ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಚಿನ್ನದ ಪದಕ ಕನ್ನಡಪ್ರಭ ವಾರ್ತೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೆಸರಲ್ಲಿ ಬಂಗಾರದ ಪದಕ ನೀಡಲಾಗುವುದು ಎಂದು ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕಾರಂಗ ಪ್ರಜ್ಞಾಪ್ರಭುತ್ವದ ಯಶಸ್ಸಿನ ಕೈಗನ್ನಡಿ. ಈ ಪತ್ರಿಕಾರಂಗದ ಬಗ್ಗೆ ಡಿ.ಕೆ. ಶಿವಕುಮಾರ ಅವರಿಗೆ ಗೌರವ ಭಾವನೆ ಇದೆ. ಪತ್ರಿಕಾರಂಗದ ಮೇಲಿನ ಅಭಿಮಾನ ಹಾಗೂ ಗೌರವದಿಂದಾಗಿ ಕವಿವಿಯಲ್ಲಿ ಗೋಲ್ಡ್ ಮೆಡಲ್ ಸ್ಥಾಪಿಸಿದ್ದು, ಪತ್ರಿಕೋದ್ಯಮ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ಪದಕ ಪ್ರದಾನ ಮಾಡಲಾಗುವುದು ಎಂದು ಹೇಳಿದರು. 2023ನೇ ಸಾಲಿನಿಂದಲೇ ಈ ಪದಕ ಪ್ರದಾನ ಮಾಡಲಿದ್ದು, 2022-23ನೇ ಸಾಲಿನಲ್ಲಿ ಹೆಚ್ಚು ಅಂಕ ಪಡೆದಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಾಗೂ ಸದ್ಯ ಏಷಿಯಾನೆಟ್ ಸುವರ್ಣ ಸುವರ್ಣ ಸುದ್ದಿ ವಾಹಿನಿಯಲ್ಲಿ ಉಪ ಸಂಪಾದಕನಾಗಿರುವ ದಾದಾಗೌಡ ಪಾಟೀಲ ಪ್ರಸಕ್ತ ವರ್ಷದ ಪದಕ ಪ್ರದಾನ ಮಾಡಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರಾದ ಆನಂದ ಜಾದವ, ಗೀತಾ ಥಾಂಶಿ, ಬಿ.ಎಚ್. ಪೂಜಾರ ಇದ್ದರು.