ಕೊಪ್ಪಳ ಗವಿಮಠದ ಜಾತ್ರೆಗೆ ದಿನಗಣನೆ ಆರಂಭ

KannadaprabhaNewsNetwork |  
Published : Dec 20, 2025, 02:30 AM IST
19kpl02 ಬರುವ ಜನೇವರಿ 05 ರಿಂದ ಆರಂಭವಾಗಲಿರುವ ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಖ್ಯಾತಿ ಪಡೆದಿರುವ ಕೊಪ್ಪಳ ಗವಿಮಠದ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ಡಿಜಿಟಲ್‌ ವಿಡಿಯೋ ಟ್ರೈಲರ್‌ ಸಾಂಗ್‌ನ್ನು ಜಾತ್ರಾ ಸಿದ್ದತಾ ಸೇವಾ ಕಾರ್ಯಕರ್ತರ ಮೂಲಕ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣಗಳು ಅತ್ಯಂತ ಜನಪ್ರಿಯವಾಗಿರುವುದರಿಂದ ಜನರನ್ನು ಬಹಳ ಸರಳವಾಗಿ ತಲುಪಬಹುದು.

ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಬಣ್ಣಿತವಾಗಿರುವ ಕೊಪ್ಪಳದ ಪ್ರಸಿದ್ಧ ಶ್ರೀಗವಿಮಠದ ಜಾತ್ರೆ ಜ.05 ರಿಂದ ಆರಂಭವಾಗಲಿದ್ದು, ಈಗಾಗಲೇ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಸದಾ ಹೊಸತನದೊಂದಿಗೆ ಪ್ರತಿ ವರ್ಷ ಜರುಗುವ ಜಾತ್ರೆ ವಿಭಿನ್ನವೆನಿಸುತ್ತದೆ. ಲಕ್ಷಾಂತರ ಭಕ್ತರು ಆಗಮಿಸುವ ಜಾತ್ರೆಗೆ ಈ ಬಾರಿಯೂ ಡಿಜಿಟಲ್‌ಆಮಂತ್ರಣ ನೀಡುವ ಟ್ರೈಲರ್‌ಸಾಂಗ್‌ ಬಿಡುಗಡೆಯಾಗಿದೆ. ಈ ಮೂಲಕ ಗವಿಮಠದ ಜಾತ್ರೆಗೆ ಭಕ್ತರನ್ನು ಆಹ್ವಾನಿಸಲಾಗುತ್ತಿದೆ.

“ಭಕ್ತಿಯ ಮನೆ ಮನಗಳಲ್ಲಿ, ಮುಕ್ತಿಯ ಕೆನೆ ನೆನಹಿನಲ್ಲಿ...

ಓಂಕಾರವು ಕೋಟೆಕಟ್ಟಿ,,,, ಬೆಟ್ಟಗಳು ಧ್ಯಾನದಲಿ

ಸಿದ್ದ ಪುರುಷ ಗವಿಸಿದ್ದನೇ ಇಷ್ಟ ಪ್ರಾಣ ಭಾವದಲ್ಲಿ

ಜಾತ್ರೋತ್ಸವ ನಮ್ಮಯಾತ್ರೋತ್ಸವ”...

ಅದ್ಭುತ ಸಾಹಿತ್ಯದ ಸಾಲುಗಳಿಂದ ಈ ವಿಡಿಯೋ ಟ್ರೈಲರ್‌ ಸಾಂಗ್‌ ಶುರುವಾಗುತ್ತದೆ. ಅಧಮ್ಯ, ಸುಂದರ ಭಕ್ತಿ ತುಂಬಿದ ಸಾಲುಗಳಿರುವ ಈ ಸಾಹಿತ್ಯಕ್ಕೆ ಜೀವ ತುಂಬುವ ಕಂಠಸಿರಿಯ ಕೊಪ್ಪಳದ ಗಾಯಕ ಸದಾಶಿವ ಪಾಟೀಲರು ಮನದುಂಬಿ ಹಾಡಿರುತ್ತಾರೆ. ಈ ಹಾಡಿನಲ್ಲಿ ಶ್ರೀಶಿವಶಾಂತವೀರ ಹಾಗೂ ಶ್ರೀ ಮರಿಶಾಂತವೀರ ಮಹಾಸ್ವಾಮಿ ಮೂರ್ತಿಶಿಲ್ಪ, ಭಕ್ತಿ ಸಂಗೀತ, ಚಿಕೇನಕೊಪ್ಪದ ಶರಣರ ದೀರ್ಘದಂಡ ನಮಸ್ಕಾರ, ಜಾತ್ರಾ ಮಹಾದಾಸೋಹದ ಪ್ರಸಾದದ ಸಿದ್ಧತೆ ಮತ್ತು ಭಕ್ತರು ಪ್ರಸಾದ ಸೇವನೆ ಹಾಗೂ ಶ್ರೀ ಗವಿಮಠದ ಸೇವೆಯಲ್ಲಿ ಇತರ ಸೇವೆಯಲ್ಲಿ ತೊಡಗಿದ ವಿವಿಧ ಸೇವಕರ, ಶ್ರೀಮಠದ ಜಾತ್ರೆಯ ಚಿತ್ರಿತ ವೈಶಿಷ್ಟ್ಯಪೂರ್ಣ ಪುಣ್ಯಕಾರ್ಯಗಳು ಅಂತರ್ಗತವಾಗಿವೆ. ಇಲ್ಲಿನ ಪ್ರಾಕೃತಿಕ ಬೆಟ್ಟ-ಗುಡ್ಡಗಳ, ಕೆರೆ,ಸಹಜತೆಯ ವೈಭವ ಹಾಗೂ ಚಿತ್ರಿತ ವೀಡಿಯೋ ತುಣುಕು ಬಳಸಿಕೊಂಡು ಸಂಯೋಜನೆ ಮಾಡಿದ ವೀಡಿಯೋ ಟ್ರೇಲರ್ ಸಾಂಗ್‍ನೊಂದಿಗೆ ಶ್ರೀಮಠದ ಭಕ್ತರಿಗೆ ಈ ವರ್ಷದ ಜಾತ್ರೆಗೆ ಆಹ್ವಾನ ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳು ಅತ್ಯಂತ ಜನಪ್ರಿಯವಾಗಿರುವುದರಿಂದ ಜನರನ್ನು ಬಹಳ ಸರಳವಾಗಿ ತಲುಪಬಹುದು. ಹೀಗಾಗಿ ಶ್ರೀಮಠವೂ ಇಂತಹ ಹೊಸ ಪ್ರಯೋಗ ಪ್ರತಿ ವರ್ಷದ ಜಾತ್ರೆಯಲ್ಲಿಯೂ ಅಳವಡಿಸಿಕೊಂಡು ಭಕ್ತರಿಗೆ ಮಾಹಿತಿ ಹಂಚುತ್ತಿದೆ. ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ಡಿಜಿಟಲ್‌ ಆಮಂತ್ರಣದ ಟ್ರೈಲರ್‌ವಿಡಿಯೋ ಹೆಚ್ಚು ಜನರನ್ನು ತಲುಪಲಿದ್ದು ಪ್ರತಿ ವರ್ಷವೂ ಹೆಚ್ಚಿನ ಭಕ್ತರು ಜಾತ್ರೆಗೆ ಅನುಕೂಲವಾಗುತ್ತಿದೆ. ಡಿಜಿಟಲ್‌ ಆಮಂತ್ರಣದ ಇಂತಹ ವಿಡಿಯೋಗಳನ್ನು ಈಗಾಗಲೇ ಹಲವು ವರ್ಷಗಳಿಂದ ಶ್ರೀಮಠ ಜಾತ್ರೆಗೂ ಮುನ್ನ ರೆಡಿ ಮಾಡಿ ಬಿಡುಗಡೆ ಮಾಡುತ್ತಿದೆ. ಈ ಬಾರಿ ಜಾತ್ರೆಯ ಸಿದ್ದತೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಸೇವಾ ಕಾರ್ಯಕರ್ತರ ಮೂಲಕ ಬಿಡುಗಡೆ ಮಾಡಿರುವುದು ವಿಶೇಷ. ಜಾತ್ರೆಯ ಸಿದ್ದತೆಯ ಸೇವಾ ಕಾರ್ಯದಲ್ಲಿ ಸೇವೆ ಮಾಡುತ್ತಿರುವ ನಾಗವ್ವ ಮ್ಯಾಗಳಮನಿ, ಹುಲಿಗೆವ್ವ ಅಗಳಕೇರಾ, ಶೋಭಾ ಇಟಗಿ, ಲಕ್ಷ್ಮೀ ಬೆಲ್ಲದ, ಭರಮವ್ವ ಬೋಚಹನಳ್ಳಿ, ಅಮೃತಾ, ಯಲ್ಲಮ್ಮ, ಈರಮ್ಮ, ಮಾತೆಂಗವ್ವ, ರುದ್ರಗೌಡ, ಮಲ್ಲಿಕಾರ್ಜುನಯ್ಯ ಅವರಿಂದ ಈ ವಿಡಿಯೋ ಟ್ರೈಲರ್‌ಸಾಂಗ್ ಬಿಡುಗಡೆಗೂಳಿಸಿದ್ದು ಜಾತ್ರೆಯ ವಿಶೇಷತೆಯಾಗಿದೆ.

ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿರುವ ಅದ್ಭುತ ದೃಶ್ಯಗಳ ಜತೆ ಭಕ್ತಿ ಭಾವ ಹೆಚ್ಚಿಸುವ ಸಾಹಿತ್ಯದ ಸಾಲುಗಳಿರುವ, ಇಂಪಾದ ಧ್ವನಿ ಇರುವ ಈ ಟ್ರೈಲರ್‌ ವಿಡಿಯೋ ಸಾಂಗ್‌ ನೋಡಲು ಈ ಲಿಂಕ್‌ಗಳನ್ನು ಬಳಸಿ ನೋಡಿ ಕಣ್ತುಂಬಿಕೊಳ್ಳಬಹುದಾಗಿ.

https://drive.google.com/file/d/14QCE6_Enl4t5fcAlcHip82nOia3VHsy_/view?usp=sharing

https://drive.google.com/file/d/14eUiJRKo_0xl4WclwdYxFlKmSC-3lcfp/view?usp=sharing

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!