ಈಜಲು ಹೋಗಿದ್ದ ಬಾಲಕನ ಮೇಲೆ ಮೊಸಳೆ ದಾಳಿ: ಪ್ರಾಣಾಪಾಯದಿಂದ ಪಾರು

KannadaprabhaNewsNetwork |  
Published : Jun 11, 2025, 11:56 AM IST
ಗಾಯಗೊಂಡ ಬಾಲಕ  | Kannada Prabha

ಸಾರಾಂಶ

ತಾಲೂಕಿನ ನಂ.3 ಸಣಾಪುರ ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ಈಜಲು ಹೋಗಿದ್ದ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ಸಂಜೆ ಜರುಗಿದೆ.

ಕನ್ನಡಪ್ರಭ ವಾರ್ತೆ ಕಂಪ್ಲಿ

ತಾಲೂಕಿನ ನಂ.3 ಸಣಾಪುರ ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ಈಜಲು ಹೋಗಿದ್ದ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ಸಂಜೆ ಜರುಗಿದೆ.ವೇದಮೂರ್ತಿ (16) ಗಾಯಗೊಂಡ ಬಾಲಕ. ಬಿಸಿಲಿನ ಧಗೆಗೆ ಕೊಂಚ ಈಜಲೆಂದು ವೇದಮೂರ್ತಿ ತುಂಗಭದ್ರಾ ನದಿಗೆ ಇಳಿದಿದ್ದ ಈ ವೇಳೆ ಮೊಸಳೆಯೊಂದು ಏಕಾಏಕಿ ದಾಳಿ ಮಾಡಿ ಬಾಲಕನ ಎಡ ಭುಜ ಕಚ್ಚಿತ್ತು. ಕೂಡಲೇ ಬಾಲಕನು ತನ್ನ ಮೇಲೆ ಮೊಸಳೆ ದಾಳಿ ಮಾಡಿದ್ದೂ ಕಾಪಾಡುವಂತೆ ಜೋರಾಗಿ ಕೂಗಿಕೊಂಡಿದ್ದಾನೆ. ಸ್ಥಳದಲ್ಲಿದ್ದ ವೀರೇಶ್ ಎಂಬ ಯುವಕ ಕೆಳಗಡೆ ಬಿದ್ದಿದ್ದ ಕಲ್ಲುಗಳನ್ನು ಎತ್ತಿ ಮೊಸಳೆಯ ಮೇಲೆ ಎಸೆಯಲು ಬಾಲಕನನ್ನು ಬಿಟ್ಟು ಮೊಸಳೆ ಪಲಾಯನ ಮಾಡಿದೆ. ಬಾಲಕ ವೇದ ಮೂರ್ತಿಯ ಭುಜ, ಕೈ, ಎದೆಯ ಭಾಗಕ್ಕೆ ಮೊಸಳೆಯ ಹಲ್ಲಿನ ಗುರುತು ಗೋಚರಿಸುತ್ತಿದ್ದು, ದೇಹ ರಕ್ತ ಸಿಕ್ತವಾಗಿತ್ತು. ಕೂಡಲೇ ಬಾಲಕನನ್ನು ಕಂಪ್ಲಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯು ನದಿ ಪಾತ್ರದ ಜನರಲ್ಲಿ ಹಾಗೂ ರೈತರಲ್ಲಿ ಆತಂಕ ಮೂಡಿಸಿದೆ.

ಮೊಸಳೆ ಸೆರೆಗೆ ಆಗ್ರಹ:

ಕಂಪ್ಲಿ ಕೋಟೆ, ಬೆಳಗೋಡುಹಾಳ್, ಸಣಾಪುರ, ಇಟಗಿ ಗ್ರಾಮಗಳ ತುಂಗಭದ್ರಾ ನದಿ ತಟದಲ್ಲಿ ಹೆಚ್ಚಾಗಿ ಮೊಸಳೆಗಳು ಕಂಡು ಬರುತ್ತಿವೆ. ಈ ಘಟನೆಯಿಂದ ಇದೀಗ ಜನರಿಗೆ ನದಿಯ ಬಳಿ ತೆರಳಲು, ನದಿ ಪಾತ್ರದ ಜಮೀನುಗಳಿಗೆ ರೈತರು ತೆರಳಲು ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮೊಸಳೆ ಸೆರೆ ಹಿಡಿದು ಬೇರೆಡೆ ಸಾಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''