ಕೊಪ್ಪಳ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತಾಯ ಪೂರ್ವಕ, ಆಮಿಷವೊಡ್ಡಿ ಮತಾಂತರ ಆಗುವುದು ತಪ್ಪು. ಅದಕ್ಕೆ ನಮ್ಮ ವಿರೋಧವಿದೆ. ಆದರೆ, ಸ್ವಯಂಪ್ರೇರಣೆಯಿಂದ ಮತಾಂತರವಾದರೆ ತಪ್ಪೇನು ಎಂದರು.
ಪ್ರಜಾಪ್ರಭುತ್ವ ದೇಶದಲ್ಲಿ ಕಾನೂನಿನಡಿ ಮತಾಂತರವಾಗಲು ಅಡ್ಡಿಪಡಿಸುವಂತಿಲ್ಲ ಎಂದ ಸಚಿವರು, ಬಿಜೆಪಿಗರು ಆಡಳಿತ ಮಾಡಿದಂತೆ ನಾವು ಮಾಡಲು ಆಗುವುದಿಲ್ಲ. ಬೆಳಗ್ಗೆ ಇದನ್ನೇ ಉಪಾಹಾರ ತಿನ್ನಬೇಕು, ಮಧ್ಯಾಹ್ನ ಇದೇ ಊಟ ಮಾಡಬೇಕೆಂದು ಹೇಳಲು ಆಗದು. ನಮ್ಮ ಸರ್ಕಾರದಲ್ಲಿ ಸರ್ವರು ಸ್ವತಂತ್ರರು. ಹೀಗಾಗಿ ಸೆ.22ರಿಂದ ನಡೆಯುವ ಸಮೀಕ್ಷೆಯಲ್ಲಿ ಜನರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಬರೆಸುವುದು ಅವರಿಗೆ ಬಿಟ್ಟ ವಿಚಾರ. ಅವರು ಹೇಳಿದಂತೆ ಎಲ್ಲವೂ ದಾಖಲಾಗುತ್ತದೆ. ಮತಾಂತರಗೊಂಡಿದ್ದರೆ ದಾಖಲೆ ಆಗಲಿ. ಇದಕ್ಕೆ ಸೋನಿಯಾ ಗಾಂಧಿ ಹೆಸರು ಎಳೆದು ತರೆಯುವ ಸಣ್ಣತನ ಮಾಡಬಾರದೆಂದು ಬಿಜೆಪಿಗೆ ತಿಳಿ ಹೇಳಿದರು.ಕೆಲವರು ಎಸ್ಸಿ ಕ್ರಿಶ್ಚಿಯನ್, ಲಿಂಗಾಯತ ಕ್ರಿಯಶ್ಚಿನ್, ಕುರುಬ ಕ್ರಿಶ್ಚಿಯನ್ ಬರೆಸಿದರೆ ಪ್ರತ್ಯೇಕ ಗುಂಪು ಮಾಡುತ್ತೇವೆ. ಅವರು ಏನೇನು ಬರೆಸುತ್ತಾರೋ ಬರೆಯಿಸಲಿ, ನಂತರ ಈ ಬಗ್ಗೆ ಆಯೋಗ ತೀರ್ಮಾನಿಸುತ್ತದೆ ಎಂದ ಸಚಿವರು, ಬಿಜೆಪಿಗರು ನರೇಂದ್ರ ಮೋದಿ ಓಲೈಸಲು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಆದರೆ, ನಾವು ಸೋನಿಯಾ ಗಾಂಧಿ ಅವರನ್ನು ಮನವೊಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಈ ಸಮೀಕ್ಷೆ ಬಳಿಕ ಬಿಜೆಪಿಗರಿಗೆ ಅಡ್ರೆಸ್ ಇರುವುದಿಲ್ಲ. ಹೀಗಾಗಿ ಅವರು ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಇದ್ದರು.ನೈತಿಕತೆ ಇಲ್ಲ:
ಇದೀಗ ಸಮೀಕ್ಷೆ ನಡೆಯುತ್ತಿರುವುದರಿಂದ ತುಳಿತಕ್ಕೆ ಒಳಗಾದವರನ್ನು ಗುರುತಿಸಲು, ಅವರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯ ನೀಡಿ ಮೇಲೆತ್ತುವ ಕಾರ್ಯ ಮಾಡಲಾಗುತ್ತದೆ ಎಂದರು.ಗೇಟ್ ಬದಲಿಸಲು ಸಿದ್ಧತೆ: