ವಂಚನೆಗೆ ಬ್ಯಾಂಕ್ ಖಾತೆ ಬಳಕೆ: ಅಂತಾರಾಜ್ಯ ಸೈಬರ್ ಕ್ರೈಂ ಜಾಲ ಬಯಲು

KannadaprabhaNewsNetwork |  
Published : Mar 01, 2026, 03:30 AM IST
ಸೈಬರ್ ಕ್ರೈಂ | Kannada Prabha

ಸಾರಾಂಶ

ನಗರದ ಬಂದರು ನಿವಾಸಿಯೊಬ್ಬರ ಬ್ಯಾಂಕ್ ಖಾತೆಯನ್ನು ವಂಚನೆಗೆ ಬಳಸಿಕೊಂಡಿದ್ದ ಅಂತಾರಾಜ್ಯ ಸೈಬರ್ ಕ್ರೈಂ ಜಾಲವನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ತಂಡ ಪತ್ತೆಹಚ್ಚಿದೆ. ಹೈದರಾಬಾದ್‌ನಲ್ಲಿ ಐವರು ಹಾಗೂ ಮಂಗಳೂರಿನಲ್ಲಿ ಓರ್ವ ಆರೋಪಿಯನ್ನು ಪೊಲೀಸರು ದಸ್ತಗಿರಿ

ಮಂಗಳೂರು: ನಗರದ ಬಂದರು ನಿವಾಸಿಯೊಬ್ಬರ ಬ್ಯಾಂಕ್ ಖಾತೆಯನ್ನು ವಂಚನೆಗೆ ಬಳಸಿಕೊಂಡಿದ್ದ ಅಂತಾರಾಜ್ಯ ಸೈಬರ್ ಕ್ರೈಂ ಜಾಲವನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ತಂಡ ಪತ್ತೆಹಚ್ಚಿದೆ. ಹೈದರಾಬಾದ್‌ನಲ್ಲಿ ಐವರು ಹಾಗೂ ಮಂಗಳೂರಿನಲ್ಲಿ ಓರ್ವ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರಿನ ಶೇಖ್ ಕರೀಮುಲ್ಲಾ ಯಾನೆ ರಸೂಲ್ (೨೭), ಕರ್ನೂರ್‌ನ ಬುಡಿದಿನ್ನೆ ವಂಶಿ ಯಾನೆ ಗುರು (೨೧), ತೆಲಂಗಾಣದ ಹೈದರಾಬಾದ್‌ನ ಪಂಡಿತಿ ಕ್ರಾಂತಿ ಕುಮಾರ್ (೩೬), ಮಂಗಳೂರಿನ ಮೂಲ್ಕಿ ನಿವಾಸಿ ಇಬ್ರಾಹಿಂ (೩೫), ಹೈದರಾಬಾದ್‌ನ ಬಡೆ ಶ್ರೀನಿವಾಸ್ (೩೮) ಮತ್ತು ನೆಲ್ಲೂರಿನ ಉತ್ಸಲ ಸಂತೋಷ್ ಕೃಷ್ಣ (೩೫) ಬಂಧಿತ ಆರೋಪಿಗಳು. ಇವರು ಸಾಮಾಜಿಕ ಮಾಧ್ಯಮಗಳ ಮೂಲಕ ಬ್ಯಾಂಕ್ ಖಾತೆದಾರರಿಗೆ ಕಮಿಷನ್ ಆಮಿಷವೊಡ್ಡಿ ವಂಚನೆ ಎಸಗುತ್ತಿದ್ದರು.

ಮಂಗಳೂರಿನ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಎಂಬುವವರಿಗೆ ಅವರ ಸ್ನೇಹಿತ ಇಬ್ರಾಹಿಂ ಎಂಬಾತನು ವ್ಯವಹಾರದ ಉದ್ದೇಶಕ್ಕೆಂದು ಬ್ಯಾಂಕ್ ಖಾತೆಯನ್ನು ಕೇಳಿದ್ದನು. ಇದನ್ನು ನಂಬಿದ ಇಕ್ಬಾಲ್ ತಮ್ಮ ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಏರ್ಟೆಲ್ ಸಿಮ್ ಕಾರ್ಡ್ ನೀಡಿದ್ದರು. ಆದರೆ ಬಂಧಿತ ಆರೋಪಿಗಳಿಂದ ಪೊಲೀಸರು ಒಟ್ಟು ೧೮ ಮೊಬೈಲ್ ಫೋನ್‌ಗಳು ೧ ಲ್ಯಾಪ್‌ಟಾಪ್, ೧೨ ಸಿಮ್ ಕಾರ್ಡ್‌ ಮತ್ತು ೧೮ ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ವಂಚನೆಗೆ ಬಳಸಲಾದ ಬ್ಯಾಂಕ್ ಖಾತೆಗಳ ವಿವರಗಳನ್ನು ಸಹ ತನಿಖಾ ತಂಡ ಸಂಗ್ರಹಿಸಿದೆ.

ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಆಕರ್ಷಕ ಜಾಹಿರಾತು ನೀಡಿ, ಬ್ಯಾಂಕ್ ಖಾತೆದಾರರಿಗೆ ಶೇ. ೪ ರಿಂದ ೬ ರಷ್ಟು ಕಮಿಷನ್ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ದುರಾಸೆಗೊಳಗಾದವರಿಂದ ಖಾತೆ ವಿವರ ಮತ್ತು ಒಟಿಪಿ ಪಡೆದು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸುತ್ತಿದ್ದರು. ತನಿಖೆಯ ವೇಳೆ ಇವರಿಂದ ಒಟ್ಟು ೭೨ ಬ್ಯಾಂಕ್ ಖಾತೆಗಳ ವಿವರ ಲಭ್ಯವಾಗಿದ್ದು, ಇವುಗಳ ಮೇಲೆ ದೇಶಾದ್ಯಂತ ೨೭೨ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ವಿಶೇಷವೆಂದರೆ ಫೆ.೨೬ ರಂದು ಒಂದೇ ದಿನ ಈ ತಂಡ ೨ ಕೋಟಿ ರು.ಗೂ ಅಧಿಕ ಹಣದ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ.

-----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಲಚೇತನರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಮಂಜೂರು: ಟಿ.ಎಂ. ಶಾಹೀದ್
ಮಾ.7,8ರಂದು ಬಂಟ್ವಾಳದಲ್ಲಿ ಮೂಡೂರು ಪಡೂರು ಕಂಬಳ