ಹಳಿಯಾಳ: ಕೃಷಿ - ಇದೊಂದು ಪವಿತ್ರವಾದ ಕಾಯಕವಾಗಿದ್ದು, ನಮ್ಮ ಅನ್ನದಾತರು, ನೇಗಿಲಯೋಗಿಗಳನ್ನು ಇನ್ನಷ್ಟು ಸದೃಢರನ್ನಾಗಿಸಲು ಹಾಗೂ ನಮ್ಮ ಯುವಪೀಳಿಗೆಯನ್ನು ಕೃಷಿಯತ್ತ ಆಕರ್ಷಿಸುವ ದಿಸೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಸಾಹಿತ್ಯ ಸಮ್ಮೇಳನ ಆಯೋಜಿಸುವ ಯೋಜನೆಯನ್ನು ಹೊಂದಿದ್ದೇವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.
ಜನಪದ ಕಲಾವಿದ ಸಾಹಿತಿ ಶಂಭು ಹಿರೇಮಠ ಮಾತನಾಡಿ, ಬದುಕನ್ನು ಕಟ್ಟಲಿಕ್ಕೆ ನೀವು ಹೋಗುವಲ್ಲಿ, ಆದರೆ ಕನ್ನಡ ಭಾಷೆಯನ್ನು ಬಿಟ್ಟು ಹೋಗಬೇಡಿ, ನಿಮ್ಮೊಂದಿಗೆ ಕನ್ನಡವನ್ನು ಕರೆದು ಕೊಂಡು ಹೋಗಿ, ಕನ್ನಡವನ್ನು ನಾನು ಬೆಳೆಸುತ್ತೇನೆ ಎಂಬ ವಿಚಾರದ ಬದಲು ಕನ್ನಡವನ್ನು ಬಳಸುತ್ತೇನೆ ಎಂಬ ನಿರ್ಧಾರ ಧೋರಣೆ ನಿಮ್ಮದಾಗಿರಲಿ ಎಂದರು.
ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸುರೇಶ ಕಡೆಮನಿ, ಕೃಷಿಯಲ್ಲಿ ಬಾಬು ಮಿರಾಶಿ, ಸಂಗೀತದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕಿ ಮೇಘನಾ ನಾಯಕ, ಕಲೆಯಲ್ಲಿ ದೇವೇಂದ್ರಪ್ಪ ರಥಕರ, ಪತ್ರಿಕಾಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಓರ್ವಿಲ್ಲ್ ಫರ್ನಾಂಡೀಸ್, ಕ್ರೀಡಾ ಕ್ಷೇತ್ರದಲ್ಲಿ ಉದಯ ಜಾಧವ, ಉದ್ಯಮ ಕ್ಷೇತ್ರದಲ್ಲಿ ಉದ್ಯಮಿ ರಫೀಕ ಬಸರಿಕಟ್ಟಿ, ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯ ವೈದ್ಯರು ಸಮಾಜಸೇವಕ ಡಾ. ಬಿ.ಬಿ. ಮೂಡಬಾಗಿಲ, ಸಮೂಹ ಮಾಧ್ಯಮದಲ್ಲಿ ಅಶೋಕ ಬೆಣಚೆಕರ, ಯೋಗ ಕ್ಷೇತ್ರದಲ್ಲಿ ಶಿವಾಜಿ ಬನೋಶಿ, ಸಹಕಾರ ಕ್ಷೇತ್ರದಲ್ಲಿ ತುಕಾರಾಮ ಗೌಡ, ಜನಪದ ಕ್ಷೇತ್ರದಲ್ಲಿ ನಾಗೇಂದ್ರ ತೋರಸ್ಕರ, ಸಮಾಜಸೇವೆಯಲ್ಲಿ ಬಸವರಾಜ ಬೆಂಡಿಗೇರಿಮಠ, ತೋಟಗಾರಿಕೆಯಲ್ಲಿ ಕುಶಪ್ಪ ಸಿದ್ದಬಾನವರ, ಗ್ರಾಮೀಣ ಕಲೆ ವಿಭಾಗದಲ್ಲಿ ರಾಜಮಾಬಿ ಮುಜಾವರ ಅವರನ್ನು ಗೌರವಿಸಲಾಯಿತು.ಕಸಾಪದ ಕೋಶಾಧ್ಯಕ್ಷ ಕಾಳಿದಾಸ ಬಡಿಗೇರ ಅವರು ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು.
ಹಳಿಯಾಳ ಕಸಾಪ ಅಧ್ಯಕ್ಷೆ ಸುಮಂಗಲ ಅಂಗಡಿ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಪುರಸಭಾ ಸದಸ್ಯ ಉದಯ ಹೂಲಿ, ಸಮಾಜ ಸೇವಕ ಮಂಜುನಾಥ ಪಂಡಿತ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾಕೀರ ಜಂಗೂಬಾಯಿ, ಕಸಾಪ ಪ್ರಮುಖರಾದ ಶಾಂತಾರಾಮ ಚಿಬುಲಕರ, ವಿಠ್ಠಲ ಕೊರ್ವೇಕರ, ಕಾಳಿದಾಸ ಬಡಿಗೇರ, ಗಣಪತಿ ನಾಯ್ಕ, ಗೋಪಾಲ ಅರಿ, ಗೋಪಾಲ ಮೇತ್ರಿ ಇತರರು ಇದ್ದರು.ಸಮ್ಮೇಳನದ ಪಂಚ ನಿರ್ಣಯಗಳು:
2. ಕನ್ನಡ ಸಾಹಿತ್ಯ ಸಂಸ್ಕೃತಿ ಪೋಷಣೆಗಾಗಿ ಹಳಿಯಾಳದಲ್ಲಿ ಒಂದು ಸುಸಜ್ಜಿತ ಸಾಹಿತ್ಯ ಭವನ ಸ್ಥಾಪನೆ ಆಗಬೇಕು.
4. ಕೃಷಿ ಪ್ರಧಾನ ತಾಲೂಕವಾಗಿರುವ ಹಳಿಯಾಳದಲ್ಲಿ ರೈತಭವನ ನಿರ್ಮಾಣವಾಗಬೇಕು ಹಾಗೂ ರೈತರ ಬೆಳೆಗಳಿಗೆ ನ್ಯಾಯೋಚಿತ ಬೆಲೆ ದೊರಕುವಂತಾಗಬೇಕು.