ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸಂಸ್ಕೃತಿಯ ಕೇಂದ್ರಬಿಂದು ಮನಸ್ಸು. ಸಂಸ್ಕೃತಿಯ ಭಾಗವಾದ ಜನಪದ ಸಾಹಿತ್ಯವನ್ನು ಓದುವಿಕೆ ಕೇಳುವಿಕೆಯ ಮೂಲಕ ದೊರೆಯುವ ಪ್ರತಿಫಲಕ್ಕೆ ಬೆಲೆಕಟ್ಟಲಾಗದು. ಎಲ್ಲ ಮನುಷ್ಯರ ಬದುಕು ಮೈಮನಸ್ಸುಗಳ ಸಂಘರ್ಷವೆ ಆಗಿದ್ದು, ಯಾರು ಎರಡನ್ನೂ ಸಮಾನ ತೂಕದಲ್ಲಿ ಕೊಂಡೊಯ್ಯುವರೋ ಅವರೇ ಸಾಧಕರು, ಜಿಲ್ಲೆಯ ಭೌಗೋಳಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಶ್ಲಾಘಿಸಿ, ಗುರಿ ಹಾಗೂ ಗುರುವಿನ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿನಿಯರು ಸಾಧನೆಗೈಯಬೇಕು, ವಿದ್ಯೆಯೊಂದೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರು.ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎನ್.ಮುನಿರಾಜು ಮಾತನಾಡಿ, ಇಂದಿನ ಯುವಜನತೆಯ ಆಸಕ್ತಿ ವಿಷಯಗಳು ಆತಂಕಕಾರಿಯಾಗಿವೆ. ಭಾರತದಂತಹ ಶ್ರೇಷ್ಠ ಪರಂಪರೆ ಹಾಗೂ ಬಹುಸಂಸ್ಕೃತಿಯ ನಾಡಿನಲ್ಲಿ ಘನತೆಯೊಂದಿಗೆ ಬದುಕಬೇಕು. ನೆಲ ಮತ್ತು ನುಡಿಯ ಬಗ್ಗೆ ಅಭಿಮಾನವಿರಬೇಕು ನಮ್ಮ ಸಂಸ್ಕೃತಿಯ ಅರಿವಿನೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಪದವಿಪೂರ್ವ ಘಟ್ಟ ವಿದ್ಯಾರ್ಥಿ ಜೀವನದ ಪ್ರಮುಖ ತಿರುವಾಗಿದ್ದು ಯಶಸ್ವಿಯಾಗಿ ಈ ನಿಟ್ಟಿನಲ್ಲಿ ಮುಂದೆ ಸಾಗಿ ಎಂದರು.ಚಾಮರಾಜನಗರ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಮಂಜುನಾಥ ಪ್ರಸನ್ನ, ಪ್ರಾಂಶುಪಾಲ ಎನ್.ಮಹದೇವಸ್ವಾಮಿ ಜನಪದ ಕಲಾವಿದರಾದ ಸಿ.ಎಂ.ನರಸಿಂಹಮೂರ್ತಿ, ಅರುಣ್ ಮಾಂಬಳ್ಳಿ, ಮಿಮಿಕ್ರಿ ಮಲ್ಲಣ್ಣ ಇನ್ನಿತರರಿದ್ದರು.