ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಯಲ್ಲಿ ಈ ಹಿಂದೆ ಅನವಶ್ಯಕವಾಗಿ ಖರ್ಚು ಮಾಡುವ ಸಂಪ್ರದಾಯವಿತ್ತು. ಈಗ ಯಾರನ್ನೂ ನೋಯಿಸದೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೇವೆ. ಅನಗತ್ಯ ಖರ್ಚು ಹಾಗೂ ಅನಧಿಕೃತವಾಗಿ ಆಗುತ್ತಿದ್ದ ಖರ್ಚಿಗೆ ಕಡಿವಾಣ ಹಾಕುತ್ತಿದ್ದೇವೆ ಎಂದರು.
ಹಿಂದೆ ವಿಶ್ವವಿದ್ಯಾನಿಲಯದ ಹಣಕಾಸು ಪರಿಸ್ಥಿತಿ ಚೆನ್ನಾಗಿದ್ದಾಗ ಎಲ್ಲವನ್ನೂ ಧಾರಳವಾಗಿ ಖರ್ಚು ಮಾಡಲಾಗಿತ್ತು. ಇಂಟರ್ ನ್ಯಾಶನಲ್ ಹಾಸ್ಟೆಲ್, ಸಂಶೋಧನಾ ಕೇಂದ್ರ ಮಾಡುವ ಆಸೆ ಇತ್ತು. ಅವೆಲ್ಲವನ್ನು ಯೋಜಿತ ರೀತಿಯಲ್ಲಿ ಮಾಡಿದ್ದರೆ ಈ ರೀತಿಯ ಸಮಸ್ಯೆ ಬರುತ್ತಿರಲಿಲ್ಲ. ಏನು ಸಮಸ್ಯೆ ಆಗಿದೆಯೋ ಅದನ್ನು ನಿವೃತ್ತ ನ್ಯಾಯಾಧೀಶರು ತನಿಖೆ ಮಾಡುತ್ತಿದ್ದಾರೆ ಎಂದು ಪ್ರೊ.ಧರ್ಮ ಹೇಳಿದರು.ಆಂತರಿಕ ಮೂಲ ಇಳಿಕೆ:ಕೋವಿಡ್ ಬಳಿಕ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಅಂತರಿಕ ಮೂಲಗಳಿಂದ ಅದಾಯ ತಂದುಕೊಳ್ಳಿ ಎಂದು ಸೂಚನೆ ಬಂದಿದೆ. ಆದರೆ ವಿವಿಗೆ ಆಂತರಿಕ ಮೂಲಗಳು ಕಡಿಮೆಯಾಗುತ್ತಾ ಬಂದಿವೆ. ವಿವಿ ಅಧೀನದ ಕಾಲೇಜುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಫಿಲಿಯೇಷನ್ ಕಡಿಮೆಯಾಗುತ್ತಿದೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ನಿವೃತ್ತ ಪ್ರಾಧ್ಯಾಪಕರಿಗೆ ಪಿಂಚಣಿ ಬಾಕಿ: ಮಂಗಳೂರು ವಿವಿಯ 45 ನಿವೃತ್ತ ಪ್ರಾಧ್ಯಾಪಕರಿಗೆ 21- 22 ಕೋಟಿ ರು.ವರೆಗೆ ಪಿಂಚಣಿ ಪಾವತಿ ಬಾಕಿಯಿದೆ. ಸರ್ಕಾರ ಅದನ್ನು ನೀಡಿದರೆ ವಿವಿಗೆ ಬಹಳಷ್ಟು ಉಪಯೋಗವಾಗಲಿದೆ. ಮಂಗಳೂರು ವಿವಿಗೆ ದೊಡ್ಡ ಹೆಸರು ಬಂದದ್ದೇ ಆ ಪ್ರಾಧ್ಯಾಪಕರಿಂದ, ಅವರನ್ನೇ ನಡುಬೀದಿಯಲ್ಲಿ ನಿಲ್ಲಿಸಿದಂತಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯಿದೆ ಎಂದು ಕುಲಪತಿ ಹೇಳಿದರು.
ವಿವಿ ಬೊಕ್ಕಸ ಖಾಲಿ