ಎಸ್.ಜಿ. ತೆಗ್ಗಿನಮನಿ
ಪ್ರತಿ ವರ್ಷ ರೈತರು ಮುಂಗಾರು ಹಂಗಾಮಿನಲ್ಲಿ ಮಲಪ್ರಭಾ ಜಲಾಶಯ ನೀರಾವರಿ ಕಾಲುವೆಗಳಿಗೆ ಹೊಂದಿಕೊಂಡಿರುವ ನೀರಾವರಿ ಜಮೀನುಗಳಲ್ಲಿ ವಾಣಿಜ್ಯ ಬೆಳೆಯಾದ ಗೋವಿನ ಜೋಳ ಬಿತ್ತನೆ ಮಾಡಿ ಪ್ರತಿ 1 ಎಕರೆಗೆ 25ರಿಂದ 35 ಕ್ವಿಂಟಲ್ವರೆಗೆ ಬೆಳೆ ತೆಗೆಯುತ್ತಾರೆ. ಆದರೆ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗಿದೆ. ಏಕಕಾಲಕ್ಕೆ ನಿರಂತರ ಮಳೆ ಸುರಿದು ಈ ಬೆಳೆಗೆ ತೇವಾಂಶ ಹೆಚ್ಚಾಗಿ ಬೆಳವಣಿಗೆ ಕುಂಠಿತವಾಗಿದೆ. ಮೇಲಾಗಿ ಬೆಳೆಗೆ ಕೆಂಪು, ಹಳದಿ ರೋಗ, ಸೈನಿಕ ಕೀಟ ಬಾಧೆಯಿಂದ ರೈತರಲ್ಲಿ ಆತಂಕ ಹೆಚ್ಚಿದೆ.
ಸಕಾಲಕ್ಕೆ ಲಭ್ಯವಾಗದ ಗೊಬ್ಬರ:ತಾಲೂಕಿನಲ್ಲಿ 17,225 ಹೆಕ್ಟೇರ್ ಪ್ರದೇಶದಲ್ಲಿ ರೈತರು ಗೋವಿನ ಜೋಳ ಬಿತ್ತನೆ ಮಾಡಿದ್ದರು. ನಂತರ ದಿನಗಳಲ್ಲಿ ಔಷಧ ಸಿಂಪಡಣೆ ಮಾಡಿ ಎಡಿ ಹೊಡೆದು ಉತ್ತಮವಾಗಿ ಬೆಳೆ ಬೆಳೆಸಿದ್ದರು. ಬೆಳೆಗೆ ಯೂರಿಯಾ ಗೊಬ್ಬರ ನೀಡಬೇಕಾದ ಸಂದರ್ಭದಲ್ಲಿ ತಾಲೂಕಿನಲ್ಲಿ ಯೂರಿಯಾ ಸಿಗದೆ ಬೆಳವಣಿಗೆ ಕುಂಠಿತವಾಗಿದೆ.ಮಳೆ ವಿವರ:ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಪ್ರಕಾರ ನರಗುಂದ ಹೋಬಳಿಯಲ್ಲಿ 60.1 ಮಿ ಮೀಟರ್ ಮಳೆ ಆಗಬೇಕಾಗಿತ್ತು. ಆದರೆ 95.3 ಮಿ ಮೀಟರ್ ಮಳೆ ಆಗಿದೆ. ಕೊಣ್ಣೂರ ಹೋಬಳಿಗೆ ವಾಡಿಕೆ ಪ್ರಕಾರ 60.5 ಮಿಲಿ ಮೀಟರ್ ಆಗಬೇಕಾಗಿತ್ತು. ಆದರೆ 71.5 ಮಿ ಮೀಟರ್ ಮಳೆ ಆಗಿದೆ. ಆ. 1ರಿಂದ 10ರ ವರೆಗೆ 21.8 ಮಿ ಮೀಟರ್ ನರಗುಂದ ಹೋಬಳಿಗೆ ಆಗಬೇಕಾಗಿತ್ತು. 76.6 ಮಿಮೀ ಮಳೆ ಆಗಿದೆ. ಕೊಣ್ಣೂರ ಹೋಬಳಿಯಲ್ಲಿ 21.9 ಮಿಮೀ ಮಳೆ ಆಗಬೇಕಾಗಿತ್ತು. 56.7 ಮಿ ಮೀಟರ್ ಮಳೆ ಆಗಿದೆ. ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ನಿರಂತರ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಾಗಿ ಬೆಳವಣಿಗೆ ಕುಂಠಿತವಾಗಿರುವುದು ಕಂಡು ಬಂದಿದೆ.
ತಾಲೂಕಿನಲ್ಲಿ ರೈತರಿಗೆ ಬೇಕಾದಷ್ಟು ಯೂರಿಯಾ ಗೊಬ್ಬರ ಸಿಕ್ಕಿಲ್ಲ. ಹೀಗಾಗಿ ಸಕಾಲರಕ್ಕೆ ಗೊಬ್ಬರ ನೀಡದ್ದರಿಂದ ಶೇ. 50ರಷ್ಟು ಬೆಳವಣಿಗೆ ಕುಂಠಿತವಾಗಿದೆ. ಖಾಸಗಿ ಹಾಗೂ ಸಹಕಾರಿ ಸಂಘಗಳ ಮುಂದೆ ರೈತರು ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಂತರೂ ಗೊಬ್ಬರ ಸಿಗುತ್ತಿಲ್ಲ ಹದಲಿ ರೈತ ಬಸವಣ್ಣಪ್ಪ ಸುಂಕದ ಹೇಳಿದರು.
ಹೇಳಿದರು.