಟಕದ 12 ಕ್ಷೇತ್ರಗಳ ಹೆಸರು ಹೇಳುತ್ತೇನೆ. ರಾಜ್ಯಾದ್ಯಂತ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬಡತನ ನಿವಾರಣೆಯಾಗಿದೆ. ಇದೇ ಮಾದರಿಯಲ್ಲಿಯೂ ಕೇಂದ್ರದಲ್ಲಿ ಬಡತನ ನಿವಾರಣೆ ಮಾಡಲಾಗುವುದು ಎಂದರು.
ಪತ್ರ ಪರಿಶೀಲನೆ:ನಾನು 371 ಜೆ ಸ್ಥಾನಮಾನ ಅನುಷ್ಠಾನದ ಕುರಿತು ಬರೆದಿರುವ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಸತ್ಯಾಸತ್ಯತೆ ಪರಿಶೀಲನೆ ಮಾಡುತ್ತೇನೆ ಮತ್ತು ಹಾಗೊಂದು ವೇಳೆ ಅದು ಸುಳ್ಳಾಗಿದ್ದರೇ ತನಿಖೆ ನಡೆಸಲಾಗುವುದು ಎಂದರು.
371 ಜೆ ಅನುಷ್ಠಾನದಲ್ಲಿ ನಾನು ಸಾಕಷ್ಟು ಶ್ರಮಿಸಿದ್ದೇನೆ. ಕಲ್ಯಾಣಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ನೇಮಕಾತಿಗಳಲ್ಲಿ ಶೇ. 8 ಮೀಸಲಾತಿಯನ್ನು ಕೇಳಿರದಿದ್ದರೂ ನೀಡಿದ್ದೇನೆ. ಹೀಗಿದ್ದಾಗ ನಾನು ಅದರ ವಿರುದ್ಧವಾಗಿ ಪತ್ರ ಬರೆಯಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಯಾರೋ ಸುಳ್ಳು ಹರಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.