ಕನ್ನಡಪ್ರಭ ವಾರ್ತೆ ಶಿವಮೊಗ್ಗ ಅಭಿಮಾನಿಗಳು ಮತ್ತು ಬೆಂಬಲಿಗರಾದ ನೀವು ಈಗಿನಿಂದಲೇ ಪ್ರತಿ ಬೂತ್, ವಾರ್ಡ್ಗಳಲ್ಲಿ ನೀವೇ ಸ್ಪರ್ಧಿ ಎಂದು ಭಾವಿಸಿ, ಚುನಾವಣಾ ಪ್ರಚಾರ ನಡೆಸಿ, ಈಶ್ವರಪ್ಪನವರನ್ನು ಗೆಲ್ಲಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ, ಬಿಜೆಪಿ ಪ್ರಮುಖ ಕೆ.ಎಸ್. ಈಶ್ವರಪ್ಪ ತಮ್ಮ ಬೆಂಬಲಿಗರಲ್ಲಿ ವಿನಂತಿಸಿದರು.
ಯಾರೇ ಬಂದು ನನ್ನ ಮನವೊಲಿಸುವ ಪ್ರಯತ್ನ ನಡೆಸಿದರೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಯಾವುದೇ ಎಂಪಿ, ಶಾಸಕ ಸ್ಥಾನದ ಆಕಾಂಕ್ಷಿಯಲ್ಲ. ಅಧಿಕಾರದ ಆಸೆಯಿಲ್ಲ. ಈಗಲೂ ಮೋದಿ ನನ್ನ ದೇವರು. ಬಿಜೆಪಿ ನನ್ನ ತಾಯಿ. ಆದರೆ, ಪಕ್ಷವನ್ನು ಕುಟುಂಬದ ಹಿಡಿತದಿಂದ, ಸರ್ವಾಧಿಕಾರಿ ಧೋರಣೆಯಿಂದ ಬಿಡಿಸಬೇಕು ಎಂಬ ಕಾರಣಕ್ಕೆ ನಾನು ಸ್ಪರ್ಧಿಸುತ್ತಿದ್ದೇನೆ. ಯಡಿಯೂರಪ್ಪ ಕುಟುಂಬದ ರಾಘವೇಂದ್ರ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆಯೇ ಹೊರತು, ಬಿಜೆಪಿಯ ವಿರುದ್ಧ ಅಲ್ಲ. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿಯಲ್ಲಿಯೇ ಇರುತ್ತೇನೆ ಎಂದರು.
ನಾನು ಸಿಗಂದೂರು ಶ್ರೀ ಕ್ಷೇತ್ರಕ್ಕೆ ಹೋಗಿದ್ದೆ. ಅಲ್ಲಿನ ಧರ್ಮದರ್ಶಿ ರಾಮಪ್ಪನವರು ವಿಶೇಷ ಆಸಕ್ತಿ ತೋರಿಸಿ, ನನ್ನನ್ನು ಬರಮಾಡಿಕೊಂಡರು. ಗರ್ಭಗುಡಿವರೆಗೆ ಕರೆದುಕೊಂಡು ಹೋಗಿ, ದೇವಿಯ ದರ್ಶನ ಮಾಡಿಸಿದರು. ಹಿಂದೂ ಭಕ್ತನೊಬ್ಬನನ್ನು ಗೆಲ್ಲಿಸಬೇಕು ಎಂದು ನನ್ನ ಪರವಾಗಿ ರಾಮಪ್ಪನವರೇ ದೇವಿಯನ್ನು ಪ್ರಾರ್ಥಿಸಿದ್ದಾರೆ ಎಂದು ಹೇಳಿದರು.ತಂದೆ ಯಾರಿಗೂ ಅನ್ಯಾಯ ಮಾಡಿಲ್ಲ:
ಹಿಂದುತ್ವದ ಕಾರಣಕ್ಕಾಗಿಯೇ ಈಶ್ವರಪ್ಪನವರು ಸ್ಪರ್ಧೆ ಮಾಡುತ್ತಿದ್ದಾರೆ. ಈಗಾಗಲೇ ನಿರ್ಧಾರವು ಆಗಿದೆ. ಪಕ್ಷ ಉಳಿಯಬೇಕು ಎಂಬುವುದು ಎಲ್ಲರ ಆಶಯವಾಗಿದೆ. ಅವರ ಆಶಯಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
- - - ಬಾಕ್ಸ್-1 * ಬಿಜೆಪಿ ಕಚೇರಿಗೆ ಹೋಗದಿರಲು ಬೆಂಬಲಿಗರ ನಿರ್ಧಾರ ಈಶ್ವರಪ್ಪ ಜೊತೆಗೆ ಗುರುತಿಸಿಕೊಂಡ ಬೆಂಬಲಿಗರು ಇನ್ನು ಮುಂದೆ ಯಾರೂ ಬಿಜೆಪಿ ಕಚೇರಿಗೆ ಹೋಗಬಾರದು ಎಂದು ಬುಧವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
- - - ಬಾಕ್ಸ್-2
- - -
- - - ಬಾಕ್ಸ್-4
ಶಿವಮೊಗ್ಗ: ಲೋಕಸಭಾ ಚುನಾವಣೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಖಂಡಿತ ಆಗಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದ ತಮ್ಮ ಮನೆಯಂಗಳದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಠಕ್ಕೆ ಬಿದ್ದು ಆರು ತಿಂಗಳು ರಾಜ್ಯಾಧ್ಯಕ್ಷರ ಹುದ್ದೆಯನ್ನು ಖಾಲಿ ಇರಿಸಿ, ತಮ್ಮ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿಸಿದರು. ಅವರ ಹಿಂದೆ ಇಡೀ ಲಿಂಗಾಯಿತರು ಇದ್ದಾರೆ, ಬಹಳ ಪ್ರಬಲ ಎಂದು ರಾಷ್ಟ್ರೀಯ ನಾಯಕರು ನಂಬುವಂತೆ ಮಾಡಿದ್ದಾರೆ. ಆದರೆ ಚುನಾವಣೆ ಬಳಿಕ ಇವರ ಶಕ್ತಿ ಏನೆಂದು ಗೊತ್ತಾಗುತ್ತದೆ. ಆ ಬಳಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದರು.ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯಿತರೇ ಬೇಕು ಎಂದಾಗಿದ್ದಾರೆ ಬಸವನಗೌಡ ಯತ್ನಾಳ್ ಇದ್ದರು. ಒಕ್ಕಲಿಗರು ಬೇಕೆಂದರೆ ಸಿ.ಟಿ. ರವಿ, ಹಿಂದುಳಿದವರು ಎಂದಾದರೇ ನಾನೇ ಇದ್ದೆ. ಆದರೆ, ತಮ್ಮ ಪುತ್ರನೇ ಆಗಬೇಕೆಂದು ಹಠ ಹಿಡಿದು ಆ ಸ್ಥಾನ ಪಡೆದರು ಎಂದು ಆರೋಪಿಸಿದರು.
- - - -ಫೋಟೋ:ಶಿವಮೊಗ್ಗದ ಮಲ್ಲೇಶ್ವರ ನಗರದ ತಮ್ಮ ಮನೆಯಲ್ಲಿ ಕರೆಯಲಾಗಿದ್ದ ಬೆಂಬಲಿಗರ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಮಾತನಾಡಿದರು.