ಕನ್ನಡಪ್ರಭ ವಾರ್ತೆ ಸಾಗರ ಸಾಗರ ಕ್ಷೇತ್ರವು ಸಾಂಸ್ಕೃತಿಕವಾಗಿ ಸದೃಢವಾದ ನೆಲಗಟ್ಟು ಹೊಂದಿದ್ದು, ಅದನ್ನು ಪೋಷಿಸುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಹಿತಿ ಡಾ. ನಾ.ಡಿಸೋಜ ಅವರು ವಿ.ಶಂಕರ್ ಬರೆದಿರುವ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಪುಸ್ತಕಗಳು ಇತಿಹಾಸವನ್ನು ನೆನಪಿಸುವಂತೆ ಇರಬೇಕು. ನಾವು ಮಾಡುವ ಕೆಲಸಗಳು ದಾಖಲಾಗುವ ಜೊತೆಗೆ ಮುಂದಿನ ಪೀಳಿಗೆಗೆ ಅದು ಮಾರ್ಗಸೂಚಿ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಡಾ.ನಾ.ಡಿಸೋಜ, ಸಂಪತ್ ಕುಮಾರ್, ಶಂಕರ್ ಆಚಾರ್, ಗಿರಿಜಮ್ಮ ರಾಮಣ್ಣ, ಜಗದೀಶ್ ಒಡೆಯರ್, ಜೆ.ಎಸ್.ಮಾದೇವಾಚಾರ್, ಎಸ್.ಮೋಹನ್ ಮೂರ್ತಿ, ಶೋಭಾ ಲಂಬೋದರ್, ವಾಸುದೇವಮೂರ್ತಿ, ನಿತ್ಯಾನಂದ ಶೆಟ್ಟಿ, ರಾಜು ಜನ್ನೆಹಕ್ಲು, ಮಾಲತಿ ರಾಜಶೇಖರ್, ಶೀಲಾ ನಾಗರಾಜ್, ರಿಧಿ ಲ್ಯಾವಿಗೆರೆ, ನಾಗರಾಜ್ ಸಿ. ಅವರನ್ನು ಸನ್ಮಾನಿಸಲಾಯಿತು.ವಿ.ಶಂಕರ್ ಬರೆದಿರುವ "ದಣಿವರಿಯದ ನಾಯಕ ಕಾಗೋಡು ತಿಮ್ಮಪ್ಪ ", "ನೀರೆ ", "ಹೆಣ್ಣೇ ನೀ ಅಬಲೆಯಲ್ಲ ", "ನಾನು ಕಂಡ ಸಾಗರ ರಂಗಭೂಮಿ ", "ಸರ್ಕಾರಿ ಶಾಲೆ ಪ್ರೀತಿ ಇರಲಿ " ಮತ್ತು ವಿ.ಟಿ.ಸ್ವಾಮಿ ಸಂಪಾದಕತ್ವದಲ್ಲಿ ಹೊರಬಂದಿರುವ "ಶಂಕರ ಗಾನಯಾನ " ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
- - -
7ಕೆ.ಎಸ್.ಎ.ಜಿ.2:ವಿ.ಶಂಕರ್ ಅವರ ಕೃತಿಗಳನ್ನು ಸಾಹಿತಿ ನಾ.ಡಿಸೋಜ ಮತ್ತಿತರ ಗಣ್ಯರು ಬಿಡುಗಡೆ ಮಾಡಿದರು.