ಹೈನುಗಾರಿಕೆ ಗ್ರಾಮಾಭಿವೃದ್ಧಿಗೆ ಪೂರಕ: ಶಾಸಕ ಎಚ್.ಟಿ.ಮಂಜು

KannadaprabhaNewsNetwork |  
Published : Sep 30, 2024, 01:27 AM IST
29ಕೆಎಂಎನ್ ಡಿ13 | Kannada Prabha

ಸಾರಾಂಶ

ಮಂಡ್ಯ ರಾಜ್ಯದಲ್ಲೇ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ಜಿಲ್ಲೆಯಾಗಿದೆ. ಪ್ರತಿ ಮನೆಯಲ್ಲಿ ರಾಸುಗಳು ಇರುವುದು ಸ್ವಾವಲಂಭಿಗಳಾಗಿ ಬದುಕಲು ಸಹಕಾರಿಯಾಗಿದೆ. ವಿದ್ಯಾವಂತರು ಉದ್ಯೋಗ ಹರಸಿ ಪಟ್ಟಣಕ್ಕೆ ತೆರಳುವ ಬದಲು ಹೈನುಗಾರಿಕೆಯನ್ನೆ ಉದ್ಯಮವಾಗಿ ಸ್ವೀಕರಿಸಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸೇವಾ ಮನೋಭಾವದಿಂದ ಸಂಘವನ್ನು ಮುನ್ನಡೆಸಿ ರೈತರ ಬದುಕಿಗೆ ಸಹಕಾರಿಯಾಗಿರುವ ಹೈನುಗಾರಿಕೆಯಿಂದ ಗ್ರಾಮಾಭಿವೃದ್ಧಿಯೂ ಆಗಲಿದೆ ಎಂದು ಶಾಸಕ ಹಾಗೂ ಮನ್ಮುಲ್ ನಿರ್ದೇಶಕರಾದ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.

ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಒಗ್ಗಟ್ಟಿನ ಒಕ್ಕೂಟದ ವ್ಯವಸ್ಥೆಯಂತೆ ಸಂಘದ ನಿರ್ದೇಶಕರು ಸಂಘದ ಪ್ರಗತಿಗಾಗಿ ಕಾರ್ಯಚಟುವಟಿಕೆ ಮುಂದುವರೆಸಬೇಕು ಎಂದರು.

ಒಕ್ಕೂಟದಿಂದ ದೇಗುಲ ಜೀರ್ಣೋದ್ಧಾರಕ್ಕೆ ಅನುದಾನ ಪಡೆಯಬಹುದು. ಷೇರುದಾರರು ಮೃತರಾದಾಗ ಶವಸಂಸ್ಕಾರಕ್ಕೆ ನೆರವು, ರಾಸುಗಳ ಆರೋಗ್ಯಕ್ಕೆ ನೆರವು, ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಪ್ರೋತ್ಸಾಹ ಧನದಂತಹ ಹಲವು ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಮಂಡ್ಯ ರಾಜ್ಯದಲ್ಲೇ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ಜಿಲ್ಲೆಯಾಗಿದೆ. ಪ್ರತಿ ಮನೆಯಲ್ಲಿ ರಾಸುಗಳು ಇರುವುದು ಸ್ವಾವಲಂಭಿಗಳಾಗಿ ಬದುಕಲು ಸಹಕಾರಿಯಾಗಿದೆ. ವಿದ್ಯಾವಂತರು ಉದ್ಯೋಗ ಹರಸಿ ಪಟ್ಟಣಕ್ಕೆ ತೆರಳುವ ಬದಲು ಹೈನುಗಾರಿಕೆಯನ್ನೆ ಉದ್ಯಮವಾಗಿ ಸ್ವೀಕರಿಸಬೇಕು. ಸಂಸ್ಥೆ ತಮ್ಮ ಜೊತೆ ಸದಾ ಇದ್ದು, ಗ್ರಾಹಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲು ಹಲವು ಯೋಜನೆಯನ್ನು ತಂದಿದೆ ಎಂದು ಮಾಹಿತಿ ನೀಡಿದರು.

ರಾಸುಗಳಿಗೆ ಕಾಲುಬಾಯಿ ರೋಗ ವಿರೋಧಿ ಲಸಿಕೆಯಂತಹ ಚಿಕಿತ್ಸೆಗಳನ್ನು ಮಾಡಿಸಲು ಮುಂದಾಗಬೇಕು. ಸಣ್ಣ ಕಾಯಿಲೆ ಬಂದರೂ ತಪ್ಪದೆ ಪಶುವೈದ್ಯರನ್ನು ಕಂಡು ಕೊಬ್ಬಿನಾಂಶ ಹೆಚ್ಚಿಸಲು ರಾಸುಗಳಿಗೆ ಶೇ.20ರಷ್ಟು ಕೈತಿಂಡಿ, ಶೇ.80ರಷ್ಟು ಒಣ, ಹಸಿ ಹುಲ್ಲು ನೀಡಿ ಉತ್ತಮ ತಳಿಯ ರಾಸುಗಳಿಗೆ ಆದ್ಯತೆ ನೀಡಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಆಯವ್ಯಯ, ಬಜೆಟ್ ಮಂಡನೆ ಕುರಿತು ಚರ್ಚಿಸಿ ಅನುಮೋದಿಸಲಾಯಿತು. ಡೇರಿ ಉಪಾಧ್ಯಕ್ಷ ಆರ್. ವಾಸುದೇವ, ನಿರ್ದೇಶಕರಾದ ಮಂಜೇಗೌಡ, ಪುಟ್ಟಣ್ಣಯ್ಯ, ನಾಗರಾಜಶೆಟ್ಟಿ, ತಮ್ಮಣ್ಣ, ಪರಮೇಶ್, ಮೋಹನ್, ಕೆ.ಟಿ.ರಮೇಶ್, ಪೂರ್ಣಿಮಾ, ಮೀನಾಕ್ಷಿ, ಪಲ್ಲವಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶೇಖರ್, ಜೆಡಿಎಸ್ ಮುಖಂಡ ಐಕನಹಳ್ಳಿ ಕೃಷ್ಣೇಗೌಡ ಮತ್ತಿತರರಿದ್ದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ