- ಹಿಂದೂಗಳು ಒಂದಾಗಿದ್ದರಿಂದ ಕಾಂಗ್ರೆಸ್ಗೂ, ಮುಸ್ಲಿಂರಿಗೂ ಸಮಾಧಾನವಿಲ್ಲ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಕಾಂಗ್ರೆಸ್ನವರು ಒಂದು ರೀತಿಯಲ್ಲಿ ಮುಸ್ಲಿಮರಿಗೆ ಹುಟ್ಟಿದವರಂತೆ ಆಡುತ್ತಿದ್ದಾರೆ. ಹೀಗೆ ಮುಸ್ಲಿಮರನ್ನು ಅತಿಯಾಗಿ ಓಲೈಕೆ ಮಾಡಿದ ಕಾಂಗ್ರೆಸ್ ಇಡೀ ದೇಶದಲ್ಲೇ ಸೋಲು ಕಂಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಮುಸ್ಲಿಮರು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದರೂ ಕ್ರಮ ಜರುಗಿಸಿಲ್ಲ. ಪಾಕಿಸ್ತಾನ ಜಿಂದಾಬಾದ್ ಅಂದವರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಇಡೀ ರಾಜ್ಯದಲ್ಲಿ ಹಿಂದೂ ಸಮಾಜ ಒಂದಾಗಿರುವುದಕ್ಕೆ ಇತ್ತ ಕಾಂಗ್ರೆಸ್ ಸರ್ಕಾರಕ್ಕೂ ಸಮಾಧಾನವಿಲ್ಲ, ಅತ್ತ ಈ ರಾಜ್ಯದ ಮುಸ್ಲಿಮರಿಗೂ ಸಮಾಧಾನವಿಲ್ಲ. ರಾಜ್ಯದಲ್ಲಿ ಗಣೇಶೋತ್ಸವಗಳನ್ನು ಮಾಡಬೇಕೋ ಅಥವಾ ಬೇಡವೋ ಕಾಂಗ್ರೆಸ್ ಸರ್ಕಾರ ಹೇಳಿ ಬಿಡಲಿ ನೋಡೋಣ. ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಸರ್ಕಾರವು ಭಾರತ್ ಮಾತಾ ಕೀ ಜೈ ಘೋಷಣೆ ಮಾಡಬೇಕೋ ಅಥವಾ ಬೇಡವೋ ಎಂಬುದನ್ನೂ ಸ್ಪಷ್ಟ ಮಾಡಿ ಬಿಡಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.ಮಸೀದಿಗಳ ಮುಂದೆ ಶ್ರೀ ಗಣೇಶ ಮೆರವಣಿಗೆ ಸಾಗುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಕಾಂಗ್ರೆಸ್ ಸರ್ಕಾರ ಹೇಳಿಬಿಡಲಿ. ರಾಜ್ಯಾದ್ಯಂತ ಹಳ್ಳಿಹಳ್ಳಿಗಳ ಪ್ರತಿ ಗಣೇಶೋತ್ಸವದಲ್ಲೂ ಯುವಕರು ಹಿಂದುತ್ವದ ಬಗ್ಗೆ ಜಾಗೃತರಾಗಿದ್ದಾರೆ. ನಾನಾಗಲೀ, ಬಸವನಗೌಡ ಪಾಟೀಲ ಯತ್ನಾಳ್ ಆಗಲಿ ಹಿಂದುತ್ವದ ಪರ ಇಲ್ಲಿಗೆ ಬಂದಿದ್ದೇವೆ. ಇಡೀ ರಾಜ್ಯದಲ್ಲಿ ಹಿಂದುತ್ವದ ಪರ ನಿಲ್ಲುತ್ತೇವೆ. ಎಲ್ಲಿಯವರೆಗೆ ಮುಸಲ್ಮಾನರ ಬೆಂಬಲಿತ ಕಾಂಗ್ರೆಸ್ ಸರ್ಕಾರ ರಾಜ್ಯದಿಂದ ತೊಲಗುವುದಿಲ್ಲವೋ, ಅಲ್ಲಿಯವರೆಗೆ ಹಿಂದುತ್ವದ ಪರ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದು ಹೇಳಿದರು.
ಮೀಸಲಾತಿ ಹೆಸರಲ್ಲಿ ಮೊಸಳೆ ಕಣ್ಣೀರು:ಕಾಂಗ್ರೆಸ್ ಸರ್ಕಾರದವರು ಕುರುಬರಿಗೆ ಎಸ್ಟಿ ಮೀಸಲಾತಿ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬೀದರ್, ಕಲುಬುರಗಿ, ಯಾದಗಿರಿ ಭಾಗದ ಕುರುಬರಿಗೆ ಬಹಳ ಹಿಂದೆಯೇ ಎಸ್ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಹೋಗಿತ್ತು. ಈಗ ಕ್ಲ್ಯಾರಿಪಿಕೇಷನ್ಗೆ ಕೇಂದ್ರದಿಂದ ಬಂದಿದೆ. ತಾನೇ ಏನೋ ಮಾಡಿದ್ದೇನೆ, ಕಾಂಗ್ರೆಸ್ ಸರ್ಕಾರವೇ ಏನೋ ಮಾಡುತ್ತೆಂಬಂತೆ ನಾಟಕ ಮಾಡಿದರು. ಎಸ್ಟಿ ಮೀಸಲಾತಿ ವಿಚಾರದ ನಾಟಕಕ್ಕಾಗಿಯೇ ನಿನ್ನೆ ಮಂಗಳವಾರ ಸಭೆ ಮಾಡಿದರು. ಆಗಷ್ಟೇ ಅರ್ಥವಾಗಿ ಜನ ಛೀಮಾರಿ ಹಾಕುತ್ತಾರೆಂದು ಸಭೆಯನ್ನೇ ಮುಂದಕ್ಕೆ ಹಾಕಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಟೀಕಿಸಿದರು.
- - -(ಕೋಟ್)
ಹಿಂದೂಗಳು, ಹಿಂದೂ ಮುಖಂಡರು, ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದರೂ ಸುಮ್ಮನಿರುವ ಬಗ್ಗೆ ಜನರು ನಮಗಲ್ಲ ಬಿಜೆಪಿ ನಾಯಕರಿಗೆ ಛೀಮಾರಿ ಹಾಕುತ್ತಿದ್ದಾರೆ. ಹಿಂದೂ ಪರ ಇದ್ದವರಿಗೆ ಎಫ್ಐಆರ್ ಹಾಕುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ ಅಂತಾ ನೀವೇ ಬಿಜೆಪಿ ನಾಯಕರಿಗೆ ಕೇಳಿ. ನಾವು ಎಲ್ಲಾ ಕಡೆ ಸ್ಪಷ್ಟವಾಗಿ ಹಿಂದೂ ಮುಖಂಡರು, ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕಿದ್ದನ್ನು ವಿರೋಧಿಸಿದ್ದೇವೆ. ಮುಸ್ಲಿಮರ ಮೆರವಣಿಗೆಯಲ್ಲಿ ಹತ್ತಾರು ಡಿ.ಜೆ. ಸೌಂಡ್ ಸಿಸ್ಟಂಗಳ ಬಳಸಿದ್ದಕ್ಕೆ ನಾನೇ ಎಷ್ಟೋ ಎಸ್.ಪಿ.ಗಳಿಗೆ ಮಾತನಾಡಿದ್ದೇನೆ, ಎಫ್ಐಆರ್ ಹಾಕುತ್ತೇವೆ ಎಂದಿದ್ದಾರೆ.- ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ.
- - -(ಸಾಂದರ್ಭಿಕ ಚಿತ್ರ)