ಮತಾಂತರ: ಕಷ್ಟದಲ್ಲಿ ಇದ್ದವರೇ ಟಾರ್ಗೆಟ್, ಹಣವೇ ಆಮಿಷ..!

KannadaprabhaNewsNetwork |  
Published : Apr 15, 2025, 12:51 AM IST
ಕಷ್ಟದಲ್ಲಿ ಇದ್ದವರೇ ಟಾರ್ಗೆಟ್, ಹಣವೇ ಆಮಿಷ..! | Kannada Prabha

ಸಾರಾಂಶ

ಶ್ರೀರಂಗಪಟ್ಟಣದಲ್ಲಿ ಬೆಳಕಿಗೆ ಬಂದ ಮತಾಂತರ ಪ್ರಕರಣ ಆಳಕ್ಕೆ ಇಳಿದಷ್ಟೂ ವಿಸ್ತಾರಗೊಳ್ಳುತ್ತಲೇ ಇದೆ. ಈ ಮತಾಂತರ ಪ್ರಕರಣ ಕೇವಲ ಪಾಲಹಳ್ಳಿಗಷ್ಟೇ ಸೀಮಿತವಾಗದೆ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಮೈಸೂರು ಜಿಲ್ಲೆಗೂ ವ್ಯಾಪಿಸಿದೆ. ಕಷ್ಟದಲ್ಲಿರುವವರನ್ನೇ ಗುರಿಯಾಗಿಸಿಕೊಂಡು ಅವರಿಗೆ ಹಣದ ಆಮಿಷ ತೋರಿಸಿ ಮತಾಂತರ ಮಾಡುತ್ತಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಬೆಳಕಿಗೆ ಬಂದ ಮತಾಂತರ ಪ್ರಕರಣ ಆಳಕ್ಕೆ ಇಳಿದಷ್ಟೂ ವಿಸ್ತಾರಗೊಳ್ಳುತ್ತಲೇ ಇದೆ. ಈ ಮತಾಂತರ ಪ್ರಕರಣ ಕೇವಲ ಪಾಲಹಳ್ಳಿಗಷ್ಟೇ ಸೀಮಿತವಾಗದೆ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಮೈಸೂರು ಜಿಲ್ಲೆಗೂ ವ್ಯಾಪಿಸಿದೆ. ಕಷ್ಟದಲ್ಲಿರುವವರನ್ನೇ ಗುರಿಯಾಗಿಸಿಕೊಂಡು ಅವರಿಗೆ ಹಣದ ಆಮಿಷ ತೋರಿಸಿ ಮತಾಂತರ ಮಾಡುತ್ತಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಒಂದು ಕುಟುಂಬವನ್ನು ಮತಾಂತರ ಮಾಡಿದರೆ ಕನಿಷ್ಠ ೨ ರಿಂದ ೩ ಲಕ್ಷ ರು. ಸಿಗುವುದಂತೆ. ಹಣಕ್ಕೆ ಒಪ್ಪದಿದ್ದರೆ ಬೆದರಿಸಿ ಮತಾಂತರ ಮಾಡುವುದು. ಮತಾಂತರ ಆಗದಿದ್ದರೆ ಬ್ರೈನ್ ಟ್ಯೂಮರ್, ಕ್ಯಾನ್ಸರ್ ಬರುತ್ತೆ. ಕ್ರಿಶ್ಚಿಯನ್ ಧರ್ಮ ಅನುಸರಿಸಿದರೆ ಕ್ಯಾನ್ಸರ್ ಗುಣವಾಗುತ್ತೆ ಎಂದೆಲ್ಲಾ ನಂಬಿಸಿ ಮತಾಂತರ ಮಾಡಿದ್ದಾರೆ ಎಂತು ತಿಳಿದುಬಂದಿದೆ.

ಬಲವಂತದ ಮತಾಂತರಕ್ಕೆ ಒಪ್ಪದ ಪತ್ನಿ ಲಕ್ಷ್ಮೀ, ಅತ್ತೆ ಶ್ರುತಿ ಅವರ ಮೇಲೆ ಶ್ರೀಕಾಂತ್ ನಡೆಸಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನ ಕರಾಳ ಮುಖವನ್ನು ಬಾಮೈದ ರವಿಕಿರಣ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಶ್ರೀಕಾಂತ್, ಹರೀಶ್, ಪ್ರಶಾಂತ್ ಹಾಗೂ ಅವರ ತಾಯಿ ಕೃಷ್ಣವೇಣಿ ಮತಾಂತರದ ಹೆಡ್ ಆಫೀಸರ್ಸ್. ಮೊಗರಹಳ್ಳಿ ಮಂಟಿಯಲ್ಲಿ ಚರ್ಚ್ ಮಾಡಿಕೊಂಡಿದ್ದಾರೆ. ಇವರಿಗೆಲ್ಲಾ ಕುಮ್ಮಕ್ಕು ನೀಡುತ್ತಿರುವುದು ಪಾತ್ರೆ ಅಂಗಡಿ ರವಿ. ಅವರ ದಂಧೆ ಬೀದಿಗೆ ಬರುತ್ತಿರುವುದಕ್ಕೆ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ನನ್ನ ಅಕ್ಕನನ್ನು ಮತಾಂತರವಾಗುವಂತೆ ಒತ್ತಡ ಹಾಕುತ್ತಿದ್ದಾರೆ. ಅವರ ಕುಟುಂಬದಿಂದ ನಮಗೆ ಜೀವ ಬೆದರಿಕೆ ಇದೆ. ಮತಾಂತರವಾಗದಿದ್ದರೆ ಡೈವೋರ್ಸ್ ಕೊಡುತ್ತೇನೆ ಇಲ್ಲವೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದೇ ರೀತಿ ಮತಾಂತರದ ಬೆದರಿಕೆ ಹಾಕಿ ಏಳೆಂಟು ವರ್ಷದಿಂದ ಹಲವು ಕುಟುಂಬಗಳನ್ನು ಹಾಳು ಮಾಡಿದ್ದಾರೆ. ಹಿಂದೂಗಳನ್ನು ಮತಾಂತರ ಮಾಡಿ ಚರ್ಚ್‌ಗೆ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕಷ್ಟದಲ್ಲಿರುವ ಕುಟುಂಬಗಳ ಸದಸ್ಯರನ್ನು ಗುರುತಿಸಿ ಚರ್ಚ್‌ಗೆ ಕರೆದುಕೊಂಡು ಹೋಗುವರು. ನಿಮಗೆ ದುಡ್ಡು ಸಿಗುತ್ತದೆ, ಮತಾಂತರವಾದರೆ ಕಷ್ಟಗಳೆಲ್ಲಾ ಪರಿಹಾರವಾಗುವುದಾಗಿ ನಂಬಿಸುವರು. ಬಳಿಕ ಬೈಬಲ್ ಕೊಟ್ಟು ಪ್ರಾರ್ಥನೆ ಮಾಡಿಸುತ್ತಾರೆ. ಆ ವಿಡಿಯೋ ತೆಗೆದು ವಿದೇಶಕ್ಕೆ ಕಳುಹಿಸುತ್ತಾರೆ. ಬಳಿಕ ನೀವು ದುಡಿದ ಹಣದಲ್ಲಿ ಇಂತಿಷ್ಟು ಹಣವನ್ನು ಚರ್ಚ್‌ಗೆ ಕೊಡಬೇಕು. ಇಲ್ಲದಿದ್ದರೆ ಕ್ಯಾನ್ಸರ್, ಬ್ರೈನ್ ಟ್ಯೂಮರ್ ಬರುತ್ತೆ ಅಂತ ಹೆದರಿಸುತ್ತಾರೆ ಎಂದು ಆಪಾದಿಸಿದರು.

ವಾರವಾರವೂ ಚರ್ಚ್ ಹೆಸರಿನಲ್ಲಿ ಸುಲಿಗೆ ಮಾಡುತ್ತಾರೆ. ಪಾಲಹಳ್ಳಿ ಗ್ರಾಮದಲ್ಲೇ ನೂರಕ್ಕೂ ಹೆಚ್ಚು ಜನರು ಮತಾಂತವಾಗಿದ್ದಾರೆ. ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರಿನಲ್ಲೂ ಮತಾಂತರ ಮಾಡಿದ್ದಾರೆ. ಮತಾಂತರ ಮಾಡಿಕೊಂಡೇ ಕೋಟ್ಯಂತರ ರುಪಾಯಿ ಹಣ ಮಾಡಿದ್ದಾರೆ ಎಂದು ದೂಷಿಸಿದರು.

ಒಂದು ಕುಟುಂಬವನ್ನು ಮತಾಂತರಿಸಿದರೆ ಎರಡರಿಂದ ಮೂರು ಲಕ್ಷ ರು. ಹಣ ಸಿಗುತ್ತದೆ. ಕೆಲವರು ಹಣಕ್ಕಾಗಿ, ಮತ್ತೆ ಕೆಲವರು ಭಯದಿಂದ ಮತಾಂತರ ಆಗಿದ್ದಾರೆ. ಮತಾಂತರ ಆಗುತ್ತಿದ್ದಂತೆ ಅವರ ಹೆಸರನ್ನು ಬದಲಾಯಿಸುತ್ತಾರೆ. ಆದರೆ, ಸರ್ಕಾರಿ ಸವಲತ್ತು ಪಡೆಯುವ ಸಲುವಾಗಿ ದಾಖಲೆಗಳಲ್ಲಿ ಹಳೇ ಹೆಸರೇ ಮುಂದುವರೆದಿರುತ್ತದೆ. ಮತಾಂತರ ಮಾಡುವ ಸಲುವಾಗಿಯೇ ಸುಮಾರು ೩೦ ಜನರು ಗುಂಪು ಮಾಡಿಕೊಂಡಿದ್ದಾರೆ. ಅಮಾಯಕರನ್ನೇ ಗುರಿಯಾಗಿಸಿಕೊಂಡು ಮಾನಸಿಕವಾಗಿ ಪರಿವರ್ತನೆ ಮಾಡುತ್ತಿದ್ದಾರೆ. ನೋಡುವುದಕ್ಕೆ ಹಿಂದೂಗಳ ರೀತಿಯೇ ಕಾಣುವ ಮತಾಂತರಿಗಳ ಮನೆಗಳಿಗೆ ಹೋದರೆ ರಾಶಿಗಟ್ಟಲೆ ಬೈಬಲ್ ಸಿಗುತ್ತವೆ ಎಂದು ಹೇಳಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ