ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಿಡಿಹಬ್ಬದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾವೈಕ್ಯತೆ ಸಂಕೇತವಾಗಿ ಆಚರಿಸುವ ಸಿಡಿಹಬ್ಬದಲ್ಲಿ ಒಂದೊಂದು ಜವಾಬ್ದಾರಿಯೊಂದಿಗೆ ಹಬ್ಬ ನಡೆಯುವುದರಿಂದ ನಿಯಮಬದ್ಧ ಆಚರಣೆಗೆ ಅನುವು ಮಾಡಿಕೊಡಬೇಕೆಂದರು.
ಸಿಡಿಹಬ್ಬದ ಪ್ರಮುಖ ಆಕರ್ಷಣೆ ಘಟ್ಟ ಮೆರವಣಿಗೆಯಲ್ಲಿ ಸಮಯ ನಿಗಧಿಪಡಿಸಲಾಗಿದೆ, ಪೇಟೆ ಒಕ್ಕಲಕೇರಿ ಬೀದಿ ರಾತ್ರಿ 9 ರಿಂದ 10, ಸಿದ್ಧಾರ್ಥನಗರ ಘಟ್ಟ 10 ರಿಂದ 12, ಕೀರ್ತಿ ನಗರ 12 ರಿಂದ 1, ಗಂಗಾಮತ ಬೀದಿ 1ರಿಂದ 3, ಅಶೋಕ್ನಗರ ಚಿಕ್ಕಪಾಲು 3ರಿಂದ 4.15, ಅಶೋಕ್ನಗರ ದೊಡ್ಡಪಾಲು 4.15ರಿಂದ 5.15, ಬಸವಲಿಂಗಪ್ಪ ನಗರ 5.15ರಿಂದ 6 ಗಂಟೆಯೊಳಗೆ ಎಲ್ಲಾ ಘಟ್ಟಗಳ ಮೆರವಣಿಗೆ ನಡೆಯಬೇಕು. ಸಿಡಿ ಮುಗಿದ ನಂತರ ಸಂಪ್ರದಾಯದಂತೆ ಕೊಂಡೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.ಡಿವೈಎಸ್ಪಿ ಎಸ್.ಬಿ.ಯಶ್ವಂತ್ ಕುಮಾರ ಮಾತನಾಡಿ, ಘಟ್ಟ ಮೆರವಣಿಗೆ ಹಾಗೂ ಸಿಡಿ ಎಳೆಯುವುದು ಹಬ್ಬದಲ್ಲಿ ವಿಶೇಷವಾಗಿದೆ. ಹೆಚ್ಚಿನ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಸಂಭ್ರಮದಿಂದ ಆಚರಿಸುವ ಹಬ್ಬದಲ್ಲಿ ಪ್ರತಿಯೊಬ್ಬರೂ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿದರೆ ಪೊಲೀಸ್ ಇಲಾಖೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ನಿಗಧಿತ ಸಮಯದೊಳಗೆ ಎಲ್ಲಾ ಘಟ್ಟ ಮೆರವಣಿಗೆ ಮುಗಿಯಬೇಕು. ಹಬ್ಬದಲ್ಲಿ ಸ್ಥಳೀಯರಿಗೆ ಪರಿಚಯ ಇರುವ ಪೊಲೀಸ್ ಅಧಿಕಾರಿಗಳನ್ನು ಮುಖ್ಯ ಸ್ಥಳಗಳಲ್ಲಿ ನೇಮಿಸಲಾಗುವುದು ಎಂದರು.ಅಗ್ನಿಶಾಮಕ ದಳ, ತಾಲೂಕು ವೈದ್ಯಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು, ಚೆಸ್ಕಾಂ ಇಲಾಖೆ, ಪುರಸಭೆ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದ್ದಾರೆ. ಪೊಲೀಸರು ಸಹಕಾರ ನೀಡಬೇಕೆಂದು ಕೋರಿದರು.
ಮುಖಂಡ ವೀರೇಗೌಡ ಮಾತನಾಡಿ, ಐತಿಹಾಸಿಕ ಸಿಡಿ ಹಬ್ಬವನ್ನು ಯಶಸ್ವಿಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಹಬ್ಬದ ಅಂಗವಾಗಿ ಸಮರ್ಪಕ ನೀರು, ಹೆಚ್ಚಿನ ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಪ್ರವಾಸಿ ಮಂದಿರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಕೂಡಲೇ ಸರಿಪಡಿಸಬೇಕು ಎಂದರು.
ಕನಕಪುರ ಮುಖ್ಯರಸ್ತೆಯ ಟೋಲ್ ಗೇಟ್ ಬಳಿ ಶನೇಶ್ವರ ದೇವಸ್ಥಾನದಿಂದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬರಲು ರಸ್ತೆ ದಾಟುವ ವೇಳೆ ಅಪಘಾತಗಳು ಸಂಭವಿಸುತ್ತಿದ್ದು, ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಆಹಾರ ಇಲಾಖೆಯಿಂದ ಮುಂಚಿತವಾಗಿ ಪಡಿತರ ಆಹಾರ ಪೂರೈಕೆ ಮಾಡಬೇಕು. ಆಯಾ ಸಮುದಾಯದ ಯಜಮಾನರು ಜವಾಬ್ದಾರಿ ತೆಗೆದುಕೊಂಡು ಹಬ್ಬದ ಯಶಸ್ಸಿಗೆ ಶ್ರಮಿಸಬೇಕೆಂದು ಹೇಳಿದರು.ಇದೇ ವೇಳೆ ಹಬ್ಬಗಳ ಅಂಗವಾಗಿ ಪಟ್ಟಣದ ಎಲ್ಲಾ ಸಮುದಾಯ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ತಹಸೀಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ಮುಖಂಡರಾದ ಪಟೇಲ್ ಕಿರಣ್ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.