ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಟಿ.ಬೊಮ್ಮನಹಳ್ಳಿ ಗ್ರಾಮದಲ್ಲಿ ಮೂಕನಾಯಕ ಸಾಂಸ್ಕೃತಿಕ ಕಲಾ ನಾಟ್ಯ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಮಲ್ಲೇಶ ಕೋನ್ಹಾಳ ಬರೆದ ಸಾವು ಬಂದರೂ ಸೆರಗು ಹಾಸಲಾರೆ ಸಗರನಾಡು ಗ್ರಾಮೀಣ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ನಾಟಕ ಸಾಹಿತಿಗಳು, ರಂಗ ನಟರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ. ಸುರಪುರ ನಗರದಲ್ಲಿ ರಂಗಮಂದಿರ ನಿರ್ಮಿಸಬೇಕು. ಕನ್ನಡ ಸಂಸ್ಕೃತಿ ಇಲಾಖೆ ಗ್ರಾಮೀಣ ನಾಟಕಗಳಿಗೆ ಪ್ರತ್ಯೇಕ ಧನ ಸಹಾಯ ನೀಡಬೇಕು. ಈ ದಿಸೆಯಲ್ಲಿ ತಾವು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಶೋಷಿತರ ಸಂಘಟನೆಗಳ ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷ ವೆಂಕೋಬ ದೊರೆ ಅಧ್ಯಕ್ಷತೆ ವಹಿಸಿದ್ದರು. ಸಕ್ರೆಪ್ಪ ಮುತ್ಯಾ ದೇವರಗೋನಾಲ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಕೆ. ವಿಜಯಕುಮಾರ, ಮುಖಂಡರಾದ ಬಲಭೀಮನಾಯಕ ಭೈರಿಮರಡಿ, ಶಿವರಾಜನಾಯಕ ನಾಯ್ಕೋಡಿ, ಭೀಮರಾಯ ಮೂಲಿಮನಿ, ಶಿವರಾಯ ಕಾಡ್ಲೂರ, ಯಲ್ಲಪ್ಪನಾಯಕ ಮಲ್ಲಿಭಾವಿ, ನಾಗಪ್ಪ ಕನ್ನೆಳ್ಳಿ, ಸಣ್ಣದೇಸಾಯಿ ದೇವರಗೋನಾಲ, ರವಿನಾಯಕ ಭೈರಿಮರಡಿ, ಕಾಳಪ್ಪ ಕವಾತಿ, ದೇವಿಂದ್ರಪ್ಪ ಬಾದ್ಯಾಪುರ ಇದ್ದರು.