ಅಗಲೀಕರಣ ವಿರೋಧಿಗಳಿಂದ ಸಿಗದ ನಿರಂತರ ಕುಡಿವ ನೀರಿನ ಯೋಜನೆ

KannadaprabhaNewsNetwork | Published : Jun 4, 2025 12:50 AM
ಮುಖ್ಯರಸ್ತೆಯಲ್ಲಿನ ಅಭಿವೃದ್ಧಿ ಹೀನ ಮನಸ್ಥಿತಿ ಹೊಂದಿರುವ ಕೆಲವರು ತಮ್ಮ ಸ್ವಹಿತಾಸಕ್ತಿಗೆ ಸಾವಿರಾರು ಜನರ ತಾಳ್ಮೆ ಪರೀಕ್ಷೆ ನಡೆಸುತ್ತಿದ್ದಾರೆ. ಇದರಿಂದ ನೂರಾರು ರು. ಕೋಟಿ ವೆಚ್ಚದ ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳು ಕಳೆದ 14 ವರ್ಷದಿಂದ ಸ್ಥಗಿತಗೊಂಡಿವೆ ಎಂದು ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ತಿಳಿಸಿದರು.

ಬ್ಯಾಡಗಿ: ಮುಖ್ಯರಸ್ತೆಯಲ್ಲಿರುವ ಅಗಲೀಕರಣ ವಿರೋಧಿಗಳಿಂದ ₹126 ಕೋಟಿ ವೆಚ್ಚದಲ್ಲಿ ಪಟ್ಟಣದ ಸುಮಾರು 40 ಸಾವಿರ ಜನರಿಗೆ ಸಿಗಬೇಕಾಗಿದ್ದ ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ಸೌಲಭ್ಯ ಸಿಗದಂತಾಗಿದೆ ಎಂದು ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ತಿಳಿಸಿದರು.

ಅಗಲೀಕರಣ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಜೂ. 5ರಂದು ಅನಿರ್ದಿಷ್ಟಾವಧಿ ಬ್ಯಾಡಗಿ ಬಂದ್ ಹೋರಾಟದ ಹಿನ್ನೆಲೆ ಪುರಸಭೆ ಆವರಣದಲ್ಲಿ ಕರೆದಿದ್ದ ಪುರಸಭೆ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದರು.

ಮುಖ್ಯರಸ್ತೆಯಲ್ಲಿನ ಅಭಿವೃದ್ಧಿ ಹೀನ ಮನಸ್ಥಿತಿ ಹೊಂದಿರುವ ಕೆಲವರು ತಮ್ಮ ಸ್ವಹಿತಾಸಕ್ತಿಗೆ ಸಾವಿರಾರು ಜನರ ತಾಳ್ಮೆ ಪರೀಕ್ಷೆ ನಡೆಸುತ್ತಿದ್ದಾರೆ. ಇದರಿಂದ ನೂರಾರು ರು. ಕೋಟಿ ವೆಚ್ಚದ ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳು ಕಳೆದ 14 ವರ್ಷದಿಂದ ಸ್ಥಗಿತಗೊಂಡಿವೆ ಎಂದರು.ಕೋರ್ಟ್ ಛೀಮಾರಿ: ಮುಖ್ಯರಸ್ತೆಯಲ್ಲಿನ ಮೂವರು ಮೂಲ ಸೌಕರ್ಯ ಕಲ್ಪಿಸುವಂತೆ ಪುರಸಭೆ ವಿರುದ್ಧ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಅಗಲೀಕರಣ ಪೂರ್ಣಗೊಳಿಸಿದ ಮೇಲೆಯೇ ಮೂಲ ಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದು, ಹೈಕೋರ್ಟ್ ನಿರ್ದೇಶನದಂತೆ ಜನರಿಗೆ ಯಾವುದೇ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.29 ಕಟ್ಟಡಗಳ ತೆರವು: ಸದಸ್ಯ ಬಸವರಾಜ ಛತ್ರದ ಮಾತನಾಡಿ, 75 ವರ್ಷ ಮೀರಿದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ನಿರ್ದೇಶನ ನೀಡಿದ ಹಿನ್ನೆಲೆ ಕೆಲವೇ ದಿನಗಳಲ್ಲಿ 29 ಕಟ್ಟಡಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಶೀಘ್ರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸದ್ಯಸರಾದ ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ಮಹಬೂಬ್ ಅಗಸನಹಳ್ಳಿ, ಗಾಯತ್ರಿ ರಾಯ್ಕರ, ಸರೋಜಾ ಉಳ್ಳಾಗಡ್ಡಿ, ಫಕ್ಕೀರಮ್ಮ ಛಲವಾದಿ, ಗಣೇಶ ಅಚಲಕರ, ಮೌನೇಶ ಬಡಿಗೇರ ಸೇರಿದಂತೆ ಹಲವರು ಭಾಗವಹಿಸಿದ್ದರು.ಬಕ್ರೀದ್ ಹಬ್ಬದಂದು ಗೋಹತ್ಯೆ ತಡೆಗೆ ಆಗ್ರಹ

ಹಾನಗಲ್ಲ: ಜೂ. 7ರಂದು ಆಚರಿಸಲ್ಪಡುವ ಬಕ್ರೀದ್ ಹಬ್ಬದಂದು ತಾಲೂಕಿನಲ್ಲಿ ಗೋಹತ್ಯೆ ನಡೆಯದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಸಿಪಿಐ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸಿಪಿಐ ಅವರಿಗೆ ಮನವಿ ಸಲ್ಲಿಸಿ, ತಾಲೂಕಿನ ಅಕ್ಕಿಆಲೂರು, ಹಾನಗಲ್ಲ, ನರೇಗಲ್ ಸೇರಿದಂತೆ ತಾಲೂಕಿನಾದ್ಯಂತ ಗೋಹತ್ಯೆ ನಡೆಸುವುದಕ್ಕಾಗಿ ನೂರಾರು ಗೋವುಗಳನ್ನು ತರಲಾಗಿದೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ಅಧಿಕಾರಿಗಳು ಗೋವುಗಳನ್ನು ಕಟ್ಟಿರುವ ಮನೆಗಳಲ್ಲಿ ಪರವಾನಗಿ ಬಗ್ಗೆ ಪರಿಶೀಲಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ. ಗೋವುಗಳಿಗೆ ಪರವಾನಗಿ ಇಲ್ಲದಿದ್ದಲ್ಲಿ ಅಂಥ ಗೋವುಗಳನ್ನು ರಕ್ಷಿಸಿ, ಪರವಾನಗಿ ಇಲ್ಲದೇ ಕಟ್ಟಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜಾಗರಣ ವೇದಿಕೆ ಆಗ್ರಹಿಸಿದೆ.ಪ್ರಸಕ್ತ ವರ್ಷ ಯಾವುದೇ ಗೋಹತ್ಯೆ ನಡೆಯದಂತೆ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು. ಗೋ ಸಾಗಾಟವಾಗುವ ಪ್ರಮುಖ ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಬೇಕು. ಅಕ್ರಮ ಗೋ ಸಾಗಾಣಿಕೆ ಹೆಚ್ಚಾಗಿದ್ದು, ಇವುಗಳ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ.ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ತಾಲೂಕು ಸಂಯೋಜಕ ಲಿಖಿತ ಹದಳಗಿ, ಸಹ ಸಂಯೋಜಕ ಸಂತೋಷ ಅಜಗುಂಡಿ, ಹರೀಶ ಹಾನಗಲ್ಲ, ಬಸವರಾಜ ಹಾದಿಮನಿ, ಕೃಷ್ಣಾ ಕೊರಚರ, ಭರತ ಹುಳ್ಳಿಕಾಶಿ, ಬಸವರಾಜ ಮಟ್ಟಿಮನಿ, ಶಿವು ಮೇದಾರ, ನವೀನ ಹಿರೇಮಠ, ಕುಮಾರಸ್ವಾಮಿ ಹಿರೇಮಠ ಇದ್ದರು.