ಕನ್ನಡಪ್ರಭ ವಾರ್ತೆ ಕೆಜಿಎಫ್ ಮಾದಕ ಪದಾರ್ಥಗಳ ಸಾಗಾಣಿಕೆ ಬಳಕೆ ಮತ್ತು ವ್ಯಸನ ಸಂಘಟಿತ ಅಪರಾಧ ಚಟುವಟಿಕೆಯಾಗಿ ಬೆಳೆದಿದೆ, ಧೂಮಪಾನ, ಮದ್ಯಪಾನ, ಗಾಂಜಾ, ಡ್ರಗ್ಸ್ ಸಂಬಂಧಿ ಪದಾರ್ಥಗಳ ಸೇವನೆ ಪಿಡುಗನ್ನು ತಡೆಗಟ್ಟಬೇಕು ಎಂದು ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ ಹೇಳಿದರು.
ಜನಜಾಗೃತಿ ಮೂಡಿಸಲು ಓಟ
ಮಾದಕವಸ್ತುಗಳಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜನಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯು ಎಸ್ಬಿಐ ಸಹಯೋಗದೊಂದಿಗೆ ೫ ಕಿಲೋಮೀಟರ್ ಓಟದ ಸ್ಪರ್ಧೆಯನ್ನು ಏರ್ಪಡಿಸಿ ಸಮಾಜ ಮುಕ್ತ ಮಾದಕ ವಸ್ತುಗಳ ನಿರ್ಮೂಲನೆಗೆ ಪಣತೊಟ್ಟಿರುವುದು ಶ್ಲಾಘನೀಯ ಎಂದರು.ಮಾದಕ ವಸ್ತುಗಳಿಂದ ದೂರವಿರಿ
ಬಾಲಕರು, ವೃದ್ಧರೂ ಭಾಗಿ
೫ ಕೆ ಒಟವು ನಗರಸಭೆ ಮೈದಾನದಿಂದ ಸೂರಜ್ಮಲ್ ವೃತ್ತ, ಉರಿಗಾಂ ರೈಲ್ವೆ ಅಂಡರ್ ಪಾಸ್ ಮೂಲಕ, ಬೆಸ್ಕಾಂ ಕಚೇರಿ, ಟನೆಟ್ ವೃತ್ತದ ಮೂಲಕ ಸಲ್ಡಾನ ವೃತ್ತಿದಿಂದ ನಗರಸಭೆ ಮೈದಾನದವರೆಗೆ ೫ ಕಿ.ಮೀಟರ್ ವ್ಯಾಪ್ತಿಯಲ್ಲಿ ಮಾರ್ಕ್ ಮಾಡಲಾಗಿತ್ತು. ಓಟದ ಸ್ಪರ್ದೆಯಲ್ಲಿ ೧೦ ೭೦ ವರ್ಷದ ವೃದ್ದರೊಬ್ಬರು ಬಾಗವಹಿಸಿದ್ದು ವಿಶೇಷವಾಗಿತ್ತು, ಅಂದಾಜು ಒಂದು ಸಾವಿರ ಒಟದ ಸ್ಪರ್ಧೆಗೆ ಯುವ ಸಮೂಹ ಬಾಗವಹಿಸಿತ್ತು.ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ,ಯುವ ಸಮೂಹ ಮೊಬೈಲ್ ಹಾಗೂ ಟಿವಿ ದಾಸರಾಗುವ ಬದಲು, ನಿತ್ಯ ಪತ್ರಿಕೆಗಳನ್ನು ಓದಬೇಕು, ಅದು ವಿದ್ಯಾರ್ಥಿಗಳಿಗೆ ಅರಿವು ತಂದುಕೊಡುತ್ತದೆ, ಪೊಷಕರ ಬಳಿ ಮೊಬೈಲ್ ಟಿವಿ ಬದಲು ಪತ್ರಿಕೆಗಳಿಗಾಗಿ ಬೇಡಿಕೆ ಇಡಬೇಕು, ಮಾದಕ ವಸ್ತುಗಳ ಸೇವನೆಯೂ ಇಡೀ ಜೀವನವನ್ನೇ ನಾಶ ಮಾಡುತ್ತದೆ ಎಂದರು. ಸಮಾಜದ ಮೇಲೆ ದುಷ್ಪರಿಣಾಮ
ಮಾದಕ ದ್ರವ್ಯ ಬಳಕೆಯ ಅಡ್ಡ ಪರಿಣಾಮಗಳು, ಸಮಾಜದ ಮೇಲಾಗುವ ದುಷ್ಪಾರಿಣಾಮ, ಹದಗೆಡುವ ಕುಟುಂಬ ವ್ಯವಸ್ಥೆ, ಹಣಕಾಸಿನ ಸಮಸ್ಯೆ ಎಲ್ಲದರ ಅರಿವು, ಯುವ ಸಮೂಹದ ಉತ್ತಮ ಆರೋಗ್ಯಕ್ಕಾಗಿ ೫.ಕೆ ಒಟವು ಕೆಜಿಎಫ್ ಪೊಲೀಸ್ ಜಿಲ್ಲೆಯ ಯುವ ಸಮೂಹಕ್ಕೆ ಸಹಕಾರಿಯಾಗಿದೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹ ಮೂರ್ತಿ ತಿಳಿಸಿದರು.