ಜಿಲ್ಲಾಧಿಕಾರಿಗೆ ಮನವಿ
ಚಾಮರಾಜನಗರ ಜಿಲ್ಲಾ ನಗರಸಭಾಭಿವೖದ್ದಿ ಕೋಶದ ಯೋಜನಾಧಿಕಾರಿಗಳನ್ನು ಅಭಿವೃದ್ಧಿ ದೃಷ್ಟಿಯಿಂದ ಇಲ್ಲೆ ಮುಂದುವರೆಸಿ ಎಂದು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದೆವೆ ಎಂದು ನಗರಸಭಾಧ್ಯಕ್ಷೆ ರೇಖಾ ರಮೇಶ್ ತಿಳಿಸಿದರು.
ರಸ್ತೆ ಅಗಲೀಕರಣಕ್ಕೆ ನಕ್ಷೆ ಗುರುತಿಸುವ ಸಂಬಂಧ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ನಗರಸಭೆಯ ಪ್ರದೀಪ್, ಪ್ರಭಾಕರ್, ನಮಿಯಾ ಅವರನ್ನು ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ, ಇವರ ನಂತರ ಬರುವ ಅಧಿಕಾರಿಗಳು ಅಭಿವೃದ್ಧಿ, ನಗರಸಭೆ ಆಸ್ತಿ ರಕ್ಷಣೆ, ನ್ಯಾಯಾಲಯದಲ್ಲಿ ಪ್ರಕರಣಗಳಿಗೆ ಹೊಂದಿಕೊಳ್ಳಲು ವಿಳಂಬವಾಗಬಹುದು, ಹಾಗಾಗಿ ಇವರನ್ನೆ ಕೆಲ ತಿಂಗಳ ಕಾಲ ಮುಂದುವರಿಸಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸ್ಪಂದಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.ಅದೇ ರೀತಿ ಯೋಜನಾಧಿಕಾರಿಗಳಾದ ಸುಧಾ ಅವರಿಗೂ ಮನವಿ ಸಲ್ಲಿಸಿ ಅವರನ್ನು ಉಳಿಸಲು ಸಹಕರಿಸಿ ಎಂದು ಕೋರಿಕೆ ಸಲ್ಲಿಸಲಾಯಿತು. ಆದರೆ ಅವರು ಸ್ಪಂದಿಸದೆ ನಮ್ಮೊಡನೆ ನಿಮ್ಮ ತಂದೆ ಹುಷಾರಿಲ್ಲದಿದ್ದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ ಎಂದರು.