- ಜಿಲ್ಲಾಡಳಿತಕ್ಕೆ ವೆಲ್ಫೇರ್ ಪಾರ್ಟಿ ಪದಾಧಿಕಾರಿಗಳ ಮನವಿ- - - ದಾವಣಗೆರೆ: ಜಿಲ್ಲೆಯ ಅನೇಕ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಸೂಕ್ತ ರೀತಿಯಲ್ಲಿ ಕಡಿವಾಣ ಹಾಕುವಂತೆ ಕೋರಿ ಜಿಲ್ಲಾಡಳಿತಕ್ಕೆ ವೆಲ್ಫೇರ್ ಪಾರ್ಟಿ ದಾವಣಗೆರೆ ಘಟಕ ವತಿಯಿಂದ ಮನವಿ ಸಲ್ಲಿಸಲಾಯಿತು.
ರಸ್ತೆಯಲ್ಲಿ ಸಾಗುವ ಬೈಕು ಸವಾರರು ಮತ್ತು ಕಾರುಗಳ ಮೇಲೆ ನಾಯಿಗಳು ಎರಗುತ್ತವೆ. ಬೆನ್ನಟ್ಟಿಸಿಕೊಂಡು ಹೋಗುತ್ತವೆ. ಕೆರಳಿದ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಹಲವಾರು ಬೈಕ್ ಮತ್ತು ಸೈಕಲ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದ್ದರಿಂದ ಕೂಡಲೇ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಕೆರಬಿಳಚಿ ಯುನಿಟ್ ಕಾರ್ಯದರ್ಶಿ ಮಹಮದ್ ಅಸ್ಲಾಂ, ಪರ್ವಿಜ್ ಮತ್ತು ಸೀನಿಯರ್ ಮೆಂಬರ್ ಏಜಾಜ್ ಬೇಗ್ ಮತ್ತು ಸದಸ್ಯರು ಹಾಜರಿದ್ದರು.- - - -22ಕೆಡಿವಿಜಿ41ಃ:
ದಾವಣಗೆರೆ ಜಿಲ್ಲೆ ವಿವಿಧ ಪಟ್ಟಣ, ಗ್ರಾಮಗಳಲ್ಲಿ ಮಿತಿಮೀರಿರುವ ಬೀದಿನಾಯಿಗಳ ಹಾವಳಿಗೆ ಕಡಿವಾಣಕ್ಕೆ ಕೋರಿ ವೆಲ್ಫೇರ್ ಪಾರ್ಟಿ ದಾವಣಗೆರೆ ಘಟಕ ವತಿಯಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.