ಲಾರಿಗೆ ಕ್ರೂಸರ್ ಡಿಕ್ಕಿ: ನಾಲ್ವರು ಅಯ್ಯಪ್ಪ ಮಾಲಾಧಾರಿಗಳ ಸಾವು

KannadaprabhaNewsNetwork |  
Published : Jan 10, 2026, 02:30 AM IST
9ಕೆಕೆಆರ್3: ಕುಕನೂರು ಪಟ್ಟಣದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕ್ರುಷರ್ ವಾಹನ ಲಾರಿಗೆ ಡಿಕ್ಕಿ ಹೊಡೆದು ಅಪಘಾತವಾದ ಕಾರಣ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿರುವುದು..  | Kannada Prabha

ಸಾರಾಂಶ

ದೇವರು ಆ ಎಳೆ ಜೀವ ಯಾಕ್ ಕರಕೊಂಡ, ದೇವರು ಕ್ರೂರಿ ಎಂದು ಹೆತ್ತ ಕರುಳು ಹಾಗೂ ಕುಟುಂಬಸ್ಥರು ದೇವರಿಗೆ ಹಿಡಿಶಾಪ

ಕುಕನೂರು: ಶಬರಿಮಲೈ ಅಯ್ಯಪ್ಪಸ್ವಾಮಿ ದೇವರ ದರ್ಶನ ಪಡೆದು ಮರಳಿ ಊರಿಗೆ ಬರುತ್ತಿದ್ದ ತಾಲೂಕಿನ ಮಾಲಾಧಾರಿಗಳು ದಾರಿ ಮಧ್ಯೆ ಸಂಭವಿಸಿದ ರಸ್ತೆ ಅವಘಾತದಲ್ಲಿ ಓರ್ವ ಬಾಲಕಿ ಸೇರಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಇಲ್ಲಿನ ಗಾಂಧಿನಗರದ ಸಾಕ್ಷಿ ಹುಲಗಪ್ಪ ಡೊಂಬರ (೭), ಮಾರುತೇಶ ತೊಂಡಿಹಾಳ (೪೫), ೧ನೇ ವಾರ್ಡಿನ ವೆಂಕಟೇಶ ಘಾಟಿ (೩೭), ತಾಲೂಕಿನ ನಿಟ್ಟಾಲಿ ಗವಿಸಿದ್ದಪ್ಪರೆಡ್ಡಿ ನಿಟ್ಟಾಲಿ (೨೮) ಮೃತಪಟ್ಟವರು. ತಿರುಪತಿ, ರಾಕೇಶ, ಪ್ರಶಾಂತ, ಶ್ರೀನಿವಾಸ, ರಾಜಪ್ಪ, ಪ್ರದೀಪಕುಮಾರ ಮತ್ತು ಹುಲಗಪ್ಪ ಗಂಭೀರ ಗಾಯಗೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ತುಮಕೂರಿನಲ್ಲಿ ನಿಂತ ಲಾರಿಗೆ ಅಯ್ಯಪ್ಪ ಭಕ್ತರ ಕ್ರೂಸರ್‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ನಾಲ್ವರು ಮೃತಪಟ್ಟಿದ್ದಾರೆ.

ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವ ಮುನ್ನ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ಬಡಿಸಿದ್ದ 1ನೇ ತರಗತಿಯ ಏಳು ವರ್ಷದ ಬಾಲಕಿ ಸಾಕ್ಷಿ ಸಹ ಸಾವನ್ನಪ್ಪಿರುವುದು ಇಡೀ ಕುಕನೂರು ಕಂಬನಿ ಮಿಡಿಯುವಂತೆ ಮಾಡಿದೆ. ''''ದೇವರು ಆ ಎಳೆ ಜೀವ ಯಾಕ್ ಕರಕೊಂಡ'''', ''''ದೇವರು ಕ್ರೂರಿ'''' ಎಂದು ಹೆತ್ತ ಕರುಳು ಹಾಗೂ ಕುಟುಂಬಸ್ಥರು ದೇವರಿಗೆ ಹಿಡಿಶಾಪ ಹಾಕುತ್ತಿದ್ದರು.

ಮಗಳು ಸಾಕ್ಷಿಯೊಂದಿಗೆ ತಂದೆ ಹುಲುಗಪ್ಪ ಅಯ್ಯಪ್ಪಸ್ವಾಮಿಗೆ ತೆರಳಿದ್ದ, ಮಗಳ ಸಾವನ್ನು ಕಣ್ಣಾರೆ ಕಂಡು ತಾನೂ ಗಂಭೀರ ಗಾಯಗಳಿಂದ ಬಳಲುತ್ತಿದ್ದಾನೆ. ಇತ್ತ ಸಾಕ್ಷಿ ತಾಯಿ ನನ್ನ ಮಗಳು ನನಗೆ ಬೇಕು ಎಂದು ಕಣ್ಣೀರು ಹಾಕುತ್ತಿದ್ದಳು.

ಕೂಲಿಕಾರ್ಮಿಕರು:

ಪಟ್ಟಣದಿಂದ ಅಯ್ಯಪ್ಪಸ್ವಾಮಿ ದೇವರ ದರ್ಶನಕ್ಕೆ ತೆರಳಿದ್ದ ಭಕ್ತಾದಿಗಳು ಕೂಲಿಕಾರ್ಮಿಕರಾಗಿದ್ದರು. ಗಾರೆ, ಬಾರ್‌ ಬೆಂಡಿಂಗ್, ಬಸ್ ಚಾಲಕಾಗಿ ಕೆಲಸ ಮಾಡುತ್ತಿದ್ದರು. ಇವರ ದುಡಿಮೆಯನ್ನೇ ನಂಬಿರುವ ಕುಟುಂಬಗಳ ನೋವು ಹೇಳತೀರದಾಗಿದೆ.

ಗಾಂಧಿ ನಗರದಲ್ಲಿರುವ ಸಾಕ್ಷಿ ಹುಲಗಪ್ಪ ಮತ್ತು ಮಾರುತಿ ತೊಂಡಿಹಾಳ, ೧ನೇ ವಾರ್ಡಿನ ವೆಂಕಟೇಶ ಘಾಟಿ ಮತ್ತು ನಿಟ್ಟಾಲಿ ಗ್ರಾಮದ ಗವಿಸಿದ್ದಪ್ಪರೆಡ್ಡಿ ಮನೆಗಳ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ