ಸ್ತ್ರೀಯರಿಂದ ದೇಶಕ್ಕೆ ಕೊಡುಗೆ: ಶಿವಯೋಗೀಶ್ವರ ಶ್ರೀ

KannadaprabhaNewsNetwork |  
Published : Aug 13, 2026, 01:30 AM IST
ಚಿತ್ರ 12ಬಿಡಿಆರ್58 | Kannada Prabha

ಸಾರಾಂಶ

Jagadguru Shivayogishwara Swamy of Bhatambra Niranjana Samsthana Matha stated that the contribution of women to the development of society, family, literature, and the country is unique.

-ಜಿಲ್ಲಾ ಮಟ್ಟದ 3ನೇ ಮಹಿಳಾ ಸಾಹಿತ್ಯ ಸಮ್ಮೇಳನ । ಕಸಾಪ ಜಿಲ್ಲಾ. ತಾಲೂಕು ಘಟಕ ಸಹಯೋಗ

--------

ಕನ್ನಡಪ್ರಭ ವಾರ್ತೆ ಭಾಲ್ಕಿ ಸಮಾಜ, ಕುಟುಂಬ, ಸಾಹಿತ್ಯ, ಮತ್ತು ದೇಶದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅನನ್ಯ ಎಂದು ಭಾತಂಬ್ರಾ ನಿರಂಜನ ಸಂಸ್ಥಾನ ಮಠದ ಜಗದ್ಗುರು ಶಿವಯೋಗೀಶ್ವರ ಸ್ವಾಮಿ ನುಡಿದರು.ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದ ಸಹಯೋಗದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಮೂರನೆಯ ಮಹಿಳಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ತಾಯಿಯಾಗಿ, ಮಾರ್ಗದರ್ಶಕಿಯಾಗಿ ಮತ್ತು ಸಾಧಕಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಕನ್ನಡ ಸಾಹಿತ್ಯ ಉಳಿಸುವಲ್ಲಿಯೂ ಮಹಿಳೆಯರ ಕೊಡುಗೆಯು ಶ್ರೇಷ್ಠವಾಗಿದೆ ಎಂದು ತಿಳಿಸಿದರು.ಧಾರವಾಡದ ಹಿರಿಯ ಸಾಹಿತಿ ಡಾ.ಕಾವ್ಯಶ್ರೀ ಮಹಾಗಾಂವಕರ್ ಸಮಾರೋಪ ನುಡಿಗಳನ್ನಾಡಿದರು.ಸಮ್ಮೇಳನದ ಸರ್ವಾಧ್ಯಕ್ಷೆ ಮಲ್ಲಮ್ಮ ಆರ್ ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಚನಶೆಟ್ಟಿ, ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಉಪಾಧ್ಯಕ್ಷ ಕಾಶಿನಾಥ ಲದ್ದೆ, ನಗರ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ಪ್ರಧಾನ ಕಾರ್ಯದರ್ಶಿ ರಾಜಪ್ಪ ಪಾಟೀಲ್, ಅಶೋಕ ಬಾವುಗೆ, ಚಂದ್ರಕಾಂತ ತಳವಾಡೆ, ಸುಭಾಷ ಕಾರಾಮುಂಗೆ, ಎಸ್.ಎಸ್.ಶಿವಣಕರ, ಎಸ್.ಎಸ್.ಮೈನಾಳೆ, ವೀರಣ್ಣ ಕಾರಬಾರಿ, ಬಸವರಾಜ ದಾನಾ, ಶ್ರೀಕಾಂತ ಭೋರಾಳೆ, ಶಿವರಾಜ ಮಲ್ಲೇಶಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು, ವಲಯ ಕಸಾಪದ ಅಧ್ಯಕ್ಷ ಹಾಜರಿದ್ದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.

----ಬಾಕ್ಸ್-----

ನಾಲ್ಕು ನಿರ್ಣಯಗಳ ಅಂಗೀಕಾರ

ಡಾ.ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ ಟ್ರಸ್ಟ್ ರಚಿಸುವುದು, ಬಸವಕಲ್ಯಾಣಕ್ಕೆ ರೈಲು ಸಂಚಾರ ಕಲ್ಪಿಸಬೇಕು, ಬೀದರ್ ನ ಕನ್ನಡ ಭವನದ ನಿರ್ವಹಣೆಯ ಉಸ್ತುವಾರಿ ಕನ್ನಡ ಸಾಹಿತ್ಯ ಪರಿಷತ್ತಿಗೆ ವಹಿಸಬೇಕು. ಗಡಿ ಭಾಗದ ಶಾಲೆಗಳಲ್ಲಿ ಅತೀ ಶೀಘ್ರದಲ್ಲಿ ಕನ್ನಡ ಬೋಧಿಸುವ ಶಿಕ್ಷಕರ ನೇಮಕ ಮಾಡಬೇಕು ಸಹಿತ ಸಮ್ಮೇಳನದಲ್ಲಿ ನಾಲ್ಕು ನಿರ್ಣಯಗಳನ್ನು ಅಂಗಿಕರಿಸಲಾಯಿತು.--ಫೋಟೊ----12ಬಿಡಿಆರ್58ಭಾಲ್ಕಿಯ ರೈತ ಕಲ್ಯಾಣ ಮಂಟಪದಲ್ಲಿ ನಡೆದ ಮೂರನೇ ಮಹಿಳಾ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿದ್ದ ಭಾತಂಬ್ರಾ ನಿರಂಜನ ಸಂಸ್ಥಾನ ಮಠದ ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಮ್ಮ ಆರ್ ಪಾಟೀಲ್, ಸುರೇಶ್ ಚನಶೆಟ್ಟಿ, ನಾಗಭೂಷಣ ಮಾಮಡಿ, ಕಾಶಿನಾಥ ಲದ್ದೆ ಸಹಿತ ಪ್ರಮುಖರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮನ ಅಮಾವಾಸ್ಯೆ: ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ
ಗೊಡ್ಡು ಬೆದರಿಕೆಗಳಿಗೆ ಬೆದರಲ್ಲ: ಯೋಗೇಶ್‌