ಮಳೆಯಿಲ್ಲದೇ, ನೀರಿಲ್ಲದೇ ಒಣಗುತ್ತಿರುವ ಬೆಳೆಗಳು

KannadaprabhaNewsNetwork |  
Published : Aug 05, 2024, 12:43 AM IST
ಬೆಳೆ ಹಾನಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಿಕೋಟಾ ತಿಕೋಟಾ: ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನೆರೆ ಹಾಗೂ ಪ್ರಕೃತಿ ವಿಕೋಪದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ವಿಜಯಪುರ ಜಿಲ್ಲೆಯ ಕೆಲವು ಭಾಗದಲ್ಲಿ ಮಳೆಯೇ ಇಲ್ಲದೆ ಬೆಳೆದ ಬೆಳೆಗಳು ಒಣಗಲಾರಂಭಿಸಿವೆ. ಹೌದು, ಈ ಭಾಗದಲ್ಲಿ ಸಾಕಷ್ಟು ಮಳೆ ಕೊರತೆಯಾಗಿದ್ದು, ಎಲ್ಲ ಬೆಳೆಗಳು ಒಣಗುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಿಕೋಟಾ ಹಾಗೂ ದೇರಹಿಪ್ಪರಗಿ ತಾಲೂಕಿನ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು, ಬಳಿಕ ಮಳೆಯ ಆಗಿಲ್ಲ.

ಚಂದ್ರಶೇಖರಯ್ಯ ಮಠಪತಿಕನ್ನಡಪ್ರಭ ವಾರ್ತೆ ತಿಕೋಟಾ ತಿಕೋಟಾ: ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನೆರೆ ಹಾಗೂ ಪ್ರಕೃತಿ ವಿಕೋಪದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ವಿಜಯಪುರ ಜಿಲ್ಲೆಯ ಕೆಲವು ಭಾಗದಲ್ಲಿ ಮಳೆಯೇ ಇಲ್ಲದೆ ಬೆಳೆದ ಬೆಳೆಗಳು ಒಣಗಲಾರಂಭಿಸಿವೆ. ಹೌದು, ಈ ಭಾಗದಲ್ಲಿ ಸಾಕಷ್ಟು ಮಳೆ ಕೊರತೆಯಾಗಿದ್ದು, ಎಲ್ಲ ಬೆಳೆಗಳು ಒಣಗುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಿಕೋಟಾ ಹಾಗೂ ದೇರಹಿಪ್ಪರಗಿ ತಾಲೂಕಿನ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು, ಬಳಿಕ ಮಳೆಯ ಆಗಿಲ್ಲ. ಪ್ರಾರಂಭದ ಮಳೆ ನಂಬಿ ರೈತರು ಬಿತ್ತನೆ ಮಾಡಿದ್ದಾರೆ. ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಘೋಣಸಗಿ, ಅಳಗಿನಾಳ, ಕಳ್ಳಕವಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಿಲ್ಲದೇ ಗೋವಿನ ಜೋಳ, ಸಜ್ಜೆ, ಶೇಂಗಾ, ತೊಗರಿ, ಹೆಸರು, ಉದ್ದು ಇದೀಗ ಒಣಗಲಾರಂಭಿಸಿವೆ. ಬಿತ್ತನೆ ಹಾಗೂ ಬೀಜೋಪಾರ ಮಾಡಿ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ನಲವತ್ತು ದಿನಗಳಿಂದ ಈ ಬಾಗದಲ್ಲಿ ಮೋಡ ಮುಸಕಿದ ವಾತವಾವಣ ಇದ್ದು, ಮಳೆ ಸುರಿಯುತ್ತಿಲ್ಲ. ಮಳೆ ಬರುವ ಲಕ್ಷಣವೂ ಕಾಣುತ್ತಿಲ್ಲ. ಮುಂಗಾರು ಮಳೆ ಉತ್ತಮವಾಗಿ ಆಗಿದ್ದು, ಬಳಿಕ ಕೈ ಕೊಟ್ಟಿದೆ. ಮಳೆ ಯಾವಾಗ ಆಗತ್ತೊ ಎಂದು ರೈತರು ಮುಗಿಲ ಕಡೆಗೆ ನೋಡುತ್ತ ದಿನ ದೂಡುತ್ತಿದ್ದಾರೆ.ಇನ್ನು, ಈ ಭಾಗದಲ್ಲಿ ತುಬಚಿ ಏತ ನೀರಾವರಿ ಯೋಜನೆಯ ಕಾಲುವೆ ನೀರು ಹರಿಯಬೇಕಿತ್ತು. ಆದರೆ, ಘೋಣಸಗಿ, ಅಳಗಿನಾಳ ಗ್ರಾಮದ ಕಾಲುವೆಗಳಿಗೆ ನೀರೇ ಬರುತ್ತಿಲ್ಲ. ನಮ್ಮ ಕಾಲುವೆಗೂ ನೀರು ಹರಿಸುವಂತೆ ಅಧಿಕಾರಿಗಳಿಗೂ, ಜನಪ್ರತಿಧಿಗಳಿಗೆ ಸಾಕಷ್ಟು ಬಾರಿ ಹೇಳಿದರು ಪ್ರಯೋಜನವಾಗುತ್ತಿಲ್ಲ ಎಂದು ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಚಿತ್ರ;3ತಿಕೋಟಾ1: ಪೋಟೂಕ್ಯಾಪಸಿನ್;ತಿಕೋಟಾ ತಾಲೂಕಿನ ಘೋಣಸಗಿ ಅಳಗಿನಾಳ ಗ್ರಾಮದ ರೈತರು ಮಳೆ ಇಲ್ಲದೆ ಬಾಡುತ್ತಿರುವ ಬೆಳೆಗಳು ತೋರಿಸುತ್ತಿರುವ ರೈತರು.

------------------------------------------ಕೋಟ್‌

ಮುಂದಿನ ನಾಲ್ಕೈದು ದಿನಗಳಲ್ಲಿ ಮಳೆ ಬಂದರೆ ಒಳ್ಳೆಯದು ಬೆಳೆಗಳು ಬದುಕುತ್ತವೆ. ಮಳೆಯಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸಿ ಕಾಲುವೆಗಳಿಗೆ ನೀರು ಬರುವಂತೆ ವ್ಯವಸ್ಥೆ ಮಾಡಬೇಕು. ಮಾಡಿದರೆ ನಮ್ಮ ಬೆಳೆಗಳಿಗೆ ನೀರು ಹಾಯಿಸಿ ರಕ್ಷಣೆಗೆ ಮುಂದಾಗುತ್ತೇವೆ. ಇದರ ಬಗ್ಗೆ ಅಧಿಕಾರಿಗಳು ಮೌನವಹಿಸಿದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ.ಗಂಗಾರಾಮ, ಸ್ಥಳೀಯ ರೈತ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!