ಕನ್ನಡಪ್ರಭ ವಾರ್ತೆ ಕನಕಪುರ
ನಂತರ ಮಾತನಾಡಿದ ಅವರು, ಭಾರತದ ಅಭಿವೃದ್ಧಿ ಅಡಗಿರುವುದು ಗ್ರಾಮೀಣ ಪ್ರದೇಶದ ಅಭಿವೃದ್ಧಿಯಿಂದ ಮಾತ್ರ, ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕೆಂದರೆ ಪ್ರತಿ ಗ್ರಾಮವೂ ಸ್ವಾವಲಂಬಿ ಗ್ರಾಮವಾಗಬೇಕು, ಗ್ರಾಮೀಣ ಸ್ವಚ್ಛತೆ, ನೈರ್ಮಲ್ಯ ಇವುಗಳೇ ಗ್ರಾಮದ ಮೂಲ ಆಶಯಗಳು ಎಂದರು.
ಎನ್ಎಸ್ಎಸ್ ಶಿಬಿರವನ್ನು ಹೋಬಳಿಯ ಗ್ರಾಮದಲ್ಲಿ ಹಮ್ಮಿಕೊಂಡಿರುವುದು ಬಹಳ ಸಂತೋಷದ ವಿಷಯವಾಗಿದ್ದು, ಮಕ್ಕಳು ಗ್ರಾಮದಲ್ಲಿ ನಿರ್ವಹಿಸುವ ಸೇವಾ ಚಟುವಟಿಕೆಗಳಿಗೆ ಗ್ರಾಮಸ್ಥರು ಸಹಕರಿಸಬೇಕೆಂದು ಕೋರಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮುನಿ ಹುಚ್ಚೇಗೌಡ ಮಾತನಾಡುತ್ತ, ರಾಷ್ಟ್ರದ ಅಭಿವೃದ್ಧಿ ನಿರ್ಧಾರವಾಗುವುದೇ ಗ್ರಾಮೀಣ ಮಟ್ಟದಿಂದ, ಭಾರತವು ಹಳ್ಳಿಗಳಿಂದ ಕೂಡಿದ ರಾಷ್ಟ್ರ, ಇಲ್ಲಿ ಹಳ್ಳಿಗಳ ಅಭಿವೃದ್ಧಿಯಾದರೆ ರಾಷ್ಟ್ರ ಅಭಿವೃದ್ಧಿಯಾದಂತೆ. ಅದಕ್ಕಾಗಿಯೇ ಸ್ಥಳೀಯ ಸರ್ಕಾರದ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿರುವುದಾಗಿ ತಿಳಿಸಿ, ಮಕ್ಕಳ ಸೇವಾ ಚಟುವಟಿಕೆಗಳನ್ನು ಮನಃಪೂರ್ವಕವಾಗಿ ಶ್ಲಾಘಿಸಿದರು.
ಪಿಡಿಒ ರಘು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮನೆ ಮಾಡಿರುವ ಜಾತಿ ಪದ್ಧತಿ, ಅಂಧ ಶ್ರದ್ಧೆ, ಮೂಢನಂಬಿಕೆ, ಬಾಲ್ಯವಿವಾಹ ಸೇರಿದ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳು ನಿರ್ನಾಮವಾದಾಗ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ, ಪ್ರತಿ ಗ್ರಾಮದ ಶುಚಿತ್ವ ಕಾರ್ಯಕ್ಕೂ ಜನತೆ ಪಂಚಾಯಿತಿಗಳನ್ನೇ ಅವಲಂಬಿಸದೆ ವೈಯುಕ್ತಿಕವಾಗಿ ನೆರವಾಗಬೇಕು ಎಂದರು.
ಈ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರ ಆಯೋಜಿಸಲು ಕಾಲೇಜಿನ ವತಿಯಿಂದ ನನ್ನನ್ನು ಮೊದಲು ಸಂಪರ್ಕಿಸಿದಾಗ ಅದಕ್ಕೆ ಅನುಮತಿ ನೀಡಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ರಾಜೇಗೌಡರು ಧ್ವಜಾರೋಹಣ ನಡೆಸಿಕೊಟ್ಟರು,
ಸಮಾರಂಭದಲ್ಲಿ ಶ್ರೀ ಶಿವಲಿಂಗೇಗೌಡ ( ಕಾಂಟ್ರ್ಯಾಕ್ಟರ್), ಪಂಚಾಯಿತಿ ನೌಕರ ಕೃಷ್ಣ, ಬಿಲ್ ಕಲೆಕ್ಟರ್ ಮುನಿಚಿಕ್ಕಯ್ಯ, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಅಧ್ಯಾಪಕ ಡಾ.ಮಹೇಶ್, ಎನ್ಎಸ್ಎಸ್ ಅಧಿಕಾರಿ ಪ್ರೊ. ಅವಿನಾಶ್ ಹಾಗೂ ಸಹಾಯಾಧಿಕಾರಿಯದ ಪ್ರೊ. ಪ್ರಿಯಾಂಕ, ಗ್ರಾಮಸ್ಥರಾದ ಶಿವರುದ್ರಯ್ಯ, ಶಿವಣ್ಣ ಪುಟ್ಟರಾಜು, ಚಿಕ್ಕೀರೇಗೌಡ, ಚನ್ನೇಗೌಡ, ಕುಳ್ಳಣ್ಣ, ರತ್ನಮ್ಮ, ಪುಟ್ಟಮ್ಮ ದೇವಮ್ಮ, ಪ್ರೊ. ನಳಿನಾದೇವಿ, ಪ್ರೊ ರಾಧಾಕೃಷ್ಣ, ಮರಿಸ್ವಾಮಿ, ಮಹೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.