ಕನ್ನಡಪ್ರಭ ವಾರ್ತೆ ಮಂಡ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ ಆವರಣದಲ್ಲಿನ ಪರಿಚಯ ಪುಸ್ತಕ ಪ್ರಕಾಶನ ಮಳಿಗೆಯಲ್ಲಿ ನಡೆದ ಕೆ.ಎಸ್.ಹರೀಶ್ ಕುಮಾರ್ ಅವರ ವಿವೇಕಾ ವಾಣಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಜನರಿಗೆ ಅಗತ್ಯವಿರುವ ಆಧ್ಯಾತ್ಮಿಕ ಮೌಲ್ಯಗಳು ವಿವೇಕಾನಂದರ ಚಿಂತನೆಗಳಲ್ಲಿ ಅಡಗಿವೆ. ಆದರೆ, ಬಹುತೇಕರು ವಿವೇಕಾನಂದರನ್ನು ಮಾತ್ರವಲ್ಲ ಬುದ್ಧ, ಬಸವ, ಗಾಂಧಿ, ಬಾಬಾ ಸಾಹೇಬ್, ಕುವೆಂಪು ಅವರ ವಿಚಾರಧಾರೆಗಳನ್ನು ಸರಿಯಾಗಿ ಓದಿಕೊಂಡಿಲ್ಲ. ಅರ್ಥೈಸಿಕೊಂಡಿಲ್ಲ ಬೇಸರ ವ್ಯಕ್ತಪಡಿಸಿದರು.ಕುವೆಂಪು ಅವರ ವ್ಯಕ್ತಿತ್ವದ ಮೇಲೆ ರಾಮಕೃಷ್ಣ ಪರಮಹಂಸರ ಮತ್ತು ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಮೌಲ್ಯಗಳು, ವಿಚಾರ ಧಾರೆಗಳು, ಚಿಂತನೆಗಳು ಅಪಾರ ಪ್ರಭಾವ ಬೀರಿವೆ. ಅದಕ್ಕೆ ಕುವೆಂಪು ಶುಧ್ಧ ವೈಚಾರಿಕವಾಗಿ ಬೆಳೆಯಲು ಸಾಧ್ಯವಾಯಿತು ಎಂದು ವಿಶ್ಲೇಷಿದರು.
ಈ ಸಂದರ್ಭದಲ್ಲಿ ವಿವೇಕಾವಾಣಿ ಪುಸ್ತಕದ ಕರ್ತೃ ಕೆ.ಎಸ್. ಹರೀಶ್ ಕುಮಾರ್, ಪರಿಚಯ ಪುಸ್ತಕ ಪ್ರಕಾಶನದ ಸಂಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ, ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್.ಎಂ. ನಾಗೇಶ, ಪತ್ರಕರ್ತೆ ಗೊರೂರು ಪಂಕಜ, ಲೇಖಕಿ ನಂದಾದೀಪ, ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್, ಚಿಂತಕ ರಾಜೇಂದ್ರಸಿಂಗ್ ಬಾಬು ಉಪಸ್ಥಿತರಿದ್ದರು.