ಶಿವಸಂಗಮ ಸಹಕಾರಿ ಸಂಘ ಅಧಿಕ ವ್ಯವಹಾರ ನಡೆಸಿ, ಹೆಚ್ಚಿನ ಠೇವಣಿ ಹೊಂದುವ ಮೂಲಕ ದೊಡ್ಡ ಮೊತ್ತದ ಲಾಭವನ್ನು ಮಾಡಿ ಶೇರುದಾರರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲು ಮುಂದಾಗಿರುವದು ಹೆಮ್ಮೆಯ ಸಂಗತಿ.
ಕನ್ನಡಪ್ರಭ ವಾರ್ತೆ ಗದಗ
ಗ್ರಾಹಕರು ಸಂಸ್ಥೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹಾಗೆಯೇ ಸಂಸ್ಥೆಯು ಸಾಲಗಾರರ ಮೇಲೆ ವಿಶ್ವಾಸವಿಟ್ಟಿದ್ದು ಅವರು ಸರಿಯಾಗಿ ಸಾಲದ ಮರುಪಾವತಿ ಮಾಡಿದ್ದರ ಪರಿಣಾಮವಾಗಿ ಸಂಸ್ಥೆ ಇಂದು ಗ್ರಾಹಕರ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಸಂಸ್ಥಾಪಕ ಜಿ.ಎಂ. ಪಲ್ಲೇದ ಹೇಳಿದರು.
ನಗರದ ಲಯನ್ಸ್ ಭವನದಲ್ಲಿ ಜರುಗಿದ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 12ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸೌಹಾರ್ದ ಸಹಕಾರಿ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರಿನ ನಿರ್ದೆಶಕ ನಾಗರಾಜ ದೇಶಪಾಂಡೆ ಮಾತನಾಡಿ, ಶಿವಸಂಗಮ ಸಹಕಾರಿ ಸಂಘ ಅಧಿಕ ವ್ಯವಹಾರ ನಡೆಸಿ, ಹೆಚ್ಚಿನ ಠೇವಣಿ ಹೊಂದುವ ಮೂಲಕ ದೊಡ್ಡ ಮೊತ್ತದ ಲಾಭವನ್ನು ಮಾಡಿ ಶೇರುದಾರರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲು ಮುಂದಾಗಿರುವದು ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವೀರಯ್ಯ ಶಿವಕಾಳಿಮಠ ಹಾಗೂ ನಿರ್ದೆಶಕ ಎಂ.ಬಿ. ಲಿಂಗದಾಳ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.